ಕೈ ತಪ್ಪಿದ ಸಚಿವ ಸ್ಥಾನ:ಕಲಬುರಗಿಯಲ್ಲಿ ಅಜಯಸಿಂಗ್ ಅಭಿಮಾನಿಗಳ ಆಕ್ರೋಶ
Team Udayavani, Dec 23, 2018, 1:01 PM IST
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿ ಕ್ಷೇತ್ರದ ಶಾಸಕ ಡಾ| ಅಜಯ್ ಸಿಂಗ್ ಅವರಿಗೆ ಸ್ಥಾನಸಿಗದೇ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಜೇವರ್ಗಿ ಪಟ್ಟಣದಲ್ಲಿ ಏಕಾಏಕಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಾ| ಅಜಯಸಿಂಗ್ ಎರಡನೇ ಬಾರಿಗೆ ಶಾಸಕರಾಗಿದ್ದಾರಲ್ಲದೇ ಅವರ ತಂದೆ ದಿ. ಧರ್ಮಸಿಂಗ್ ಕ್ರಾಂಗ್ರೆಸ್ಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಧರ್ಮಸಿಂಗ್ ಅವರಿಂದು ಇದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಚಿವ ಸ್ಥಾನ ನೀಡದೇ ದ್ರೋಹ ಬಗೆಯಲಾಗಿದೆ. ಈಗಲಾದರೂ ಪರಿಸ್ಥಿತಿ ಅರಿತು ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸಿರಿ, ಸಿದ್ದಲಿಂಗರೆಡ್ಡಿ ಇಟಗಾ, ಚಂದ್ರಕಾಂತ ಯಂಕಂಚಿ, ರಹಿಮಾನ್ ಪಟೇಲ, ಬಹದ್ಧೂರ ರಾಠೊಡ, ಪ್ರಕಾಶ ಪುಲಾರೆ, ನೀಲಕಂಠ ಅವುಂಟಿ, ರವಿ ಕೋಳಕೂರ, ಬೆಣ್ಣೆಪ್ಪ ಕೊಂಬಿನ, ಸಕ್ರೆಪ್ಪಗೌಡ ಹರನೂರ, ತುಕಾರಾಮ ಚವ್ಹಾಣ ಗುಡೂರ, ತಿಪ್ಪಣ್ಣ ಕನಕ, ಶರಣು ಗುತ್ತೇದಾರ, ಬಸಣ್ಣ ಸರಕಾರ, ಬೀದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಇಮಾಮಸಾಬ್ ಭಾಗವಾನ ಮಿರ್ಚಿ, ಫಯಾಜ ಜಮಾದಾರ, ದೌಲಪ್ಪ ಮದನ, ಮಲ್ಲಿಕಾರ್ಜುನ ಕೆಲ್ಲೂರ, ಶ್ರೀಮಂತ ಧನಕರ್, ಮಲ್ಲಣ್ಣ ಕೊಡಚಿ, ಸುನಿಲ ಹಳ್ಳಿ, ಮಲ್ಲಮ್ಮ ಕೊಂಬಿನ, ಸಿದ್ಧು ಶರ್ಮಾ ಜನಿವಾರ, ದೇವಿಂದ್ರ ಮುದಬಾಳ, ಮರೆಪ್ಪ ಸರಡಗಿ, ಸಿದ್ರಾಮ ಕಟ್ಟಿ, ಭೀಮಾಶಂಕರ ಜನಿವಾರ, ಪ್ರಶಾಂತಗೌಡ ಮಾಲಿ ಪಾಟೀಲ ಜೈನಾಪೂರ, ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಷ ಸೇವಿಸಿದ ಯುವಕ
ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ಬೇಸರಗೊಂಡ ಅವರ ಅಭಿಮಾನಿಯೊಬ್ಬ ವಿಷ ಸೇವಿಸಿದ್ದಾನೆ. ಡಾ| ಅಜಯ್ಸಿಂಗ್ ಕಟ್ಟಾ ಅಭಿಮಾನಿಯಾಗಿರುವ 35 ವರ್ಷದ ಚಿಕ್ಕ ಜೇವರ್ಗಿ ಗ್ರಾಮದ ಮಹ್ಮದ್ ಜಿಲಾನಿ ಮುನ್ಸಿ ವಿಷ ಸೇವಿಸಿದ ಯುವಕ. ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಸೇವಿಸಿದ್ದಾನೆ. ಈತನೀಗ ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹ್ಮದ ಜಿಲಾನಿ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸ್ಪಂಧಿಸುತ್ತಿದ್ದು, ಎರಡೂಮೂರು ದಿನಗಳ ಕಾಲ ಸ್ಪಷ್ಟವಾಗಿ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡಿದ ಡಾ| ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ