ಶೇ.70.13 ಮತದಾನ: ಪಾಂಡ
Team Udayavani, Jun 9, 2018, 10:10 AM IST
ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಒಟ್ಟು ಶೇ. 70.13 ರಷ್ಟು ಮತದಾನವಾಗಿದೆ ಎಂದು ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಪಂಕಜಕುಮಾರ ಪಾಂಡೆ ತಿಳಿಸಿದ್ದಾರೆ.
ಬೀದರ ಜಿಲ್ಲೆಯಲ್ಲಿ ಶೇ. 67.50, ಕಲಬುರಗಿ ಶೇ. 57.64, ರಾಯಚೂರು ಶೇ. 67.19, ಯಾದಗಿರಿ ಶೇ. 72.46, ಕೊಪ್ಪಳ ಶೇ. 74.77, ಬಳ್ಳಾರಿ ಶೇ. 73.76 ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಶೇ. 77.56 ರಷ್ಟು ಮತದಾನ ದಾಖಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಪದವೀಧರರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ನಗರದಲ್ಲಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಪರಿಶೀಲಿಸಿದರು.
ಬೀದರ: ಈಶಾನ್ಯ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ಶುಕ್ರವಾರ ನಡೆದಿದ್ದು, ಜಿಲ್ಲೆಯಲ್ಲಿ ಶೇ.67.50ರಷ್ಟು ಮತದಾನ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 23 ಮತಗಟ್ಟೆಗಳಿದ್ದು, 11,414 ಮತದಾರರು ಇದ್ದಾರೆ. ಈ ಪೈಕಿ 7,706 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 5,771 ಪುರುಷ ಹಾಗೂ 1,935 ಮಹಿಳಾ ಪದವೀಧರರು ಮತದಾನ ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನ ನಿಧಾನ ಗತಿಯಲ್ಲಿ ಸಾಗಿ ಮಧ್ಯಾಹ್ನದ 3 ಗಂಟೆ ಹೊತ್ತಿಗೆ ಶೇ.51.80 ಆಗಿತ್ತು. ಸಂಜೆ 5 ಗಂಟೆ ವರೆಗೂ ಶೇ. 67.50ರಷ್ಟು ಮತದಾನ ಆಗಿದೆ. ಈ ಪೈಕಿ ದಾಬಕಾ ಮತಗಟ್ಟೆ ಸಂಖ್ಯೆ 21ರಲ್ಲಿ ಶೇ. 91.67 ಅತಿ ಹೆಚ್ಚು ಮತದಾನ ಆಗಿದ್ದು, ಬೀದರ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 43ರಲ್ಲಿ ಶೇ.58.82ರಷ್ಟು ಮತದಾನ ನಡೆದಿದೆ.
ಔರಾದ ತಾಲೂಕಿನ 7 ಮತಗಟ್ಟೆಗಳಲ್ಲಿ ಶೇ. 81.14ರಷ್ಟು ಮತದಾನವಾಗಿದ್ದು, 753 ಜನರು ಮತ ಚಲಾಯಿಸಿದ್ದಾರೆ. ಭಾಲ್ಕಿ ತಾಲೂಕಿನ ಒಟ್ಟು 4 ಮತಗಟ್ಟೆಗಳಲ್ಲಿ ಶೇ. 72.31ರಷ್ಟು ಮತದಾನವಾಗಿದ್ದು, 906 ಜನರು ಹಕ್ಕು ಚಲಾಯಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಒಟ್ಟು 4 ಮತಗಟ್ಟೆಗಳಲ್ಲಿ ಶೇ.70.89ರಷ್ಟು ಮತದಾನ ನಡೆದಿದ್ದು, 1381 ಪದವೀಧರರು ಹಕ್ಕು ಚಲಾಯಿಸಿದ್ದಾರೆ. ಹುಮನಾಬಾದ ತಾಲೂಕಿನ 4 ಮತಗಟ್ಟೆಗಳಲ್ಲಿ ಶೇ. 67.62ರಷ್ಟು ಮತದಾನ ನಡೆದಿದ್ದು, 2,308 ಪದವೀಧರರು ಹಕ್ಕು ಚಲಾಯಿಸಿದ್ದಾರೆ. ಬೀದರನ ಒಟ್ಟು 5 ಮತಗಟ್ಟೆಗಳಲ್ಲಿ ಶೇ. 60.87ರಷ್ಟು ಮತದಾನವಾಗಿದ್ದು, 2,358 ಪದವೀಧರರು ಮತದಾನ ಹಕ್ಕು ಚಲಾಯಿಸಿದ್ದಾರೆ.
ಯಾದಗಿರಿ: ಈಶಾನ್ಯ ಪದವೀಧರರ ಚುನಾವಣೆಗೆ ಜಿಲ್ಲೆಯಲ್ಲಿ ಶೇ. 72.46 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 5,159 ಮತದಾರರಿದ್ದು, 13 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಮತದಾನಕ್ಕೆ ನಿರುತ್ಸಾಹ ವ್ಯಕ್ತವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ವಾತಾರಣ ತಿಳಿಗೊಂಡಿದ್ದರಿಂದ ಪದವೀಧರರು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್