ಶೌಚ ಗೃಹ ಇಲ್ಲದ ಸ್ಥಳದಲ್ಲಿ ಜನರ ಕ್ವಾರಂಟೈನ್‌!

ಬಾಟಲಿಯಲ್ಲಿ ಮೂತ್ರ ಮಾಡುವ ದುಸ್ಥಿತಿ

Team Udayavani, May 22, 2020, 5:46 AM IST

ಶೌಚ ಗೃಹ ಇಲ್ಲದ ಸ್ಥಳದಲ್ಲಿ ಜನರ ಕ್ವಾರಂಟೈನ್‌!

ಸೇಡಂ: ದುಗನೂರು ಗ್ರಾಮದ ಕ್ವಾರಂಟೈನ್‌ ಕೇಂದ್ರದಲ್ಲಿರುವ ಶೌಚಾಲಯಕ್ಕೆ ಫ್ಲೆಕ್ಸ್‌ಗಳ ಪರದೆ ಹಾಕಿರುವುದು.

ಸೇಡಂ: ಇಲಿಗೆ ಹೆದರಿ ಹುಲಿ ಬೋನಿಗೆ ಬಿದ್ದಂತಾಗಿದೆ ತಾಲೂಕಿನ ಕೋವಿಡ್‌-19 ಕ್ವಾರಂಟೈನ್‌ ಕೇಂದ್ರದಲ್ಲಿರುವ ಜನರ ಬದುಕು. ಹೌದು. ಹೊರ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದವರು ಈಗ ಕೋ ಮಹಾಮಾರಿಗೆ ಹೆದರಿ ತವರಿಗೆ ಬಂದಿದ್ದು, ಅವರಲ್ಲಿ ಸಂತಸಕ್ಕಿಂತ ಅಸೂಯೆ ಮನೆ ಮಾಡಿದೆ. ಹೊಟ್ಟೆಗೆ ಅನ್ನ, ನೀರು ಹಾಕುವ ಸರ್ಕಾರ ಶೌಚಕ್ಕೆ ವ್ಯವಸ್ಥೆ ಮಾಡುವಲ್ಲಿ ಎಡವಿರುವುದು ತಾಲೂಕಿನಲ್ಲಿರುವ ಬಹುತೇಕ ಕ್ವಾರಂಟೈನ್‌ ಕೇಂದ್ರಕ್ಕೇ ಭೇಟಿ ನೀಡಿದರೆ ಅರಿವಾಗುತ್ತದೆ.

ತಾಲೂಕಿನಾದ್ಯಂತ 53 ಕ್ವಾರಂಟೈನ್‌ ಕೇಂದ್ರಗಳಲ್ಲಿ 1,523 ಜನರನ್ನು ಇರಿಸಲಾಗಿದೆ. ಆದರೆ ಬಹುತೇಕ ಕೇಂದ್ರಗಳಲ್ಲಿ ಶೌಚಾಲಯಗಳ ಕೊರತೆ ಇದೆ. ಹೆಚ್ಚಿನ ಜನರನ್ನು ಕ್ವಾರಂಟೈನ್‌  ಮಾಡಿರುವ ಮುಧೋಳ, ಮೋತಕಪಲ್ಲಿ, ಕೋಡ್ಲಾ, ದುಗನೂರು ಇನ್ನುಳಿದ ಕಡೆ ಸೂಕ್ತ ಶೌಚಾಲಯಗಳಿಲ್ಲದೆ ಜನರ ಅಕ್ಕ-ಪಕ್ಕದ ಜಮೀನುಗಳನ್ನು ಅವಲಂಬಿಸಿದ್ದಾರೆ.

ಹಗಲಲ್ಲೇ ಬಯಲಿಗೆ ಹೋಗಲಾಗದ ಮಹಿಳೆಯರು ಬಾಟಲಿಗಳಲ್ಲಿ ಮೂತ್ರ ಮಾಡಿ ಎಸೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಸಹ ತಾಲೂಕು ಆಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬುದು ಅಲ್ಲಿರುವ ಜನರ ಆರೋಪ. ದುಗನೂರು ಪ್ರೌಢಶಾಲೆಯಲ್ಲಿರುವ ಶೌಚಾಲಯ ನಾಮಕೆವಾಸ್ತೆ ಎಂಬಂತಿವೆ. ಅಳಿದುಳಿದ ಶೌಚಾಲಯ ಕಟ್ಟಡಕ್ಕೆ ಬಾಗಿಲುಗಳಿಲ್ಲ. ಪ್ರಚಾರಕ್ಕೆ ಬಳಸುವ ಫ್ಲೆಕ್ಸ್‌ಗಳನ್ನು ಪರದೆ ರೀತಿಯಲ್ಲಿ ಕಟ್ಟಿ ಶೌಚಾಲಯ ಬಳಸುವಂತಾಗಿದೆ. ಮೋತಕಪಲ್ಲಿಯಲ್ಲಿರುವ ಕೇಂದ್ರಗಳ ಪೈಕಿ ಒಂದರಲ್ಲಿ ಶೌಚಾಲಯವಿದೆ. ಆದರೆ ಬಳಕೆಗೆ ಯೋಗ್ಯವಿಲ್ಲ. ಇನ್ನೊಂದರಲ್ಲಿ ಹತ್ತಾರು ಜನರಿಗೆ ಎರಡು ಶೌಚಗೃಹಗಳಿವೆ. ಕೋಣೆಗಳಲ್ಲಿ ಫ್ಯಾನ್‌ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರು ರಾತ್ರಿ ಹೋರಾಂಗಣದಲ್ಲೇ ನಿದ್ರಿಸುವಂತಾಗಿದೆ.

100ಕ್ಕೂ ಅಧಿಕ ಜನರಿರುವ ಮುಧೋಳ ಗ್ರಾಮದ 6 ಕೇಂದ್ರಗಳ ಪೈಕಿ ಮೂರರಲ್ಲಿ ಶೌಚಾಲಯಗಳಿಲ್ಲ. ಇರುವ ಹೊಸ ಶೌಚಾಲಯಗಳು ಲಾಕ್‌ ಮಾಡಲಾಗಿದೆ. ಜೊತೆಗೆ ಸಂಜೆಯಾದರೆ ಗ್ರಾಮದ ನೂರಾರು ಜನ ಕ್ವಾರಂಟೈನ್‌ ನಲ್ಲಿರುವವರನ್ನು ಭೇಟಿಯಾಗಿ, ಆಹಾರ ತಂದು ಕೊಡುತ್ತಿದ್ದಾರೆ. ಪೊಲೀಸ್‌ ಠಾಣೆ ಪಕ್ಕದಲ್ಲೇ ಕೇಂದ್ರವಿದ್ದರೂ ಈ ರೀತಿ ಕಾನೂನು ಉಲ್ಲಂಘನೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಬಹುತೇಕ ಕೇಂದ್ರಗಳಿಗೆ ನಿತ್ಯ ಹೊರಗಿನವರು ಬಂದು ಭೇಟಿ ನೀಡುವುದು ಸಾಮಾನ್ಯ ಎನ್ನಲಾಗಿದೆ.

ಶೌಚಾಲಯಗಳಿಲ್ಲದ ಕ್ವಾರಂಟೈನ್‌ ಕೇಂದ್ರಗಳನ್ನು ಗುರುತಿಸುವುದರ ಜತೆಗೆ ಇದ್ದ ಶೌಚಗೃಹಗಳ ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಸಮಸ್ಯೆಯಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಸಹ ಅನೇಕ ಕೇಂದ್ರಗಳನ್ನು ವೀಕ್ಷಿಸಿದ್ದೇವೆ. –ಬಸವರಾಜ ಬೆಣ್ಣೆಶಿರೂರ, ಸೇಡಂ ತಹಶೀಲ್ದಾರ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.