ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

7500 ಬಾಳೆ ಗಿಡಗಳು ಗೊನೆ ಬಿಟ್ಟಿದ್ದು, ಪ್ರತಿ ಗಿಡ ಸರಾಸರಿ 30ಕೆ.ಜಿಯ ತೂಕದ ಗೊನೆ ಹೊಂದಿದೆ.

Team Udayavani, Sep 26, 2022, 6:04 PM IST

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ಆಳಂದ: ಹಳದಿ ಕಲ್ಲಂಗಡಿ ಬೆಳೆದು ಗಮನ ಸೆಳೆದಿದ್ದ ತಾಲೂಕಿನ ಕೊರಳ್ಳಿ ಗ್ರಾಮದ ಯುವ ರೈತ ಬಸವರಾಜ ಎಸ್‌. ಪಾಟೀಲ ಈಗ ತಾಂತ್ರಿಕತೆ ಅಳವಡಿಸಿ ಬೆಳೆದ ಬಾಳೆಗೊನೆಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ. ಒಟ್ಟು 25 ಎಕರೆ ಪ್ರದೇಶದ ಪೈಕಿ 17 ಎಕರೆಯಲ್ಲಿ ಬಾಳೆ ಬೆಳೆಯಲಾಗಿದೆ. ಈ ಪೈಕಿ ಸದ್ಯ ಏಳು ಎಕರೆ ಬೆಳೆ ವಿದೇಶಕ್ಕೆ ಹಾಗೂ 10 ಎಕರೆಯಲ್ಲಿ ಬೆಳೆದ ಬಾಳೆಯನ್ನು ಸ್ಥಳೀಯ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ.

17 ಎಕರೆ ಪ್ರದೇಶದಲ್ಲಿ ಹಂತಹಂತವಾಗಿ ಬಾಳೆ ಕೈಗೆ ಬರತೊಡಗಿದೆ. ಜಿ-9 ತಳಿಯ ಬಾಳೆಯನ್ನು ಆಧುನಿಕ ಪದ್ಧತಿ ಅನುಸರಿಸಿ ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಐದು ಅಡಿ ಅಂತರಕ್ಕೆ ನಾಟಿ ಮಾಡಲಾಗಿದೆ. ಜತೆಗೆ ಹನಿ ನೀರಾವರಿ ಮಲ್ಚಿಂಗ್‌ ಶೀಟ್‌ ಆಳವಡಿಸಿ ನಿರ್ವಹಣೆ ಮತ್ತು ಕಳೆ ನಿರ್ವಹಣೆಗೂ ಪೂರಕವಾಗುವಂತೆ ಮಾಡಿ ಖರ್ಚಿನ ಉಳಿತಾಯ ಮಾಡಿದ್ದಾರೆ. ಅಲ್ಲದೇ ಮಿಶ್ರ ಬೆಳೆಯಾಗಿ ಹಳದಿ ಕಲ್ಲಗಂಡಿ ಬೆಳೆದು ಏಳು ಲಕ್ಷ ರೂ. ಆದಾಯ ಪಡೆದಿದ್ದಾರೆ.

ಬೆಳೆ ನಿರ್ವಹಣೆಗೆ ಕಾಲ ಕಾಲಕ್ಕೆ ಬೇಕಾದ ಔಷಧ, ರಸಗೊಬ್ಬರ, ಕೀಟನಾಶಗಳ ಜತೆಗೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಕಂಪನಿ ಬಳಿ ತಾಂತ್ರಿಕ ಮಾಹಿತಿ, ಸಲಹೆ ಪಡೆಯಲಾಗುತ್ತಿದೆ.

ಬಾಳೆ ಬೆಳೆದು ದೊಡ್ಡದಾದ ಮೇಲೆ ನೈಸರ್ಗಿಕವಾಗಿ ಕಳೆದ ಸಾಲಿನಲ್ಲಿ ಗಾಳಿ-ಬಿರುಗಾಳಿಗೆ ಅಡ್ಡಬಿದ್ದು ಹಾನಿಯಾಗಿದ್ದನ್ನು ಮನಗಂಡು ಈ ಬಾರಿ ಗೊನೆ ತುದಿಯನ್ನು ಬಾಳೆಯ ಕಾಂಡಕ್ಕೆ ದಾರದಿಂದ ಹತ್ತಿರವಾಗಿ ಕಟ್ಟಿದ್ದಾರೆ. ಗೊಂಚಲು ಕಟಾವಿಗೆ ಬರುವ ಹೊತ್ತಿನಲ್ಲಿ ಬಾಳೆಗೆ ಖಾಸಗಿ ಕಂಪನಿ ತಜ್ಞರ ಮಾರ್ಗದರ್ಶನದಂತೆ ಪೋಷಕಾಂಶ ಸಿಂಪಡಿಸಿದ್ದರಿಂದ ಅತ್ಯುತ್ತಮ ಮತ್ತು ಗುಣಮಟ್ಟದ ಕಾಯಿಕಟ್ಟಿವೆ. ಪರಿಣಾಮ ಈ ಬಾಳೆಯನ್ನು ರಫ್ತು ಮಾಡಲು ಸೊಲ್ಲಾಪುರದ ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ.

ಪ್ರತಿ ಕೆಜಿಗೆ 20ರೂ.ಗಳಂತೆ ದರ ನಿಗದಿ ಮಾಡಿ ಎಕರೆ ಗುಣಮಟ್ಟದ್ದು ರಫ್ತು ಹಾಗೂ 10 ಎಕರೆ ಸ್ಥಳೀಯ ಮಾರುಕಟ್ಟೆ ಪೂರೈಸುತ್ತಿದ್ದಾರೆ. ಸರಾಸರಿ ಆರು ಎಕರೆಗೆ ನೋಡುವುದಾದರೆ, 7500 ಬಾಳೆ ಗಿಡಗಳು ಗೊನೆ ಬಿಟ್ಟಿದ್ದು, ಪ್ರತಿ ಗಿಡ ಸರಾಸರಿ 30ಕೆ.ಜಿಯ ತೂಕದ ಗೊನೆ ಹೊಂದಿದೆ.

ಗಿಡವೊಂದಕ್ಕೆ ಕನಿಷ್ಟ 500ರೂ, 550ರೂ. ಹೀಗೆ 7500 ಗಿಡದಿಂದ ಸುಮಾರು 35ಲಕ್ಷ ರೂ. ಲಾಭ ನಿರೀಕ್ಷಿಸಿರುವ ರೈತ ಪ್ರತಿ ಗಿಡಕ್ಕೆ 80ರಿಂದ 100ರೂ.ದಂತೆ ಖರ್ಚು ಮಾಡಿದ್ದಾರೆ. ಆದರೆ ಸ್ಥಳೀಯ ಮಾರುಕಟ್ಟೆಗೆ ಸಾಗಿಸುವ ಬಾಳೆಗೆ ಕೆಜಿಗೆ 10ರಿಂದ 11ರೂ. ಮಾತ್ರ ಬೆಲೆ ದೊರಕುತ್ತದೆ.

ರೈತ ಬಸವರಾಜ ಪಾಟೀಲ ಹಳದಿ ಕಲ್ಲಂಗಡಿ ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಹೊಸ ತಂತ್ರಜ್ಞಾನ ಅಳವಡಿಸುವಲ್ಲಿ ಮುಂದಿದ್ದಾರೆ. ಇದರ ಫಲವಾಗಿ ರಫ್ತಿನ ಗುಣಮಟ್ಟದ ಬಾಳೆ ಉತ್ಪಾದಿಸಿ ಹೆಚ್ಚಿನ ಬೆಲೆ ಪಡೆದು ಇತರ ಬಾಳೆ ಬೆಳೆಯುವ ರೈತರಿಗೆ ಮಾದರಿಯಾಗಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ನಾಲ್ಕು ಎಕರೆ ಪ್ರದೇಶಕ್ಕೆ ಆಗುವಷ್ಟು ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
ಶಂಕರಗೌಡ ಪಾಟೀಲ, ಸಹಾಯಕ ತೋಟಗಾರಿಕೆ ಹಿರಿಯ ನಿರ್ದೇಶಕ, ಆಳಂದ

ಒಟ್ಟು 25 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆಗೆ ಹನ್ನೊಂದು ಲಕ್ಷ ರೂ. ಖರ್ಚಾಗಿದೆ. ಕಳೆದ ಬಾರಿ ಬಾಳೆ ಗೊನೆ ಮುರಿದು ಹಾನಿಯಾದರೂ ಈ ಬಾರಿ ಬಿಡದೆ ಟೆಂಬೋಣಿ ಹಾಗೂ ರಫ್ತು ಮಾಡುವರ ಸಲಹೆ ಪಡೆದು ಯಶಸ್ವಿಯಾಗಿದ್ದೇನೆ.
ಬಸವರಾಜ ಪಾಟೀಲ,
ರೈತ ಕೊರಳ್ಳಿ

ಮಹಾದೇವ ವಡಗಾಂವ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

1-weeqw

PU Exam ನಕಲು ಮಾಡಲು ಸಹಕಾರ ನೀಡಿಲ್ಲವೆಂದು ಪೇದೆ‌ ಮೇಲೆಯೇ ಹಲ್ಲೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.