ನೀರಿಗೆ ಮೈಲುಗಟ್ಟಲೇ ಅಲೆದಾಟ
ಭೀಮಾ ನದಿ ದಡದ ಹಲವು ಹಳ್ಳಿ ಗಳಲ್ಲೂ ನೀರಿಗೆ ಹಾಹಾಕಾರ
Team Udayavani, Jun 5, 2020, 6:53 AM IST
ಅಫಜಲಪುರ: ತಾಲೂಕಿನಲ್ಲಿ ಕಳೆದ ಮಳೆಗಾಲದಿಂದ ಹಿಡಿದು ಇಲ್ಲಿಯವರೆಗೆ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಹಳ್ಳಿ ಜನ ನಿತ್ಯ ನೀರಿಗಾಗಿ ಪರದಾಡುವ ಪರಿಸ್ಥಿತಿ ಹಾಗೆಯೇ ಇದೆ.
ತಾಲೂಕಿನ ರೇವೂರ(ಕೆ), ರೇವೂರ(ಬಿ), ಬಳೂರ್ಗಿ, ಬಡದಾಳ, ಮಲ್ಲಾಬಾದ, ಸ್ಟೇಷನ್ ಗಾಣಗಾಪುರ, ಕೋಗನೂರ, ಅಂಕಲಗಿ, ಗೊಬ್ಬೂರ(ಬಿ), ಕರ್ಜಗಿ, ಮಾಶಾಳ,ಚಿಣಮಗೇರಾ, ಹೊಸೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಈ ಗ್ರಾಮಗಳ ಜನ ನಿತ್ಯ ಮೈಲಿಗಟ್ಟಲೇ ಕೊಡ, ಬಿಂದಿಗೆ ಹಿಡಿದು ಬಿಸಿಲಲ್ಲಿ ಅಲೆದಾಡಿದರು ನೀರು ಸಿಗೋದಿಲ್ಲ. ಇಷ್ಟು ಮಾತ್ರವಲ್ಲದೆ ತಾಲೂಕಿನಲ್ಲಿರುವ ಭೀಮಾ ನದಿ ದಡದ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಉದ್ಭವವಾಗಿದೆ.
ನದಿ ಇದ್ದರೂ ನೀರಿಲ್ಲದಂತಾಗಿ ಜನ ಕಂಗಾಲಾಗಿದ್ದಾರೆ. ನದಿ ಇಲ್ಲದ ಕಡೆಯಂತು ಜನಸಾಮಾನ್ಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ತಾಲೂಕಿನಲ್ಲಿ ಇಷ್ಟೆಲ್ಲ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದ್ದರೂ ಕೂಡ ತಾಲೂಕಿನ ಜನಪ್ರತಿನಿ ಧಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ತಾಪಂ, ಗ್ರಾಪಂ ಸಂಬಂಧಿಸಿದವರು ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ. ಜನಸಾಮಾನ್ಯರ ಕಷ್ಟ ಕೇಳಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಬಾರಿಯ ಮಳೆಗಾಲ ಉತ್ತಮವಾಗಿ ಆಗದಿದ್ದರೆ ಬರುವ ವರ್ಷ ಭೀಕರ ಬರಗಾಲ ಆವರಿಸೋದು ಪಕ್ಕಾ.
ನಾವು ದಿನಾ ತಳ್ಳು ಬಂಡಿಯೊಳಗ್ 10 ಕೊಡಗೊಳ್ ಇಟಗೊಂಡು 4 ಕಿಲೋ ಮಿಟರ್ ದೂರದಿಂದ ನೀರ್ ತರಬೇಕ್ರಿ, ಇಲ್ಲಾಂದ್ರ ನಾವು ಬಾಯಿ ಒಣಗಸ್ಕೊಂಡು ಕುಂದರಬೇಕಾತದ್ರಿ. -ಗೊಬ್ಬೂರ(ಬಿ) ಗ್ರಾಮಸ್ಥರು.
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ