ಕಾರ್ಖಾನೆ ಮುಖ್ಯ ದ್ವಾರ ಮುಚ್ಚಿದ್ದಕ್ಕೆ ಆಕ್ರೋಶ
Team Udayavani, May 17, 2018, 5:05 PM IST
ಶಹಾಬಾದ: ನಗರದ ಬಹುರಾಷ್ಟ್ರೀಯ ಜನರಲ್ ಇಲೆಕ್ಟ್ರಿಕಲ್ (ಜಿಇ) ಕಾರ್ಖಾನೆ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆಯಿಲ್ಲದೇ ಸೋಮವಾರ ಕಾರ್ಖಾನೆ ಮುಖ್ಯದ್ವಾರ ಮುಚ್ಚಿ ಕಾರ್ಮಿಕರಿಗೆ ಒಳಗೆ ಹೋಗಲು ನಿರಾಕರಿಸಿದಕ್ಕೆ ಕಂಪನಿಯ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕ ವರ್ಗದವರು ನಡೆಸಿದ ಹೋರಾಟ ಮೂರನೇ ದಿನಕ್ಕೆ ಮುಂದುವರಿದಿದೆ.
ನಂತರ ಮಾತನಾಡಿದ ಕಾರ್ಮಿಕರು ಕಳೆದ ಮೂರು ತಿಂಗಳಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸುತ್ತಿದ್ದಾರೆ. ಈಗಾಗಲೇ ಹಣದ ಆಮಿಷ ತೋರಿಸಿ 86 ಕಾರ್ಮಿಕರಲ್ಲಿ 33 ಜನರನ್ನು ಹೊರಹಾಕಿದ್ದಾರೆ. ಉಳಿದ 53 ಜನರು ಸ್ವಯಂನಿವೃತ್ತಿ ತೆಗೆದುಕೊಳ್ಳಲು ನಿರಾಕರಿಸಿದಕ್ಕೆ ಕಂಪನಿಯ ಗೇಟ್ ಬಂದ್ ಮಾಡಿ, ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಕಂಪನಿಯಲ್ಲಿರುವ ಮಶಿನರಿಗಳನ್ನು
ಬೇರೆ ಕಡೆ ಸಾಗಿಸಲು ಯೋಜನೆ ಮಾಡಿದ್ದಾರೆ.
ಆದ್ದರಿಂದ ಕಂಪನಿಯಲ್ಲಿ ಕೆಲಸವಿಲ್ಲ. ನೀವು ಮನೆಯಲ್ಲಿರಿ, ನಾವು ನಿಮಗೆ ಸಂಬಳ ನೀಡುತ್ತೆವೆ ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಪೊಲೀಸ್ರಿಗೆ ದೂರು ನೀಡಲಾಗಿದೆ. ನಗರದ ಸಿಪಿಐ ಆನಂದರಾವ ಅವರು ವಿಧಾನಸಭೆ ಚುನಾವಣೆಯ ಫಲಿತಾಂಶವಾದ ನಂತರ ಮೇ 16ರಂದು ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನಾವು ಇವರ ಕಿರುಕುಳಕ್ಕೆ ಬಗ್ಗದೇ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಸತ್ಯನಾರಾಯಣ ಜೋಷಿ, ಅಶೋಕ ಘೂಳಿ, ಮಹಾದೇವ ಮಾನಕರ್, ಭೀಮರಾಯ ಸಿರಗೊಂಡ, ದಾವೂದ್ ಹುಸೇನ್, ಜಿ.ರಮೇಶ, ಲಕ್ಷ್ಮೀಕಾಂತ ಕಂದಗೂಳ, ಸುಧಾಕರ್, ಸೂರ್ಯಕಾಂತ ಕಲಾಲ, ನಿಂಗಣ್ಣ ಕಾರೊಳ್ಳಿ, ಸ್ಟಾನಿಲಿ, ಜಾನ್, ಅಣ್ಣಾರಾಯ ಹಳ್ಳಿ, ಮಲ್ಲಣ್ಣ ಹಬ್ಟಾಳ, ಪ್ರಭು ಪೂಜಾರಿ, ಮಹೇಶ ಹೀರಾಳ ಹಾಗೂ ಇನ್ನಿತರ ಕಾರ್ಮಿಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ