ರಸ್ತೆ ಮೇಲೆ ಶವವಿಟ್ಟು ಪ್ರತಿಭಟನೆ
ದಲಿತರ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳಿಂದ ಮನವೊಲಿಕೆ
Team Udayavani, Feb 2, 2020, 10:41 AM IST
ಮಾದನ ಹಿಪ್ಪರಿ: ಸಮೀಪದ ದರ್ಗಾಶಿರೂರ ಗ್ರಾಮದಲ್ಲಿ ಡೊಂಬರ ಜನಾಂಗದವರು ಶವ ಹೂಳಲು ಸ್ಮಶಾನ ಭೂಮಿ ಇಲ್ಲದ ಕಾರಣ ಮಾದನ ಹಿಪ್ಪರಗಿ-ಆಳಂದ ರಸ್ತೆ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ದರ್ಗಾಶಿರೂರ ಗ್ರಾಮದ ರೂಪಾ ಶಂಕರ ಶಿಂದೆ (45) ಶುಕ್ರವಾರ ನಿಧನರಾಗಿದ್ದರು. ಸುಮಾರು
ಐದಾರು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ಹೋರಾಟ ಮಾಡುತ್ತ ಬಂದರೂ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಅವರಲ್ಲಿ ಯಾರಾದರೂ ಸತ್ತರೆ ಗ್ರಾಮದ ಕೆಲವರು ಹೊಲಗಳ ಬದುವಿನಲ್ಲಿ ಹೂಳುತ್ತ ಬಂದಿದ್ದರು. ಹೊಲಗಳ ಮಾಲೀಕರು ಇದಕ್ಕೆ ತಡೆಯೊಡ್ಡಿದರು. ನಂತರ ದಲಿತರ ಸ್ಮಶಾನ ಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗುತ್ತಿತ್ತು. ಈಗ ಅದಕ್ಕು ತಡೆಯೊಡ್ಡಿದ್ದರಿಂದ ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು.
ಸುಮಾರು ಒಂದು ತಾಸು ಆಳಂದ-ಸೊಲ್ಲಾಪುರ, ಅಕ್ಕಲಕೋಟ- ಸೊಲ್ಲಾಪುರಕ್ಕೆ ಹೋಗಿಬರುವ ಸಾರಿಗೆ ಸಂಸ್ಥೆ ಬಸ್ಸುಗಳು, ಲಾರಿಗಳು ರಸ್ತೆ ಮೇಲೆ ನಿಂತಿದ್ದವು. ಸ್ಥಳಕ್ಕೆ ನಿಂಬಾರಗಾ ಪೊಲೀಸ್ ಠಾಣೆ ಪಿಎಸ್ಐ ಸುರೇಶಕುಮಾರ, ಮಾದನ ಹಿಪ್ಪರಗಿ ಪೊಲೀಸ್ ಠಾಣೆ ಎಎಸ್ಐ ಮತ್ತು ಮಾದನ ಹಿಪ್ಪರಗಿ ನಾಡ ಕಾರ್ಯಾಲಯದ ಕಂದಾಯ ನೀರಿಕ್ಷಕ ಪ್ರಭುಲಿಂಗ ತಟ್ಟೆ ಸ್ಥಳಕ್ಕೆ ದೌಡಾಯಿಸಿ ಪ್ರತಿಭನಕಾರರನ್ನು ಮಾತನಾಡಿಸಿದರು.
ಸಮಸ್ಯೆ ಆಲಿಸಿದ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ರಸ್ತೆ ತಡೆ ತೆರವುಗೊಳಿಸಿದರು. ನಂತರ ದರ್ಗಾಶಿರೂರ ಗ್ರಾಮಕ್ಕೆ ಮೂರು ಎಕರೆ ಜಮೀನು ನೀಡುವ ಪ್ರಸ್ತಾವನೆ ಸಹಾಯಕ ಆಯುಕ್ತರ ಕಚೇರಿಯಲ್ಲಿದೆ. ಇದಕ್ಕೆ ಆಯುಕ್ತರ ಸಹಿ ಆಗುವುದಷ್ಟೇ ಬಾಕಿ ಇದೆ. ಆದ್ದರಿಂದ ಇದೊಂದು ಸಾರಿ ದಲಿತರ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಬೇಕು ಎಂದು ದಲಿತ ಮುಖಂಡರ ಮನವೊಲಿಸಿದರು. ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜಕುಮಾರ ಮುಲಗೆ ಡೊಂಬರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ