ಲಕ್ಷ ದೀಪೋತ್ಸವ ಸಂಭ್ರಮ
Team Udayavani, Sep 30, 2018, 10:56 AM IST
ಕಲಬುರಗಿ: ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಸಂಜೆ ಶ್ರೀ ಸತ್ಯಪ್ರಮೋದತೀರ್ಥರ ಜನ್ಮ ಶತಮಾನೋತ್ಸವ ನಿಮಿತ್ತ ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ ಲಕ್ಷ ದೀಪೋತ್ಸವ ಆಯೋಜಿಸಲಾಗಿತ್ತು. ಮಹಾನಗರ ಸೇರಿದಂತೆ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡು ದೀಪ ಬೆಳಗಿದರು.
ಲಕ್ಷ ದೀಪೋತ್ಸವಕ್ಕೂ ಮುನ್ನ ಬ್ರಹ್ಮಪುರ ಉತ್ತರಾದಿ ಮಠದ ಶ್ರೀ ವಿಠuಲ ರುಕ್ಮಿಣಿ ಮಂದಿರದಿಂದ ನೂತನ ವಿದ್ಯಾಲಯ ಮೈದಾನದವರೆಗೆ ನಡೆದ ಶ್ರೀ ಸತ್ಯಪ್ರಮೋದತೀರ್ಥರ ಪಾದುಕೆ ಮೆರವಣಿಗೆ ಗಮನ ಸೆಳೆಯಿತು. ಈ ವೇಳೆ ಶ್ರೀ ಸತ್ಯಪ್ರಮೋದತೀರ್ಥ ಮಹಾರಾಜ ಕಿ ಜೈ, ಹರಿಸರ್ವೋತ್ತಮ ವಾಯು ಜೀವೋತ್ತಮ, ಉತ್ತರಾದಿ ಮಠಕ್ಕೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಲಕ್ಷ ದೀಪೋತ್ಸವ ಹಾಗೂ ಮೆರವಣಿಗೆಯಲ್ಲಿ ಪಂ| ರಂಗಾಚಾರ್ಯ ಗುತ್ತಲ, ಉತ್ತರಾದಿ ಮಠದ ದಿವಾನ ಪಂ| ಶಶೀಧರಾಚಾರ್ಯ, ಹಿರಿಯ ವಿದ್ವಾಂಸ ಪಂ| ರಾಮಾಚಾರ್ಯ ಅವಧಾನಿ, ಪಂ| ಗೋಪಾಲಾಚಾರ್ಯ ಅಕಮಂಚಿ, ಪಂ| ಹಣಮಂತಾಚಾರ್ಯ ಸರಡಗಿ, ಪಂ| ವಿನೋದಾಚಾರ್ಯ ಸರಡಗಿ, ಪಂ| ವಿಷ್ಣುದಾಸಾಚಾರ್ಯ ಖಜೂರಿ, ಪಂ| ಡಾ| ಗುರುಮಧ್ವಾಚಾರ್ಯ ನವಲಿ, ಪಂ| ಗಿರೀಶಾಚಾರ್ಯ ಕೊಪ್ಪರ, ಪಂ| ಪ್ರಸನ್ನಾಚಾರ್ಯ ಜೋಶಿ, ಪಂ| ಗಿರೀಶಾಚಾರ್ಯ ಅವಧಾನಿ, ಪಂ| ಭೀಮಸೇನಾಚಾರ್ಯ ಜೋಶಿ, ಪಂ| ಶ್ರೀನಿವಾಸಾಚಾರ್ಯ ಪದಕಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಆನಂದ ತೀರ್ಥಾಚಾರ, ವಿಶ್ವ ಮಧ್ವ ಮಹಾಪರಿಷತ್ನ ಅರವಿಂದ ನವಲಿ, ರವಿ ಲಾತೂರಕರ್, ಡಾ| ಗಿರೀಶಾಚಾರ್ಯ ಗಲಗಲಿ, ವಿನುತ್ ಕುಲಕರ್ಣಿ, ರಘೋತ್ತಮ ಘಂಟಿ, ಜಯತೀರ್ಥ ಜೋಶಿ, ಅನಂತ ಕಾಮೇಗಾಂವ, ಅಭಿಜಿತ್ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ