ತಡೆಗೋಡೆ ಇಲ್ಲದ ಸೇತುವೆಯಿಂದ ಸಂಚಕಾರ
Team Udayavani, Nov 22, 2020, 5:16 PM IST
ಅಫಜಲಪುರ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಪುಣ್ಯಕ್ಷೇತ್ರಗಳಾದ ಘತ್ತರಗಿ, ದೇವಲ ಗಾಣಗಾಪುರದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ನ ತಡೆಗೋಡೆಗಳು ಒಡೆದು ಹೋಗಿರುವುದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
ಸೆಲ್ಫಿ ಹುಚ್ಚು: ಪುಣ್ಯಕ್ಷೇತ್ರ ಘತ್ತರಗಿಯಲ್ಲಿ ನಿತ್ಯ ಸ್ಥಳೀಯ ಜನ ಭೀಮಾ ನದಿಗೆ ಭೇಟಿ ನೀಡುತ್ತಿದ್ದಾರೆ. ದೇವಿದರ್ಶನ ಪಡೆದು ಪುಣ್ಯಸ್ನಾನಕ್ಕಾಗಿ ನದಿಗೆ ಆಗಮಿಸುತ್ತಾರೆ.ಅಮವಾಸ್ಯೆ, ಹುಣ್ಣಿಮೆಯಂತ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಿ ದೇವಿ ದರ್ಶನದ ಜೊತೆಗೆ ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ.
ಅಮಾವಾಸ್ಯೆ ಹುಣ್ಣಿಮೆ ಸಂದರ್ಭದಲ್ಲಿ ವಾಹನ ದಟ್ಟಣೆಹೆಚ್ಚಾಗುವುದರಿಂದ ನದಿ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಾಗಿ ಅನಾಹುತಕ್ಕೆ ಆಹ್ವಾನನೀಡುವಂತಾಗುತ್ತಿದೆ. ಒಂದು ದೊಡ್ಡ ವಾಹನ ಎದುರಿಗೆ ಬಂದರೆ ಸರ್ಕಸ್ ಮಾಡುವಂತ ಪರಿಸ್ಥಿತಿಯಿದೆ. ದೇವಲ ಗಾಣಗಾಪುರದಲ್ಲೂ ಭೀಮಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿಸಲಾಗಿದ್ದು, ಅಲ್ಲಿಯೂ ಬ್ಯಾರೇಜ್ ತಡೆಗೋಡೆ ಒಡೆದುಹೋಗಿದೆ.
ಹೀಗಾಗಿ ಗಾಣಗಾಪುರದಲ್ಲಿಯೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಣಗಾಪುರದಲ್ಲಿ ನಿತ್ಯವು ಜನ ಜಾತ್ರೆ ಇರುತ್ತದೆ. ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕಾಗಿ ಹೆಚ್ಚು ಜನ ನದಿ ದಡಕ್ಕೆ ಬರುತ್ತಾರೆ. ಭಕ್ತರ ಪುಣ್ಯಸ್ನಾನಕ್ಕಿಂತಹ ಹೆಚ್ಚಾಗಿ ಯುವ ಜನ ಸೆಲ್ಪಿಹುಚ್ಚಿನಿಂದಾಗಿ ಕೈಯಲ್ಲೊಂದುಮೊಬೈಲ್ ಹಿಡಿದು ನದಿ ದಡಕ್ಕೆ ಹಾಗೂ ತಡೆಗೋಡೆ ಇಲ್ಲದ ಬ್ಯಾರೇಜ್ ಬಳಿ ಬಂದು ಫೋಸು ಕೊಡುತ್ತಿದ್ದಾರೆ.
ಸಂಬಂಧ ಪಟ್ಟವರು ಕೂಡಲೇ ಘತ್ತರಗಿ, ದೇವಲ ಗಾಣಗಾಪುರ ಗ್ರಾಮಗಳಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗಳಿಗೆ ತಡೆಗೋಡೆ ನಿರ್ಮಿಸಿ ಅಪಾಯ ಆಗುವುದನ್ನು ತಪ್ಪಿಸಬೇಕಿದೆ.
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ