ಶಿಕ್ಷಣ ಖಾತೆ ಸಚಿವ ಸರಾ ಮಹೇಶ-ಬೀದರ ಸಂಸದ ಭಗತ್ಸಿಂಗ್ ಖೂಬಾ!
Team Udayavani, Sep 15, 2018, 9:49 AM IST
ಮಾದನ ಹಿಪ್ಪರಗಿ: ರಾಜ್ಯದ ಶಿಕ್ಷಣ ಖಾತೆ ಸಚಿವ ಸ.ರಾ. ಮಹೇಶ ಮತ್ತು ಬೀದರ ಸಂಸದ ಭಗತ್ಸಿಂಗ್ ಖೂಬಾ!
ಹೌದು, ಮಾದನ ಹಿಪ್ಪರಗಿ ಹೊಸಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದಲ್ಲಿರುವ ಫಲಕದಲ್ಲಿರುವ ಮಾಹಿತಿ ಇದು.
ಮಕ್ಕಳ ಜ್ಞಾನಕ್ಕಾಗಿ ಶಾಲೆ ಕೋಣೆಯೊಂದರ ಫಲಕದಲ್ಲಿ ಜನಪ್ರತಿನಿಧಿಗಳು ಮತ್ತು ಅವರ ಹುದ್ದೆ ಬರೆಸಲಾಗಿದೆ.
ಆದರೆ ಅದರಲ್ಲಿ ಎರಡೂಮೂರು ತಪ್ಪುಗಳು ಇದ್ದರು ಸಹ ಶಿಕ್ಷಕರು ಗಮನಿಸಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಪ್ರಧಾಮಂತ್ರಿಗಳು ನರೇಂದ್ರ ಮೋದಿ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಮಾನವ ಸಂಪನ್ಮೂಲ ಮಂತ್ರಿಗಳು ಎಂದು ಬರೆಯಲಾಗಿದೆ. ಆದರೆ ಸಚಿವರ ಹೆಸರನ್ನು ಮಾತ್ರ ಬರೆಯದೆ ಖಾಲಿ ಬಿಡಲಾಗಿದೆ. ರಾಜ್ಯಪಾಲರ ಎಂಬಲ್ಲಿ ವಿ.ಆರ್. ವಾಲಾ, ಮುಖ್ಯಮಂತ್ರಿಗಳು ಎಂಬಲ್ಲಿ ಕುಮಾರಸ್ವಾಮಿ, ಶಿಕ್ಷಣ ಸಚಿವರು ಎಂಬಲ್ಲಿ ಸ.ರಾ. ಮಹೇಶ ಮತ್ತು ಲೋಕಸಭಾ ಸದಸ್ಯರು ಎಂಬಲ್ಲಿ ಭಗತ್ಸಿಂಗ್ ಖೂಬಾ ಎಂದು ಬರೆಯಲಾಗಿದೆ.
ಶಾಸಕರ ಹೆಸರನ್ನು ಸುಭಾಷ ಗುತ್ತೇದಾರ ಮತ್ತು ಜಿಪಂ ಸದಸ್ಯರ ಹೆಸರನ್ನು ಗುರುಶಾಂತ ಪಾಟೀಲ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಜಿಪಂ ಅಧ್ಯಕ್ಷರ ಹೆಸರನ್ನು ಸುವರ್ಣಾ ಮಾಲಾಜಿ ಎಂದು ಬರೆಯುವ ಬದಲು ಸೂವರ್ಣಾ ಮಾಲಾಜಿ ಎಂದು ಬರೆಯಲಾಗಿದೆ.
ರಾಜ್ಯದ ಶಿಕ್ಷಣ ಖಾತೆ ಸಚಿವರ ಹೆಸರು ಎನ್. ಮಹೇಶ ಮತ್ತು ಬೀದರ ಲೋಕಸಭಾ ಸದಸ್ಯರ ಹೆಸರು ಭಗವಂತ ಖೂಬಾ ಬರೆಯಬೇಕಾಗಿತ್ತು. ಆದರೆ ನೂರಾರು ಮಕ್ಕಳ ಮನಸ್ಸಿನಲ್ಲಿ ಸ.ರಾ. ಮಹೇಶ ಮತ್ತು ಭಗತ್ಸಿಂಗ್ ಖೂಬಾ ಎಂದೇ ಅಚ್ಚೊತ್ತಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು