ಒಂದೆಡೆ ಅನುಕೂಲ-ಮತ್ತೂಂದೆಡೆ ಸಂಕಷ್ಟ


Team Udayavani, Jan 2, 2018, 12:01 PM IST

TANDI.jpg

ವಾಡಿ: ಪರ್ಷಿ ಕಲ್ಲಿನಿಂದ ಜಗತ್‌ ಪ್ರಸಿದ್ದವಾಗಿರುವ ಚಿತ್ತಾಪುರ ತಾಲೂಕಿನ ವಾಡಿ ವಲಯದ ಗಣಿ ಭೂಮಿಗಳು ಈಗ ಹಸಿರಿನ ಹಾಸಿಗೆಯಾಗಿ ಕಂಗೊಳಿಸುತ್ತಿವೆ. ಪಾತಾಳಗಂಗೆ ಸೌಲಭ್ಯ ಪಡೆದ ರೈತರು, ಫಸಲುಗಳ ಮಧ್ಯೆ ಬದುಕು ಕಟ್ಟಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶಗಳ ಮಧ್ಯೆ ಇದ್ದು ಪ್ರಕೃತಿ ಸೌಂದರ್ಯ ಸೂಸುವ ಯಾಗಾಪುರ ಗ್ರಾಪಂ ವ್ಯಾಪ್ತಿಯ ಹಲವು ತಾಂಡಾಗಳ ಬಂಜಾರಾ ಜನಾಂಗದವರ ನೂರಾರು ಎಕರೆ ಜಮೀನುಗಳಲ್ಲಿ ಜಲಧಾರೆ ಚಿಮ್ಮುತ್ತಿದ್ದು, ಕೃಷಿ ಚಟುವಟಿಕೆ ವರ್ಷದ ನಿರಂತರ ಕಾಯಕವಾಗಿ ಬದಲಾಗಿದೆ. ಭೂಮಿಯನ್ನು ಸಣ್ಣ ಸಣ್ಣ ಗದ್ದೆಗಳನ್ನಾಗಿ ಪರಿವರ್ತಿಸಿರುವ ರೈತರು, ನೀರು ಹರಿಸಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ. ಯಾಗಾಪುರ, ಬೆಳಗೇರಿ, ಶಿವನಗರ (ದೊಡ್ಡ ತಾಂಡಾ) ತಾಂಡಾ, ಅಣ್ಣಿಕೇರಾ ತಾಂಡಾ, ಲಾಡ್ಲಾಪುರ, ಹೀರಾಮಣಿ ತಾಂಡಾ, ಅಳ್ಳೊಳ್ಳಿ ವಲಯ, ಪತ್ತುನಾಯಕ ತಾಂಡಾ ಸೇರಿದಂತೆ ಸುಮಾರು ಹತ್ತಾರು ತಾಂಡಾಗಳು ಕೃಷಿಯಲ್ಲಿ ಪ್ರಗತಿ ಸಾಧಿಸಿರುವುದು ಬಹಿರಂಗ ಸತ್ಯವಾಗಿದೆ.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿ ಜನರಿಗೆ ನೀಡಲಾಗುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಸೌಲಭ್ಯ ಪಡೆದಿರವ ಲಂಬಾಣಿ ಸಮುದಾಯದ ರೈತರು, ಸರಕಾರದ ಸೌಕರ್ಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ತಮಗಿರುವ ಕಿರುಭೂಮಿಯಲ್ಲೇ ಕೃಷಿ ಕಾಯಕದಲ್ಲಿ ಶ್ರಮಿಸುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿರುವುದು ಕ್ಷೇತ್ರದ ಪ್ರಗತಿ ಲಕ್ಷಣವೇ ಸರಿ. ಗುಡ್ಡಗಳ ಮಧ್ಯೆ ಇರುವ ಭೂಮಿ ಬಹುತೇಕ ಬಂಜರು ಅಥವಾ ಮಣ್ಣಿನ ಸತ್ವ ಕಳೆದುಕೊಂಡ ಕಲ್ಲು ಹರಳಿನಿಂದ ಕೂಡಿದ ವ್ಯವಸಾಯಕ್ಕೆ ಯೋಗ್ಯವಲ್ಲದ ನೆಲವಾಗಿದೆ. ಇಂತಹ ವ್ಯರ್ಥ ಭೂಮಿಗೆ ರೈತರು ನೀರು ಹರಿಸಿ ಭತ್ತ, ರಾಗಿ, ಗೋದಿ,
ಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬದನೆ, ಕಡಲೆ, ಹತ್ತಿ, ಕಬ್ಬು ಬೆಳೆದು ಹಸಿರು ವನವನ್ನಾಗಿ ಪರಿಸರ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡಿಯುವ ರೈತರಿಗೆ ನೀರು ಮತ್ತು ವಿದ್ಯುತ್‌ ಲಭ್ಯವಾದರೆ ಆರ್ಥಿಕ ಸಬಲತೆ ಸಾಧ್ಯ ಎಂಬುದಕ್ಕೆ ಯಾಗಾಪುರ ವಲಯದ ತಾಂಡಾಗಳ ರೈತರೆ ಸಾಕ್ಷಿಯಾಗಿದ್ದಾರೆ.

ಸಮರ್ಪಕವಾಗಿ ಬಳಕೆಯಾಗುತ್ತದೆ ಸವಲತು: ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷ ಸಣ್ಣ ರೈತರಿಗೆ  ಜೂರು ಮಾಡುವ ಗಂಗಾಕಲ್ಯಾಣ ಯೋಜನೆ ಮೂಲಕ ಕೊಳವೆಬಾವಿ ಮತ್ತು ವಿದ್ಯುತ್‌ ವ್ಯವಸ್ಥೆಯಿಂದ ಯಾಗಾಪುರದ ಒಟ್ಟು ಒಂಬತ್ತು ತಾಂಡಾಗಳ ರೈತರು ನೀರಾವರಿ ಕೃಷಿಯಲ್ಲಿ ತೊಡಗಿದ್ದಾರೆ. ಸರಕಾರದ ಸವಲತ್ತು ಸಮರ್ಪಕವಾಗಿ ಬಳಕೆಯಾಗುತ್ತಿದೆ. ವಿದ್ಯುತ್‌ ನೀಡುವ ಅವಧಿ ಹೆಚ್ಚಿಸಿ ಸಮರ್ಪಕವಾಗಿ ಬೀಜ ವಿತರಣೆಯಾಗಬೇಕಿದೆ. ಬೆಳೆದ ಬೆಳೆಗಳಿಗೆ ಸರಕಾರ ಉತ್ತಮ ಬೆಲೆ ನೀಡಿ ಖರೀದಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ.
 ಶಂಕರ ಜಾಧವ. ಅಧ್ಯಕ್ಷರು, ಅಖೀಲ ಭಾರತ ಬಂಜಾರಾ ಸೇವಾ ಸಂಘ ವಾಡಿ ಘಟಕ

 ಮಡಿವಾಳಪ್ಪ ಹೇರೂರ

ಅಫಜಲಪುರ: ಪಟ್ಟಣದ ಹೊರವಲಯದಲ್ಲಿರುವ ಕೆರೆ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೆಲ ದಿನಗಳ ಹಿಂದಷ್ಟೆ ಕೆರೆ ಬದು ಕುಸಿದು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಕೆರೆ ಒಡೆಯುತ್ತದೆ ಎಂಬ ಭಯದಲ್ಲಿದ್ದ ರೈತರು ಆತಂಕ ವ್ಯಕ್ತಪಡಿಸಿದ್ದರು. ಸಂಬಂಧಿಸಿದ ಇಲಾಖೆಯವರು ಕೆರೆ ಬದಿಯಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಅಗೆದು ಕಾಲುವೆ ಥರ ಮಾಡಿ
ನೀರು ಹರಿಬಿಟ್ಟಿದ್ದಾರೆ. ಇದರಿಂದ ಭಾರಿ ಪ್ರಮಾಣದ ನೀರು ಹೊರಹರಿದು ಹೋಗಿದ್ದು, ಕೆರೆ ಕೆಳ ಭಾಗದ ರೈತರ ಜಮೀನುಗಳಿಗೆ ನುಗ್ಗಿ ಗೋದಿ , ಕಡಲೆ, ಕಟಾವಿಗೆ ಬಂದ ತೊಗರಿ ಮತ್ತು ಜೋಳದ ಬೆಳೆಗಳು ನಾಶವಾಗಿವೆ.

ಪಟ್ಟಣದ ಕೆರೆ ಸುತ್ತಮುತ್ತಲಿನ ಭಾಗದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ. ಅಲ್ಲದೆ ಪಟ್ಟಣದಲ್ಲಿ ಅಂತರ್ಜಲ ಮಟ್ಟ
ಹೆಚ್ಚಿಸಿದೆ. ಆದರೆ ಸಂಬಂಧಿಸಿದವರು ಕೆರೆ ರಕ್ಷಣೆ ಮಾಡುವುದನ್ನು ಬಿಟ್ಟು ಏಕಾಏಕಿ ನದಿ ನೀರು ಹರಿಸಿದ್ದಾರೆ. ಇದರಿಂದ ಪೊಳ್ಳುಗೊಂಡಿದ್ದ ಕೆರೆ ಬದು ಸೇರಿ ಕುಸಿಯತೊಡಗಿದೆ. ಅಲ್ಲದೆ ಕೆರೆ ಬದು ಕ್ರಮೇಣವಾಗಿ ಕುಸಿಯುತ್ತಿದೆ. ಇದಕ್ಕೆಲ್ಲ ಸಂಬಂಧಪಟ್ಟವರು ಮೈ ಮರೆತಿರುವುದೇ ಕಾರಣವಾಗಿದೆ. ಒಂದು ವೇಳೆ ಪಟ್ಟಣದ ಕೆರೆ ಒಡೆದು ಖಾಲಿಯಾದರೆ ರೈತರಿಗೆ ಹೊಲಗಳಿಗೆ ನೀರು ಸಿಗುವುದಿಲ್ಲ. ಸುತ್ತಮುತ್ತಲಿನ ಹೆಕ್ಟೇರ್‌ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಖಾಲಿಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೆರೆಯನ್ನೇ ನಂಬಿರುವ ನೂರಾರು ಕೊಳವೆಬಾವಿ, ತೆರೆದ ಬಾವಿಗಳು ಖಾಲಿಖಾಲಿಯಾಗಲಿವೆ. ಪಟ್ಟಣಕ್ಕೂ ಕೂಡ
ಇದರಿಂದ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ತಾಲೂಕು ಆಡಳಿತ ಕೆರೆಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ರೈತರು ಸೇರಿ ಕೆರೆ ಉಳಿಸುವ ಮತ್ತು ಜೀರ್ಣೋದ್ಧಾರ ಮಾಡಿದಾಗ ಮಾತ್ರ ಉಳಿಯಲಿದೆ ಮತ್ತು ಭವಿಷ್ಯದಲ್ಲಿ ಕೆರೆಯಿಂದ ಇನ್ನಷ್ಟು ಅನುಕೂಲವಾಗಲಿದೆ.

ಸೂಕ್ತ ಪರಿಹಾರ ಕೊಡಿ : ಕೆರೆಗೆ ಒಮ್ಮೆಲೆ ನೀರು ಬಿಟ್ಟಿದ್ದರಿಂದ ತುಂಬಿ ಪೊಳ್ಳು ಇರುವ ಕಡೆ ನುಗ್ಗಿದ್ದರಿಂದ ಬದು ಕುಸಿದಿತ್ತು. ಈಗ ಒಮ್ಮೆಲೆ ನೀರು ಹೊರ ಬಿಟ್ಟಿದ್ದಾರೆ. ಹೀಗಾಗಿ ನಮ್ಮ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಮಗೆ ಸೂಕ್ತ ಪರಿಹಾರ ನೀಡಬೇಕು.
 ಹಮೀದ್‌ ಅಬ್ದುಲ್‌ ಜಾಗಿರದಾರ, ∙ರಹಮತ್‌ ಜಾಗಿರದಾರ, ∙ನ್ಯಾಮತ್‌ ಜಾಗಿರದಾರ, ಕೆರೆ ಕೆಳಗಿನ ರೈತರು

ಮೇಲಧಿಕಾರಿಗಳ ಜತೆ ಚರ್ಚೆ : ಕೆರೆ ಬದು ಕುಸಿದು ಒಡೆಯುವ ಭೀತಿ ಇದ್ದ ಕಾರಣ ನೀರು ಹರಿಬಿಡಲಾಗಿದೆ. ಕೆರೆ ಕೆಳಭಾಗದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿದ್ದರ ಬಗ್ಗೆ ಮೇಲಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
ಆರ್‌.ಎ. ಇನಾಮದಾರ, ಎಇಇ ಸಣ್ಣ ನೀರಾವರಿ ಇಲಾಖೆ ಅಫಜಲಪುರ

ಮಲ್ಲಿಕಾರ್ಜುನ ಹಿರೇಮಠ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.