ಕೊಲೆ ಪ್ರಕರಣ: ಜ್ಯೋತಿ ಸೋದರ ಬಂಧನ


Team Udayavani, Dec 6, 2018, 10:48 AM IST

gul-2.jpg

ಕಲಬುರಗಿ: ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ವಧುದಕ್ಷಿಣೆಗಾಗಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕೊಲೆಯಾದ ಅಜಯ ಅಲಿಯಾಸ್‌ ನಾಗೇಶ ಮತ್ತು ಜ್ಯೋತಿ ಅಲಿಯಾಸ್‌ ಲಲಿತಾ ಪತಿ-ಪತ್ನಿಯರಲ್ಲ. ಈ ಇಬ್ಬರೂ ಮದುವೆಯಾಗದೆ ಸಹಜೀವನ
ನಡೆಸುತ್ತಿದ್ದರು. ಜ್ಯೋತಿಯ ಸಹೋದರನೇ ಈ ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್‌ ತನಿಖೆಯಿಂದ ಬಯಲಿಗೆ ಬಂದಿದೆ.

ಕಳೆದ ನ.2ರಂದು ರಾತ್ರಿ ನಿಡಗುಂದಾ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಅಜಯ ಮತ್ತು ಜ್ಯೋತಿ ಒಟ್ಟಿಗೆ ಇದ್ದಾಗ ಮೂವರು ಆರೋಪಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಜೋಡಿಯನ್ನು ಕೊಲೆ ಮಾಡಿದ್ದರು. ನಂತರ ಇಬ್ಬರ ಶವಗಳನ್ನು ಗ್ರಾಮದಿಂದ ಒಂದು ಕಿ.ಮೀ ದೂರದ ಹೊಲವೊಂದರಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

ಪ್ರಕರಣದ ಸಂಬಂಧ ಡಿ.4 ರಂದು ಸೇಡಂ ಬಸ್‌ ನಿಲ್ದಾಣದಲ್ಲಿ ನಿಡಗುಂದಾ ಗ್ರಾಮದ ನಿವಾಸಿ, ಜ್ಯೋತಿಯ ಮಲತಾಯಿ ಮಗ ದತ್ತು ಅಲಿಯಾಸ್‌ ದತ್ತಪ್ಪ ಪಾರ್ದಿ ಎನ್ನುವಾತನನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ತಿಳಿಸಿದ್ದಾರೆ.

ನಗರದ ಪೊಲೀಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಯಾದ ಅಜಯ ಮಹಾರಾಷ್ಟ್ರ ಮೂಲದವನಾಗಿದ್ದು, ಕಳ್ಳತನದಂತ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಅದೇ ರೀತಿ ದತ್ತು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಈ ನಡುವೆ ಇಬ್ಬರ ಮಧ್ಯೆ ಸೇ°ಹ ಬೆಳೆದು, ಅಲ್ಲಿಂದ ಅಜಯ ನಿಡಗುಂದಾ ಗ್ರಾಮದಲ್ಲಿ ಬಂದು ನೆಲೆಸಿದ್ದ. ತದನಂತರ ದತ್ತುವಿನ ಸಹೋದರಿಯಾದ ಜ್ಯೋತಿ ಮತ್ತು
ಅಜಯ ನಡುವೆಯೂ ಸ್ನೇಹ ಬೆಸೆದಿತ್ತು. ಜ್ಯೋತಿ ಹಾಗೂ ಅಜಯ ಇಬ್ಬರೂ ಮದುವೆಯಾಗಲು ಒಪ್ಪಿಕೊಂಡು ಒಟ್ಟಿಗೆ ವಾಸವಾಗಿದ್ದರು ಎಂದರು.

ಇವರು ಪಾರ್ದಿ ಸಮುದಾಯದವರಾಗಿದ್ದು, ತಮ್ಮ ಸಂಪ್ರದಾಯದಂತೆ ಜ್ಯೋತಿಯನ್ನು ಮದುವೆಯಾಗಲು ಒಂದು ಲಕ್ಷ ರೂ. ವಧುದಕ್ಷಿಣೆ ನೀಡಲು ಅಜಯ ಒಪ್ಪಿಕೊಂಡಿದ್ದ. ಆದರೆ, ಮದುವೆಗೆ ಮುನ್ನವೇ ಜ್ಯೋತಿಯೊಂದಿಗೆ ಸಹ ಜೀವನ ನಡೆಯುತ್ತಿರುವುದರಿಂದ ವಧುದಕ್ಷಿಣೆ ನೀಡಲು ಅಜಯ ನಿರಾಕರಿಸಿದ್ದ. ಅಲ್ಲದೇ, ಈ ಹಿಂದೆ ಕಳ್ಳತನ ಮಾಡಿದ್ದ ಚಿನ್ನಾಭರಣದಲ್ಲಿ 80 ಗ್ರಾಂ ಚಿನ್ನದ ಪಾಲನ್ನು ದತ್ತುವಿಗೆ ಅಜಯ ನೀಡಬೇಕಿತ್ತು ಅದನ್ನು ನೀಡಿರಲಿಲ್ಲ ಎಂದು ವಿವರಿಸಿದರು.

ವಧುದಕ್ಷಿಣೆ ನಿರಾಕರಣೆ ಹಾಗೂ ತನಗೆ ಸಿಗಬೇಕಿದ್ದ ಚಿನ್ನದ ಪಾಲು ಸಿಕ್ಕಿಲ್ಲ ಎನ್ನುವ ಸಿಟ್ಟಿನಿಂದ ನ.2ರಂದು ಅಜಯ, ಜ್ಯೋತಿ ಒಟ್ಟಿಗೆ ಇದ್ದ ಸ್ಥಳಕ್ಕೆ ಆರೋಪಿ ದತ್ತು ತನ್ನ ಇಬ್ಬರು ಸಹಚರರೊಂದಿಗೆ ತೆರಳಿದ್ದ. ಈ ವೇಳೆ ಅಜಯ ನೊಂದಿಗೆ ಮೂವರು ಜಗಳ ತೆಗೆದು ಕೊಲೆ ಮಾಡಿದ್ದರು.
 
ಜತೆಗೆ ಅಜಯ ಕೊಲೆಯ ವಿಷಯ ಹಾಗೂ ಹಿಂದಿನ ಕಳ್ಳತನ ಪ್ರಕರಣಗಳು ಬೆಳಕಿಗೆ ಬರಬಾರದೆಂದು ಜ್ಯೋತಿಯನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲಿಂದ ಶವಗಳನ್ನು ಸಾಗಿಸಿ ಹೊಲದಲ್ಲಿ ಸುಟ್ಟು ಪರಾರಿಯಾಗಿದ್ದರು. ಈ ಕೊಲೆಗಳನ್ನು ಮುಂಬೈ ಕಡೆಯಿಂದ ಬಂದು ಯಾರೋ ಮಾಡಿ ಹೋಗಿದ್ದಾರೆ ಎಂಬಂತೆ ಬಿಂಬಿಸಲು ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದರು.

ಸೇಡಂ ತಾಲೂಕಿನ ಅಪರಿಚಿತ ಮಹಿಳೆ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ವೇಳೆ ಅಜಯ ಮತ್ತು ಜ್ಯೋತಿ ಕೊಲೆ ಪ್ರಕರಣ ಬಯಲಿಗೆ ಬಂದಿದೆ ಎಂದು ಮಾಹಿತಿ ನೀಡಿದರು. ಎಸ್‌ಪಿ, ಹೆಚ್ಚುವರಿ ಎಸ್‌ಪಿ ಮಾರ್ಗದರ್ಶನದಲ್ಲಿ ಶಹಾಬಾದ ಡಿಎಸ್‌ಪಿ ಕೆ. ಬಸವರಾಜ, ಸುಲೇಪೇಟ್‌ ಸಿಪಿಐ ಡಿ.ವಿ. ಕಟ್ಟಿಮನಿ, ಸೇಡಂ ಸಿಪಿಐ ಶಂಕರಗೌಡ, ಸುಲೇಪೇಟ್‌ ಪಿಎಸ್‌ಐ ರಾಜಶೇಖರ, ಸೇಡಂ ಪಿಎಸ್‌ಐ ಸುನೀಲ ಕುಮಾರ
ಹಾಗೂ ಸಿಬ್ಬಂದಿಯಾದ ಶ್ರೀಕಾಂತ, ಹಣಮಂತ, ಜಗನ್ನಾಥ, ದುಧಿರಾಮ, ಮನೋಹರ, ಶಿವಕುಮಾರ, ಯೋಗೇಂದ್ರ ಅವರನ್ನೊಳಗೊಂಡ ತನಿಖಾ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ಸಿಪಿಐ ಶಂಕರಗೌಡ ಹಾಗೂ ಮತ್ತಿತರ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

ಅಜಯ ಐದು ಮಕ್ಕಳ ತಂದೆ
ಕೊಲೆಯಾದ ಅಜಯ ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಲ್ಟನ್‌ ತಾಲೂಕಿನ ರಾಜೀವ ನಗರ ಕೊಳಗಿ ನಿವಾಸಿಯಾಗಿದ್ದಾನೆ. ಈ ಮೊದಲೇ ಈತನಿಗೆ ಮದುವೆಯಾಗಿದ್ದು, ಐವರು ಮಕ್ಕಳಿದ್ದಾರೆ. ಕಳ್ಳತನವೇ ವೃತ್ತಿಯಾಗಿದ್ದ ಈತನ ವಿರುದ್ಧ ಮುಂಬೈ ಸೇರಿದಂತೆ ಇತರ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅಜಯಗಾಗಿ ಮಹಾರಾಷ್ಟ್ರ ಪೊಲೀಸರು ಶೋಧ ನಡೆಸುತ್ತಿದ್ದರು. ಆದರೆ, ಮಹಾರಾಷ್ಟ್ರದಿಂದ ಎರಡೂಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈತ ದತ್ತು ಸ್ನೇಹದಿಂದಾಗಿ ನಿಡಗುಂದಾ ಗ್ರಾಮದಲ್ಲಿ ನೆಲೆಸಿದ್ದ. ಈ ವೇಳೆ ಜ್ಯೋತಿಯೊಂದಿಗೆ ಸಂಬಂಧ ಬೆಳೆದಿತ್ತು ಎಂದು ಎಸ್‌ಪಿ ಎನ್‌. ಶಶಿಕುಮಾರ ತಿಳಿಸಿದರು.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.