ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಕಾಂಗ್ರೆಸ್ ಅಧ್ಯಕ್ಷ
Team Udayavani, May 5, 2018, 6:35 AM IST
ಕಲಬುರಗಿ: ಜಿಲ್ಲೆ ಕಾಳಗಿಯಲ್ಲಿ ಮಾತನಾಡಿದ ರಾಹುಲ್, ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಸತ್ಯವನ್ನು ಹತ್ತಾರು ಸಲ ಹೇಳಿ ಸತ್ಯ ಮಾಡಲು ಮುಂದಾಗುತ್ತಾರೆ. ದೇಶದ ಬ್ಯಾಂಕ್ಗಳಿಗೆ ವಂಚಿಸಿದ ನೀರವ್ ಮೋದಿ, ವಿಜಯ ಮಲ್ಯ ಮತ್ತಿತರರು ಕೊಳ್ಳೆ ಹೊಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮೋದಿ ತುಟಿಪಿಟಕ್ ಎನ್ನುವುದಿಲ್ಲ. ಗಣಿಗಾರಿಕೆ ಮೂಲಕ ಕೊಳ್ಳೆ ಹೊಡೆದವರಿಗೆ ಎಂಟು ಸೀಟು ಕೊಟ್ಟು ವಿಧಾನಸೌಧದಲ್ಲಿ ಕೂಡಿಸಲು ಮೋದಿ ಮುಂದಾಗಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ದೊಡ್ಡ ಹಗರಣದ ಬಗ್ಗೆ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಕಣ್ಣೆದುರೇ ಲೂಟಿ ನಡೆಯುತ್ತಿದ್ದರೂ ಅವರು ಮೌನವಾಗಿ ಕೂತಿದ್ದಾರೆ. ಈಗ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಘೋಷಣೆ ಬದಲಾಗಿದೆ. ಬೇಟಿ ಬಚಾವೋ ಬಿಜೆಪಿ ನಾಯಕ್ ಸೇ ಎನ್ನುವಂತಾಗಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ್ದಲ್ಲಿ ಬಿಜೆಪಿ ನಾಯಕರಿಂದಲೇ ಮಹಿಳೆಯರ, ಬಾಲಕಿಯರ ಮೇಲೆ ಅತ್ಯಾಚಾರವಾಗಿದೆ.ಇದರಿಂದ ಬಿಜೆಪಿಗೆ ನಾಚಿಕೆಯಾಗೋದಿಲ್ವೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು