ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಪೂರಕ ಪರೀಕೆ
Team Udayavani, Feb 19, 2018, 10:19 AM IST
ವಾಡಿ: ಗಣಿತ ವಿಷಯ ಎಂದರೆ ಕೆಲ ವಿದ್ಯಾರ್ಥಿಗಳಿಗೆ ನೀರು ಕುಡಿದಷ್ಟೇ ಸರಳ. ಆದರೆ ಹಲವು ವಿದ್ಯಾರ್ಥಿಗಳಿಗೆ ಇದು
ಕಬ್ಬಿಣದ ಕಡಲೆ ಎಂಬ ಮಾತು ಜನಜನೀತ. ಶಿಕ್ಷಣ ಇಲಾಖೆ ನಡೆಸುವ 2018ನೇ ಸಾಲಿನ ಎಸ್ಎಸ್ ಎಲ್ಸಿ ವಾರ್ಷಿಕ ಪರೀಕ್ಷೆಗಳು ಇನ್ನೂ ಎರಡು ತಿಂಗಳು ದೂರ ಇರುವಾಗಲೇ ವಿದ್ಯಾರ್ಥಿಗಳು ಗಣಿತ ವಿಷಯದ ಪೂರಕ ಪರೀಕ್ಷೆ ಬರೆದರು.
ಅಖೀಲ ಭಾರತ ಶಿಕ್ಷಣ ಉಳಿಸಿ
ಸಮಿತಿ (ಎಐಎಸ್ಇಸಿ) ಸ್ಥಳೀಯ ಘಟಕದ ವತಿಯಿಂದ ರವಿವಾರ ಪಟ್ಟಣದ ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಸ್ಎಸ್ಎಲ್ಸಿ ಗಣಿತ ವಿಷಯದ ಪೂರಕ ಪರೀಕ್ಷೆಯಲ್ಲಿ ಪಟ್ಟಣದ ಒಟ್ಟು 13 ಪ್ರೌಢಶಾಲೆಗಳ 607 ವಿದ್ಯಾರ್ಥಿಗಳು ತಮ್ಮ ಗಣಿತ ಜ್ಞಾನವನ್ನು ಓರೆಗೆ ಹಚ್ಚಿದರು. ಶಿಕ್ಷಣ ಇಲಾಖೆ ಪರವಾನಿಗೆಯೊಂದಿಗೆ ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾಗಳ ಮಧ್ಯೆ ನಡೆದ ಪೂರಕ ಪರೀಕ್ಷೆ, ಅತ್ಯಂತ ಪಾರದರ್ಶಕತೆಯಿಂದ ಕೂಡಿತ್ತು. 22 ಕೊಠಡಿಗಳು ಪರೀಕ್ಷೆಗೆ ಬಳಕೆಯಾದರೆ, ಇಬ್ಬರು ಪರೀಕ್ಷಾ ಮೇಲ್ವಿಚಾರಕರು, ಮತ್ತಿಬ್ಬರು ಜಾಗೃತ ದಳವಾಗಿ ಒಟ್ಟು 30 ಜನ ಶಿಕ್ಷಕರು ಸೇವೆ ಸಲ್ಲಿಸಿದರು. ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ತೆಕಲಾ ಮೇರಿ, ಸಿಸ್ಟರ್ ಸೆಲಿನ್ ಪರೀಕ್ಷೆಗಾಗಿ ಒಂದು ದಿನ ಇಡೀ ಶಾಲೆಯನ್ನೆ ಬಿಟ್ಟುಕೊಟ್ಟಿದ್ದರು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ, ಗಣಿತ ಶಿಕ್ಷಕ ಆರ್.ಕೆ. ವೀರಭದ್ರಪ್ಪ, ಎಸ್ ಎಸ್ಎಲ್ಸಿ ಪರೀಕ್ಷೆ ಎಂದರೆ ಬಹುತೇಕ ಮಕ್ಕಳು ಹೆದರುತ್ತಾರೆ.
ಅವರಲ್ಲಿ ಮಾನಸಿಕ ದೈರ್ಯ ತುಂಬಲು, ಪರೀಕ್ಷೆ ಭಯ ನಿವಾರಣೆ ಮಾಡಲು ಮತ್ತು ಪರೀಕ್ಷೆ ನಿಯಮಗಳ ತಿಳಿವಳಿಕೆ
ಮೂಡಿಸಲು ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಭಯ ಮುಕ್ತವಾಗಿ ನಕಲು ರಹಿತ ಪರೀಕ್ಷೆ ಬರೆಸುವ ಉದ್ದೇಶ ಇದರ
ಹಿಂದಿದೆ. ಸರಕಾರ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಒತ್ತಾಸೆಯೊಂದಿಗೆ ಶಿಕ್ಷಣ ಉಳಿಸಿ ಸಮಿತಿ ಇಂತಹ ಕಾರ್ಯಕ್ರಮ ರೂಪಿಸುತ್ತಿದೆ. ಅನೇಕ ಶಿಕ್ಷಕರು ಸಮಿತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವಿವರಿಸಿದರು.
ಶಿಕ್ಷಣ ಉಳಿಸಿ ಸಮಿತಿ ಸ್ಥಳೀಯ ಸಂಚಾಲಕ ರಮೇಶ ಮಾಶಾಳಕರ, ಸಿಆರ್ಪಿ ಹೇಮಂತಕುಮಾರ ಬಿ.ಕೆ., ಶಿಕ್ಷಕರಾದ ಚಂದ್ರು, ರಾಘವೇಂದ್ರ, ಶರಣಬಸಪ್ಪ, ಶರಣು ದೋಶೆಟ್ಟಿ, ಸಾಯಬಣ್ಣ ನಾಟೀಕಾರ, ಶ್ರೀಶರಣ ಹೊಸಮನಿ,
ಮಲ್ಲಣ್ಣ ದಂಡಬಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ