ಕಣ್ಮನ ತಣಿಸುತ್ತಿರುವ ಉದ್ಯಾನವನಗಳು


Team Udayavani, Jan 4, 2019, 5:23 AM IST

gul-1.jpg

ಕಲಬುರಗಿ: ಮಹಾನಗರ ಪಾಲಿಕೆಯ ಎಲ್ಲ 55 ವಾರ್ಡ್‌ಗಳಲ್ಲಿ ಸುತ್ತಾಡಿದರೂ ಸೇಡಂ ರಸ್ತೆಯ ವಾರ್ಡ್‌ ನಂ. 30ರಲ್ಲಿನ ಸಿಂಧೆ-ಸ್ವಸ್ತಿಕ ನಗರ ಹಾಗೂ ಡಾಕ್ಟರ್‌ ಕಾಲೋನಿಯಲ್ಲಿರುವ ಉದ್ಯಾನವನಗಳು ನಮ್ಮ ಕಣ್ಣಿಗೆ ಬೀಳ್ಳೋದಿಲ್ಲ.

ಪಾಲಿಕೆ ನಿರ್ವಹಣೆಯ ಸಾರ್ವಜನಿಕ ಉದ್ಯಾನವನಕ್ಕೆ ಸೆಡ್ಡು ಹೊಡೆಯುವಂತೆ ಈ ಉದ್ಯಾನವನಗಳು ತಲೆ ಎತ್ತಿದ್ದು, ಕೈ ಮಾಡಿ ಕರೆಯುತ್ತಿವೆ. ಉದ್ಯಾನದೊಳಗೆ ಹೋದರೆ ಸುಂದರ ವಾತಾವರಣ ಕಂಡು ಮನಸ್ಸು ಪುಳಕಿತಗೊಳ್ಳದೇ ಇರದು. ಈ ಸುಂದರ ಉದ್ಯಾನಗಳ ಹಿಂದೆ ಅನೇಕ ಪರಿಶ್ರಮದ ಕೈಗಳು ಅಡಗಿವೆ. ಅದರಲ್ಲೂ ಮಹಾನಗರ ಪಾಲಿಕೆ ಹಾಗೂ ವಾರ್ಡ್‌ ನಂ. 30ರ ಸದಸ್ಯ ಆರ್‌.ಎಸ್‌. ಪಾಟೀಲ ಆಸಕ್ತಿ ಮೇರೆಗೆ ಕಲ್ಪನೆಗೆ ಮೀರಿ ಉದ್ಯಾನವನಗಳು ಕೈ ಬೀಸಿ ಕರೆಯುತ್ತಿವೆ. 

ಉದ್ಯಾನವದಲ್ಲಿ ಏನೇನಿದೆ: ವಾರ್ಡ್‌ ನಂ. 30ರ ಸಿಂಧೆ-ಸ್ವಸ್ತಿಕ ನಗರದಲ್ಲಿ 93 ಲಕ್ಷ ರೂ. ವೆಚ್ಚದಲ್ಲಿ ಅಮೃತ ಯೋಜನೆಯಡಿ 93 ಲಕ್ಷ ರೂ. ವೆಚ್ಚದಲ್ಲಿ ಸುಂದರ ಉದ್ಯಾನವನ ನಿರ್ಮಿಸಲಾಗಿದೆ. ಉದ್ಯಾನವನದಲ್ಲಿನ ಹುಲ್ಲಿನ ಹಾಸಿಗೆ ನೋಡಿದರೆ ಶ್ರೀಮಂತರ ಮನೆಯಂಗಳದಲ್ಲಿ ನಿರ್ವಹಿಸುವ ರೀತಿಯಲ್ಲಿ ಕಂಡು ಬರುತ್ತದೆ. ವಿದೇಶಗಳ ಮರಗಳು, ವಿವಿಧ ಬಗೆಯ ಹೂವು ಬಳ್ಳಿಗಳು ಕಣ್ಣಿಗೆ ಮುದ ನೀಡುತ್ತವೆ. ಟ್ರಾಫಿಕ್‌ ಅಂತೂ ಮಾದರಿ ಎನ್ನುವಂತೆ ನಿರ್ಮಿಸಲಾಗಿದೆ.

ಯೋಗ ಮಾಡುವವರಿಗೆ ಅನುಕೂಲವಾಗಲೆಂದು ಯೋಗ ಕಟ್ಟೆ ನಿರ್ಮಿಸಲಾಗಿದೆ. ಮಕ್ಕಳ ಆಟಿಕೆ ಸಾಮಾನುಗಳಿಗೆ ಬರವಿಲ್ಲ. ಹೀಗಾಗಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಮನಸ್ಸಿಗೆ ಹಿಡಿಸುವ ಈ ಉದ್ಯಾನವನ ಮಹಾನಗರಕ್ಕೊಂದು ಮಾದರಿಯಾಗಿದೆ. ಈ ಸುಂದರ ಉದ್ಯಾನವದಲ್ಲಿ ಬೆಳಗ್ಗೆ ಮತ್ತು ಸಂಜೆ ಜನಜಂಗುಳಿ ಎನ್ನುವಂತೆ ಬಡಾವಣೆ ಹಾಗೂ ಸುತ್ತಮುತ್ತಲಿನ ನಾಗರಿಕರು ಆಗಮಿಸಿ ವಿಹರಿಸುತ್ತಿರುತ್ತಾರೆ. ಅಲ್ಲಲ್ಲಿ ಕುಳಿತುಕೊಳ್ಳಲು ಆರಾಮ ಕುರ್ಚಿಗಳನ್ನು ಬಹೋಪಯೋಗಿ ಎನ್ನುವಂತೆ ಅಳವಡಿಸಲಾಗಿದೆ.

ಅದೇ ರೀತಿ ಡಾಕ್ಟರ್‌ ಕಾಲೋನಿಯಲ್ಲಿ ಅನುಭವ ಮಂಟಪ ಹಿಂದುಗಡೆಯಲ್ಲೂ 50 ಲಕ್ಷ ರೂ. ವೆಚ್ಚದಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಇಲ್ಲೂ ಸಿಂಧೆ-ಸ್ವಸ್ತಿಕ ನಗರದಂತೆ ಸುಂದರವಾಗಿ ನಿರ್ಮಾಣಗೊಂಡಿದೆ. ಆದರೆ ಜಾಗ ಸ್ವಲ್ಪ ಕಡಿಮೆ ಇದೆ. ಇಲ್ಲೂ ಸುಂದರ ಪರಿಸರಕ್ಕೆ ಸಾಥ್‌ ನೀಡುವ ಎಲ್ಲ ಅಂಶಗಳಿವೆ. 

ಸಾರ್ವಜನಿಕರ ದೇಣಿಗೆಯಿಂದ ನಿರ್ವಹಣೆ: 2016-17ನೇ ಸಾಲಿನ ಕೇಂದ್ರ ಸರ್ಕಾರದ ಅಮೃತ ಯೋಜನೆ ಅಡಿಯಲ್ಲಿ ಈ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆಗೆಂದು ಪಾಲಿಕೆ ಬಳಿ ಅಗತ್ಯ ಸಂಪನ್ಮೂಲ ಹಾಗೂ ಸಿಬ್ಬಂದಿ ಇರಲಿಲ್ಲ. ಉದ್ಯಾನವನ ನಿರ್ಮಿಸುವುದು ದೊಡ್ಡದಲ್ಲ. ನಿರ್ವಹಣೆ ಮಾಡೋದು ಬಹು ಮುಖ್ಯವಾಗಿದೆ. ಈ ಎರಡೂ ಸಾರ್ವಜನಿಕ ಉದ್ಯಾನವನ ನಿರ್ವಹಣೆಗೆಂದು ಬಡಾವಣೆಯ ಎಲ್ಲ ನಾಗರಿಕರು ವರ್ಷಕ್ಕೆ ಸಾವಿರ ರೂ ನೀಡುತ್ತಾರೆ. ಇದೇ ಹಣದಿಂದ ಪಾಲಿಕೆ ಇಬ್ಬರನ್ನು ನಿರ್ವಹಣೆ ಕೆಲಸದ ಜವಾಬ್ದಾರಿಗೆಂದು ನೇಮಿಸಿದೆ.

ಹೀಗಾಗಿ ಉದ್ಯಾನವನ ಸೊಬಗು ದಿನೇ-ದಿನೇ ಹೆಚ್ಚಳವಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಹುಪಯೋಗಿಯನ್ನಾಗಿಸಲು ಪಾಲಿಕೆ ಸದಸ್ಯ ಆರ್‌.ಎಸ್‌. ಪಾಟೀಲ ಜತೆಗೆ ಬಡಾವಣೆ ನಾಗರಿಕರು ಮುಂದಾಗಿದ್ದಾರೆ. 

ತ್ರಿವೇಣಿ ಸಂಗಮ
ವಾರ್ಡ್‌ ನಂ. 30 ವಿಶಿಷ್ಟ್ಯತೆಯಿಂದ ಕೂಡಿದೆ. ಕಲಬುರಗಿ ಉತ್ತರ-ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಗ್ರಾಮೀಣ ಈ ಮೂರು ವಿಧಾನಸಭಾ ಕ್ಷೇತ್ರಗಳ ಭಾಗಗಳನ್ನು ಒಳಗೊಂಡಿರುವ ಈ ವಾರ್ಡ್‌ ಮಹಾನಗರದಲ್ಲಿಯೇ ದೊಡ್ಡದಾದ ವಾರ್ಡ್‌ ಆಗಿದೆ. 26 ಬಡಾವಣೆ ಹೊಂದಿರುವ ಈ ವಾರ್ಡ್‌ನಲ್ಲೀಗ 15 ಕೋ.ರೂ ವೆಚ್ಚದ ಒಳಚರಂಡಿ ನಿರ್ಮಾಣ ನಡೆದಿದೆ. ರಸ್ತೆಯೇ ಕಾಣದ ಅನೇಕ ಬಡಾವಣೆಗಳಲ್ಲಿಂದು ಉತ್ತಮ ರಸ್ತೆಗಳಾಗಿವೆ. ವಾರ್ಡನಲ್ಲಿರುವ ಇತರ 16 ಉದ್ಯಾನವನಗಳು ಅಭಿವೃದ್ಧಿಯಾಗಿವೆ. ಒಟ್ಟಾರೆ ಅತಿ ಹೆಚ್ಚಿನ ಕೆಲಸ ವಾರ್ಡ್‌ ನ.30ರಲ್ಲಿ ಆಗಿವೆ ಎನ್ನಬಹುದಾಗಿದೆ.

ಪಾಲಿಕೆ ಸದಸ್ಯನಾಗಿ ವಾರ್ಡ್‌ ನಂ. 30ರಲ್ಲಿ ಕೈಲಾದ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಗಲಿರಳು ಶ್ರಮಿಸಲಾಗಿದೆ. ಸುಂದರ ಉದ್ಯಾನವನಗಳಿಗೆ ಬರುವ ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ ಸಾಕು. ಒಳಚರಂಡಿ ನಿರ್ಮಾಣ ಕಾರ್ಯ ವಾರ್ಡ್‌ನಾದ್ಯಂತ ನಡೆದಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಪಾಲಿಕೆ ಸದಸ್ಯನಾಗಿ ಯಾವ ಕೆಲಸ ಮಾಡಬೇಕೆಂಬುದರ ಬಗ್ಗೆ ತೃಪ್ತಿ ಹೊಂದಲಾಗಿದೆ. ಸುಂದರವಾಗಿ ನಿರ್ಮಾಣಗೊಂಡಿರುವ ಉದ್ಯಾನವನಗಳಿಗೆ ಪಾಲಿಕೆ ಆಯುಕ್ತರನ್ನು ಕರೆದುಕೊಂಡು ಬಂದು ತೋರಿಸಲಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ವಿನಂತಿಸಲಾಗಿದೆ. 
 ಆರ್‌.ಎಸ್‌. ಪಾಟೀಲ, ವಾರ್ಡ್‌ ನಂ. 30ರ ಸದಸ್ಯ 

„ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.