ದುರಾಸೆಗೆ ನಿಸರ್ಗವೇ ಕಲಿಸುತ್ತೆ ಪಾಠ: ಪಾಟೀಲ
Team Udayavani, Jan 24, 2022, 12:46 PM IST
ಮಾದನಹಿಪ್ಪರಗಿ: ಮಾನವನ ದುರಾಸೆಗೆ ಅರಣ್ಯ ನಾಶವಾಗಿದೆ. ನಿಸರ್ಗ ಸಮತೋಲದಿಂದ ಇದ್ದರೇ ಮಾತ್ರ ಬಿಸಿಲು, ಮಳೆ, ಚಳಿ ನಿಗದಿತ ಸಮಯಕ್ಕೆ ಬರುತ್ತವೆ, ಹೋಗುತ್ತವೆ. ಆದರೆ ಮನುಷ್ಯ ಸ್ವಾರ್ಥಕ್ಕಾಗಿ ಭೂಮಿಯ ಒಡಲನ್ನು ಬರಿದು ಮಾಡಿದ್ದರಿಂದ ವಾತಾವರಣದಲ್ಲಿ ಏರುಪೇರಾಗಿ ಮಾನವನಿಗೆ ಅನೇಕ ಕಾಯಿಲೆಗಳು ಬರುತ್ತಿವೆ. ನಿಸರ್ಗ ನಮ್ಮ ಬೇಡಿಕೆ ಪೂರೈಸುತ್ತದೆಯೇ ವಿನಃ ದುರಾಸೆಯಲ್ಲ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಸಮೀಪದ ಖೇಡಉಮ್ಮರಗಾ ಗ್ರಾಮದ ಪರಿಸರ ಸಂರಕ್ಷಣಾ ಅಭಿಯಾನದ ತಂಡವನ್ನು ಭೇಟಿ ಮಾಡಿ, ಪರಿಸರ ಉಳಿಸಲು ಹೋರಾಡುತ್ತಿರವ ತಂಡದ ನಾಯಕ ರೆನಿಸಿಕೊಂಡ ಶಿಕ್ಷಕ ಬಸವರಾಜ ಸನ್ಮಾನಿಸಿ ಮಾತನಾಡಿ, ನಿಮ್ಮ ಪರಿಸರ ಕಾಳಜಿಗೆ ನಾವು ಕೈಜೋಡಿಸುತ್ತೇವೆ. ರಾಜಕೀಯ ಅಧಿಕಾರ ಬರುತ್ತದೆ, ಹೋಗುತ್ತದೆ. ಅದು ಮುಖ್ಯವಲ್ಲ. ನಮ್ಮ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಬಿಟ್ಟು ಹೋಗೋಣ ಎಂದರು.
ಸನ್ಮಾನ ಸೀರಿಸಿ ಮಾತನಾಡಿದ ಶಿಕ್ಷಕ ಬಸವರಾಜ, ಗ್ರಾಮದ ಪ್ರಾಥಮಿಕ ಶಾಲೆ, ಪದವಿ ವಿದ್ಯಾರ್ಥಿಗಳು ಹಾಗೂ ಯುವಕರ ಸಹಕಾರದಿಂದ ತಂಡ ಕಟ್ಟಿ ತಾಲೂಕಿನ ಜಳಕಿ ಗ್ರಾಮದಲ್ಲಿ ಒಂದು ಸಾವಿರ ಸಸಿಗಳನ್ನು, ದರ್ಗಾಶಿರೂರ ಗ್ರಾಮದ ಶಾಂತಲಿಂಗ ಪಾದಗಟ್ಟೆ, ಮಾದನಹಿಪ್ಪರಗಿ, ಹಡಲಗಿ, ಯಳಸಂಗಿ ಗ್ರಾಮಗಳಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖೇಡ ಉಮ್ಮರಗಾ ಗ್ರಾಮದ ಶಾಲೆ ಆವರಣ ಖಾಲಿ ಇರುವ ರಸ್ತ ಪಕ್ಕದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಅಭಿಯಾನ ಮಾಡಿದ್ದೇವೆ ಎಂದು ಹೇಳಿದರು.
ಮಲ್ಲಯ್ಯ ಸ್ವಾಮಿ ಮದಗುಣಕಿ, ವೈಜನಾಥ ಪಾಟೀಲ, ಬಸವರಾಜ ಜಿ. ಪಾಟೀಲ ಚಲಗೇರಾ, ಮುಖ್ಯಶಿಕ್ಷಕ ಗಣಾಚಾರಿ ಮುಂತಾವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ