ಇಎಸ್ಐ-ಜಯದೇವ ಆಸ್ಪತ್ರೆಗೆ ಶಾಸಕರ ಭೇಟಿ
Team Udayavani, Apr 28, 2020, 6:05 PM IST
ಕಲಬುರಗಿ: ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್, ಶಾಸಕರಾದ ಪ್ರಿಯಾಂಕ್ ಖರ್ಗೆ, ತಿಪ್ಪಣ್ಣಪ್ಪ ಕಮಕನೂರ ಸೋಮವಾರ ಸಂಜೆ ಇಲ್ಲಿನ ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೊವಿಡ್-19 ಪಾಸಿಟಿವ್ ರೋಗಿಗಳ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ಜತೆಗೆ ಶಂಕಿತರ ವಿವರಣೆ ಪಡೆದರು. ಕೊವೀಡ್ ರೋಗ ಪತ್ತೆಯ ಪ್ರಯೋಗಾಲಯ ಕಾರ್ಯ ನಿರ್ವಹಣೆ ಕುರಿತಾಗಿ ಸಮಗ್ರ ವಿವರಣೆ ಪಡೆದ ಶಾಸಕರು, ಪ್ರಯೋಗಾಲಯಕ್ಕೆ ಇನ್ನೂ ಯಾವ ಅಗತ್ಯ ಸೌಲಭ್ಯ ಬೇಕಾಗಿವೆ ಎಂಬುದನ್ನು ತಿಳಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ದೇಶದಲ್ಲೇ ಮೊದಲ ಕೊರೊನಾಗೆ ಬಲಿಯಾಗಿದ್ದು ಕಲಬುರಗಿಯಲ್ಲಿಯೇ ಆಗಿರುವುದರಿಂದ, ಜತೆಗೆ ಇಲ್ಲಿಯವರೆಗೆ ಆರು ಜನರು ಮೃತಪಟ್ಟಿರುವುದರಿಂದ ಈ ಸೋಂಕು ಹರಡುವುದನ್ನು ತಡೆಗಟ್ಟುವುದು ಎಲ್ಲರ ಮಹತ್ವದ ಜವಾಬ್ದಾರಿ ಆಗಿದೆ. ಹೀಗಾಗಿ ಇದರಲ್ಲಿ ವೈದ್ಯರ ಶ್ರಮಪ್ರಮುಖವಾಗಿ ಅಡಕವಾಗಿದೆ. ಸಾರ್ವಜನಿಕರು ಹೊರಗೆ ಬಾರದೇ ಇನ್ನು ಕೆಲವು ದಿನಗಳ ಕಾಲ ಮನೆಯಲ್ಲೇ ಇರುವ ಮುಖಾಂತರ ಲಾಕ್ಡೌನ್ಗೆ ಸ್ಪಂದಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಮಾಸ್ಕ್ ಧರಿಸಿ ಹೊರ ಬರಬೇಕು. ಜತೆಗೆ ಆಗಾಗ್ಗೆ ಕೈ ತೊಳೆದುಕೊಳ್ಳಬೇಕೆಂದು ಡಾ| ಅಜಯಸಿಂಗ್ ಮನವಿ ಮಾಡಿದರು.
ಆಸ್ಪತ್ರೆ ಮುಖ್ಯಸ್ಥರು ಕೊವಿಡ್-19 ಪಾಸಿಟಿವ್ ರೋಗಿಗಳ ಹಾಗೂ ಪ್ರಯೋಗಾಲಯ ಕುರಿತು ವಿವರಣೆ ನೀಡಿದರು. ಡಾ| ಕಿರಣ ದೇಶಮುಖ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು