ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಸೂತ್ರಧಾರಿ
Team Udayavani, Aug 15, 2017, 11:16 AM IST
ಆಳಂದ: ಭಗವದ್ಗೀತೆ ಭಾರತ ಚಿಂತನೆಯ ಪರಂಪರೆಯ ತಾಯಿ ಬೇರು. ಇದನ್ನು ಬೋಧಿ ಸಿದ ಶ್ರೀಕೃಷ್ಣ ಸಮಸ್ತ ಜೀವಕೋಟಿಗೆ ಅಭಯ ನೀಡಿದ್ದಾನೆ. ಅವನ ವಂಶಜರು ಶಿಕ್ಷಣ, ಸಂಘಟನೆ, ಸಾಮಾಜಿಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿ ಸಲು ಪ್ರಯತ್ನಿಸಬೇಕು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು. ಪಟ್ಟಣದ ಗುರುಭವನ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಮಾತ್ಮನಾದ ಶ್ರೀಕೃಷ್ಣ ಲೋಕಕಂಟಕ ನಿವಾರಣೆಗೆ ಮತ್ತು ಲೋಕ ಕಲ್ಯಾಣಕ್ಕಾಗಿ ಅವತರಿಸಿರುವ ಸೂತ್ರಧಾರಿ. ಮಹಾಭಾರತ ಎಂಬ ನದಿ
ನಾವಿಕನಾಗಿ ವಿಶ್ವಕ್ಕೆ ಅಮೂಲ್ಯ ನಿಧಿಯಾದ ಭಗವದ್ಗೀತೆ ಉಪದೇಶಿಸಿದವನೇ ಶ್ರೀಕೃಷ್ಣ. ಭಗವದ್ಗೀತೆ ಭಾರತ ಚಿಂತನಾ
ಪರಂಪರೆಯ ತಾಯಿಬೇರು. ಕೃಷ್ಣ ಜನ್ಮಾಷ್ಟಮಿ ಹಿಂದುಗಳಲ್ಲಿ ಆಚರಿಸುವ ಒಂದು ಪವಿತ್ರ ಹಬ್ಬದ ದಿನವಾಗಿದೆ. ಇದು ಅಧರ್ಮ ಓಡಿಸಿ ಧರ್ಮ ರಕ್ಷಿಸುವ ಸಲುವಾಗಿ ಶ್ರೀಕೃಷ್ಣ ಜನಿಸಿದ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತಾಪಂ
ಕಾರ್ಯನಿರ್ವಾಹಕ ಅಧಿ ಕಾರಿ ಡಾ| ಸಂಜಯ ರೆಡ್ಡಿ ಮಾತನಾಡಿ, ಶ್ರೀಕೃಷ್ಣನ ಆದರ್ಶ ಮೈಗೂಡಿಸಿಕೊಂಡು ಯಾದವ (ಗೊಲ್ಲ) ಸಮುದಾಯದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸರ್ಕಾರಿ ಸೌಲಭ್ಯ ಪಡೆಯಬೇಕು ಎಂದು ಹೇಳಿದರು. ಉಪನ್ಯಾಸಕ ಸಂಜು ಪಾಟೀಲ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿ ಕಾರಿ ಚಂದ್ರಕಾಂತ ಪಾಟೀಲ, ಪಿಎಸ್ಐ ಸುರೇಶ ಬಾಬು, ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಮುಖಂಡ ದಯಾನಂದ ಶೇರಿಕಾರ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗೊಲ್ಲ ಸಮುದಾಯದ ಮುಖಂಡ ಯಲ್ಲಪ್ಪ ಸಾವಳೆ, ಯಲ್ಲಪ್ಪ ಬಿ. ಸಾವಳೆ, ಸುರೇಶ ವರನಾಳೆ, ಭೀಮಶಾ ಮಾರವಾಡಿ, ರಾಮ ಸಾವಳೆ, ಯಂಕಪ್ಪ ಇರೊಳೆ
ಇದ್ದರು. ಪ್ರಹ್ಲಾದ ಶಿಂಧೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಪ್ರಮುಖ ರಸ್ತೆಗಳ ಮೂಲಕ ಕುಂಬ ಕಳಸದೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?