ನಗರಸಭೆ ಆಡಳಿತಕ್ಕೆ ಬೇಕು ಸರ್ಜರಿ
Team Udayavani, Jan 27, 2018, 12:12 PM IST
ಶಹಾಬಾದ: ಪದೇ ಪದೇ ಚರಂಡಿ ತ್ಯಾಜ ವಸ್ತುಗಳಿಂದ ಕಟ್ಟಿಕೊಳ್ಳವುದು. ಚರಂಡಿಯಲ್ಲಿ ನೀರು ಹರಿಯದೇ ಮನೆಯ ಎದುರು ಮತ್ತು ರಸ್ತೆಯ ಮೇಲೆ ಹರಿದಾಡುವುದು. ಮೂಗು ಮುಚ್ಚಿಕೊಂಡು ಇದೇ ಕೊಳಚೆ ನೀರನ್ನೇ ದಾಟಿಕೊಂಡು ಹೋಗುವುದು ಇಲ್ಲಿನ ಜನರ ದಿನನಿತ್ಯದ ದಿನಚರಿಯಾಗಿದೆ. ಇದು ನಗರಸಭೆಯ ವ್ಯಾಪ್ತಿಯ ಬಹತೇಕ ವಾರ್ಡ್ಗಳಲ್ಲಿ ಕಂಡು ಬರುವ ಸಾನಾನ್ಯ ದೃಶ್ಯ.
ನಗರದ ಗಂಜ್ ಬಡಾವಣೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚರಂಡಿಯಲ್ಲಿ ಕಸಕಡ್ಡಿ, ಪ್ಲಾಸಿಕ್ ವಸ್ತುಗಳು ಸೇರಿಕೊಂಡು ನೀರು ಸರಾಗವಾಗಿ ಹರಿಯದ ಪರಿಣಾಮ ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಬಂದಿದೆ. ವಾರ್ಡ್ ನಂ.18ರಲ್ಲಿ ಬಡಾವಣೆಯ ಜನರು ನಿತ್ಯ ದುರ್ವಾಸನೆ ಸೇವಿಸಿಕೊಂಡೆ ಬದುಕಬೇಕಾಗಿದೆ. ಕಸ ವಿಲೇವಾರಿ, ಹೂಳು ತೆಗೆಯುವ ಕಾರ್ಯದಲ್ಲಿ ಪೌರಕಾರ್ಮಿಕರು ಸರಿಯಾಗಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ನಾಗರಿಕರು ದೂರುತ್ತಿದ್ದಾರೆ.
ಚರಂಡಿಯಲ್ಲಿ ಮಲ, ಮೂತ್ರ ಮಿಶ್ರಿತ ನೀರು ಚರಂಡಿಯಲ್ಲಿ ಹರಿಯುತ್ತಿದೆಯಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿ, ಮಲೀನ ವಾತಾವರಣ ಸೃಷ್ಟಿಸಿದೆ. ಈ ಬಗ್ಗೆ ವಾರ್ಡ್ ಸದಸ್ಯರಿಗೆ ತಿಳಿಸಿದರೆ, ನಾವು ಬಹಳಷ್ಟು ಬಾರಿ ಪೌರಾಯುಕ್ತರಿಗೆ ತಿಳಿಸಿದ್ದೇವೆ. ಆದರೆ ಅವರು ನಮ್ಮ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ನೀವೇ ಹೋಗಿ ಹೇಳಿ ಎಂದು ಹಾರಿಕೆ ಉತ್ತರ ನೀಡಿ ಸ್ಥಳದಿಂದ ಕಾಲ್ಕಿತ್ತುತ್ತಾರೆ.
ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಮತ ನೀಡುವಂತೆ ಅಂಗಲಾಚುತ್ತಾರೆ. ನಂತರ ಈ ಕಡೆಗೆ ತಲೆ ಹಾಕದ ಸದಸ್ಯರ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಹರಿದಾಡಿತು ಕೊಳಚೆ ನೀರು: ನಗರಸಭೆಯ ಮುಂಭಾಗದ ಚರಂಡಿಯ ನೀರು ರಸ್ತೆಯನ್ನೆಲ್ಲ ಆವರಿಸಿ ಅವಾಂತರಗೊಳಿಸಿತ್ತು. ನಗರಸಭೆಯಿಂದ ಮಜ್ಜಿದ್ ವೃತ್ತದ ಸಮೀಪದವರೆಗೆ ಕೊಳಚೆ ನೀರು ಹರಿದಾಡಿತು. ರವಿವಾರ ಸಂತೆಗೆ ಬಂದ ಜನರು ಕೊಳಚೆ ನೀರಿನಲ್ಲಿಯೇ ಕಾಲನ್ನಿಟ್ಟು ಹೋಗುವಂತಾಯಿತು. ಇಡೀ ರಾತ್ರಿ ಜನರು ಗಬ್ಬು ವಾಸನೆಯಲ್ಲಿಯೇ ತೆರಳುವ ಪ್ರಸಂಗ ಎದುರಿಸಿದರು.
ನಗರಸಭೆಯ ಮುಂಭಾಗದ ಚರಂಡಿ ಸ್ಥಿತಿ ಹೀಗಾದರೆ ಇಡೀ ನಗರದ ದುಸ್ಥಿತಿ ಹೇಗಿರಬಹುದು ಎಂದು ಇಲ್ಲಿನ ಚಿತ್ರಣದಿಂದ ಅಂದಾಜಿಸಬಹುದು. ಅಲ್ಲದೇ ನಗರಸಭೆಯ ಮುಂಭಾಗದ ಚರಂಡಿ ಸ್ವತ್ಛಗೊಳಿಸಲಾಗದ ನಗರಸಭೆಯ ಅಧಿಕಾರಿಗಳು ಇತರ ಬಡಾವಣೆಯನ್ನು ಹೇಗೆ ಸರಿಪಡಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ನಗರದ 31 ವಾರ್ಡ್ಗಳ ಚರಂಡಿಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಬಹುತೇಕ ಬಡಾವಣೆಗಳು ತಿಪ್ಪೆ ಗುಂಡಿಯಾಗಿವೆ.
ಸೂಕ್ಷ್ಮತೆ ಅರಿತು ಕ್ರಮ ಕೈಗೊಳ್ಳಿ ವಾರ್ಡ್ ನಂ.18ರಲ್ಲಿ ಚರಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು, ಕೂಡಲೇ ನಗರಸಭೆಯ ಪೌರಾಯುಕ್ತರು ಸೂಕ್ಷ್ಮತೆ ಅರಿತು ಚರಂಡಿಯನ್ನು ಸ್ವತ್ಛಗೊಳಿಸಲು ಕ್ರಮಕೈಗೊಳ್ಳಬೇಕು
∙ಈಶ್ವರರಾಜ ಇಂಗಿನಶೆಟ್ಟಿ , ಉದ್ದಿಮೆದಾರರು
ಕುಸಿದ ನಗರಸಭೆ ಆಡಳಿತ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಮನೆ ಮುಂಭಾಗದಲ್ಲೇ ಕಸದ ತಿಪ್ಪೆ ಆವರಿಸಿದೆ. ಇನ್ನು ಇತರ ಬಡಾವಣೆ ಸಮಸ್ಯೆ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ನಗರಸಭೆ ಆಡಳಿತ ಸಂಪೂರ್ಣ ಕುಸಿದಿದೆ. ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು, ಕಚೇರಿಗೆ ಬಂದು ಚಕ್ಕರ್ ಹೊಡೆಯುವ ಸಿಬ್ಬಂದಿ, ಜನರ ಸಮಸ್ಯೆಗೆ ಸ್ಪಂದಿಸದ ಅಧ್ಯಕ್ಷೆ ಇರುವುದರಿಂದ ಜನರ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಜಿಲ್ಲಾ ಧಿಕಾರಿಗಳು ಆದಷ್ಟು ಬೇಗ ನಗರಸಭೆಗೆ ಸರ್ಜರಿ ಮಾಡಬೇಕು
ಲೋಹಿತ್ ಕಟ್ಟಿ , ಪ್ರಧಾನ ಕಾರ್ಯದರ್ಶಿ, ಜೆಡಿಎಸ್
ಮಲ್ಲಿನಾಥ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ