ಸಂತ್ರಸ್ತರ ಮನೆಗೆ ಪ್ರಿಯಾಂಕ್‌ ಭೇಟಿ-ಸಾಂತ್ವನ


Team Udayavani, Mar 29, 2019, 12:03 PM IST

gul-4

ಚಿತ್ತಾಪುರ: ಕ್ಯಾಂಟರ್‌ ಹಾಗೂ ಕ್ರೂಸರ್‌ ಮಧ್ಯೆ ಕಳೆದ ಮಾ. 22ರಂದು ಭೀಕರ ಅಪಘಾತ ಸಂಭವಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಬಳಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಪಟ್ಟಣದ ಒಂಭತ್ತು ಜನರ ಮನೆಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಲೂಕಿನ ಅಲ್ಲೂರ ಬಿ. ಗ್ರಾಮದ ಶ್ರೀನಾಥ ಈಶ್ವರ ನಾಲವಾರ (25), ಪಟ್ಟಣದವರಾದ ಸಾಗರ ಶಾಂತಪ್ಪ ದೊಡ್ಡಮನಿ (22), ಮುಜಾವರ ಚಾಂದ ಮಶಾಕಸಾಬ್‌ ಮುಜಾವರ್‌ (26), ಗುರು ಸಾಯಬಣ್ಣ ಹಕೀಮ್‌ (32), ಅಜೀಮ್‌ ಅಬ್ದುಲ್‌ ರಹೇಮಾನ ಶೇಕ್‌ (26), ಶಾಕೀರ್‌ ಅಬ್ದುಲ್‌ ರಹೇಮಾನ ಶೇಕ್‌ (24), ಯುನೂಸ್‌ ಸರ್ವರ್‌ ಪಟೇಲ್‌ ಕಡಬೂರ (25), ಮನ್ಸೂಫ್‌ ಸರ್ವರ್‌ ಪಟೇಲ್‌ ಕಡಬೂರ (28), ಅಂಬರೀಶ ಲಕ್ಷ್ಮಣ ದೊರೆ (28) ಮೃತಪಟ್ಟ ದುರ್ದೈವಿಗಳು.

ಮುಗಿಲು ಮುಟ್ಟಿದ ಆಕ್ರಂದನ: ಪಟ್ಟಣದ ಜಾಫರ್‌ ಗಂಜ್‌ ಏರಿಯಾದ ಒಂದೇ ಮನೆಯ ಯುನೂಸ್‌ ಸರ್ವರ್‌ ಪಟೇಲ್‌, ಮನಸೂಫ್‌ ಸರ್ವರ್‌ ಪಟೇಲ್‌ ಮೃತಪಟ್ಟಿದ್ದು, ಇವರ ಮನೆಗೆ ಸಾಂತ್ವನ ಹೇಳಲು ಬರುತ್ತಿದ್ದಂತೆ ಮೃತರ ತಾಯಿ, ಪತ್ನಿ ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ನಮಗೆ ಇನ್ಯಾರು ಗತಿ ಸಾಹೇಬರೆ, ಇರುವ ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಮದುವೆ ಆಗಿ ಎರಡು ವರ್ಷವೂ ಆಗಿಲ್ಲ. ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಇನ್ನು ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡರು.

ಅದೇ ಏರಿಯಾದ ಅಜೀಮ್‌ ಶೇಕ್‌, ಶಾಕೀರ್‌ ಶೇಕ್‌ ಎನ್ನುವ ಸಹೋದರರು ಮೃತಪಟ್ಟಿದ್ದು, ಇವರ ಮನೆಗೆ ಸಚಿವರು ಭೇಟಿ ನೀಡಿದಾಗ, ಗೋವಾ ಪ್ರವಾಸಕ್ಕೆ ಹೋಗಬೇಡ ಅಂದಿದ್ವಿ. ಆದ್ರೂ ಹೋಗಿ ಶವವಾಗಿ ಬಂದ್ರು ಎಂದು ಅತ್ತರು. ಇದನ್ನು ಕಂಡು ಸಚಿವರ ಕಣ್ಣಲ್ಲೂ ನೀರು ಜಿನುಗಿತು.

ಅಂಬರೀಶ ಲಕ್ಷ್ಮಣ ದೊರೆ ಮೃತಪಟ್ಟಿದ್ದು, ಇನ್ನೊಬ್ಬ ಸಹೋದರ ಆಕಾಶ ಲಕ್ಷ್ಮಣ ದೊರೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೇ ಮನೆಯಲ್ಲಿ ಒಬ್ಬ ಸಹೋದರ ಮೃತಪಟ್ಟಿದ್ದು, ಇನ್ನೊಬ್ಬ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮನೆಗೆ ಭೇಟಿ ನೀಡಿದಾಗ ಮದುವೆ ಮಾಡಿ ಎರಡು ವರ್ಷವೂ ಕಳೆದಿಲ್ಲ.

ಒಂದು ಮಗು ಇದೆ. ಇದನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಿ ಎಂದು ಕುಟುಂಬದವರು ಅಂಗಲಾಚಿದರು. ನಂತರ ಆಶ್ರಯ ಕಾಲೋನಿಯ ಸಾಗರ, ಹೋಳಿಕಟ್ಟಾದ ಗುರು, ಬಾಹರಪೇಠದ ಮುಜಾವರ್‌ ಅವರ ಮನೆಗೆ ಭೇಟಿ ನೀಡಿ, ಅಲ್ಲಿಂದ ಅಲ್ಲೂರ ಗ್ರಾಮದ ಶ್ರೀನಾಥ ಅವರ ಮನೆಗೆ ತೆರಳಿದ
ಸಚಿವರು ಸಾಂತ್ವನ ಹೇಳಿದರು. ಈ ವೇಳೆ ಮದುವೆ ಶ್ರೀನಾಥನ ಮದುವೆ ಆಮಂತ್ರಣ ಪತ್ರಿಕೆ ನೀಡಿದ ಕುಟುಂಬದವರು, ಇನ್ನು ಹತ್ತು ದಿನದಲ್ಲಿ ಮದುವೆ ಆಗಬೇಕಿತ್ತು. ಎಲ್ಲರಿಗೂ ಕಾರ್ಡ್‌ ಹಂಚಿದ್ದೇವೆ. ಇದೀಗ ಯಾರ ಮದುವೆ ಮಾಡೋದು ಎಂದು ಅಳಲು ಪ್ರಾರಂಭಿಸಿದರು.

ಎಲ್ಲರ ಅಳಲನ್ನು ಆಲಿಸಿದ ಸಚಿವರು, ಇದೀಗ ನೀತಿ ಸಂಹಿತೆ ಜಾರಿಯಾಗಿದೆ. ಲೋಕಸಭೆ ಚುನಾವಣೆ ಮುಗಿದ ಕೂಡಲೇ ನಿಮಗೆ ಸೂಕ್ತ ರೀತಿಯ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ, ಅಜೀಜ ಸೇಠ ರಾವೂರ, ಮುಕ್ತಾರ ಪಟೇಲ್‌, ಜಾಫರ್‌ ಪಟೇಲ್‌ ಕುನ್ನೂರ್‌, ಪಾಶಾ ಖುರೇಶಿ, ಚಂದ್ರಶೇಖರ ಕಾಶಿ, ವಿನೋದ್‌ ಗುತ್ತೇದಾರ, ಶೀಲಾ ಕಾಶಿ, ಶಿವಕಾಂತ ಬೆಣ್ಣೂರಕರ್‌, ಜಫರುಲ್‌ ಹಸನ್‌, ಶರಣು ಡೋಣಗಾಂವ, ಶೇಖ ಬಬು, ಶಿವಾಜಿ ಕಾಶಿ, ವೆಂಕಟೇಶ ಕುಲಕರ್ಣಿ, ಸ್ವಪ್ನಾ ಪಾಟೀಲ, ಹಣಮಂತ ಸಂಕನೂರ, ಭೀಮು ಹೋತಿನಮಡಿ, ಮಲ್ಲಿಕಾರ್ಜುನ ಕಾಳಗಿ, ನಜೀರ ಆಡಕಿ, ನಯೀಮ್‌, ರಫಿಕ್‌, ಮಲೀಕ್‌, ತಿಮ್ಮು ಬೋವಿ ಸಚಿವರ ಜತೆಯಲ್ಲಿದ್ದರು.

ಟಾಪ್ ನ್ಯೂಸ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

crime (2)

Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.