ಪಕೋಡಾ ಮಾರಾಟ ಮಾಡಿಕೇಂದ್ರವನ್ನು ಅಣಕಿಸಿದರು!
Team Udayavani, Feb 3, 2018, 10:22 AM IST
ಕಲಬುರಗಿ: ನಗರದ ಬಿಜೆಪಿ ಕಚೇರಿ ಎದುರು ಶುಕ್ರವಾರ ಈರುಳ್ಳಿ ಪಕೋಡಾ ಮಾಡಿ, ಜನರಿಗೆ ಮಾರಾಟ ಮಾಡುವ ಮೂಲಕ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆ ಸದಸ್ಯರು ಕೇಂದ್ರ ಸರ್ಕಾರವನ್ನು ಅಣಕಿಸಿದರು.
ರಾಷ್ಟ್ರದಲ್ಲಿ ಪ್ರತಿ ವರ್ಷ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಾಲ್ಕು ವರ್ಷ ಅಧಿಕಾರ ನಡೆಸಿದ ಬಳಿಕ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೃಷಿ, ಚಹಾ ಮತ್ತು ಪಕೋಡಾ ಮಾಡುವುದು ಕೂಡ ಉದ್ಯೋಗ ಎಂದು ಹೇಳಿದ್ದರು. ಇದೇ ಮಾತನ್ನು ನಿಜ ಮಾಡುವ ನಿಟ್ಟಿನಲ್ಲಿ ಫೆ.2ರಂದು ರಾಜ್ಯಾದಾದ್ಯಂತ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಬಿಜೆಪಿ ಕಚೇರಿ ಎದುರು ಪಕೋಡಾ ಮಾಡಿ ಮಾರಾಟ ಮಾಡುವ ಮೂಲಕ ಮೋದಿ ಮಾತನ್ನು ಅಣಕಿಸಿದರು.
ನಗರದ ಬಿಜೆಪಿ ಕಚೇರಿ ಎದುರು ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮತ್ತು ದಿಗಂಬರ ಕಾಡುಹುಲಿ ನೇತೃತ್ವದಲ್ಲಿ ಪಕೋಡಾಗಳನ್ನು ಮಾಡಿ ಜನರಿಗೆ ಸೋವಿಯಾಗಿ ಮಾರಾಟ ಮಾಡಲಾಯಿತು. ಸೈಬಣ್ಣಾ ಜಮಾದಾರ, ಶಿವಲಿಂಗಪ್ಪ ಕಿನ್ನೂರ್, ಪದ್ಮಣ್ಣ, ರಾಚಣ್ಣ ಯಡ್ರಾಮಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು