ಸೂರ್ಯನಗರಿಗೆ ತಂಪೆರೆದ ಮಳೆ
•ಬರಗಾಲಕ್ಕೆ ನಲುಗಿದ ಜನತೆ ಮೊಗದಲ್ಲಿ ಸಂತಸ•ವೀರಾ ನದಿಯಿಂದ ಭೀಮಾ ನದಿಗೆ ನೀರು
Team Udayavani, Aug 4, 2019, 10:39 AM IST
ಕಲಬುರಗಿ: ನಗರದಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ವಿದ್ಯಾರ್ಥಿನಿಯರು ನಡೆದುಕೊಂಡು ಹೋದರು.
ಕಲಬುರಗಿ: ಸೂರ್ಯ ನಗರಿ ಖ್ಯಾತಿಯ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ನಾಗರಿಕಲ್ಲಿ ಸಂತಸ ಮನೆ ಮಾಡಿದ್ದು, ಜಿಲ್ಲಾದ್ಯಂತ ತಂಪಿನ ವಾತಾವರಣ ನಿರ್ಮಾಣವಾಗಿದೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ ಅಭಾವದಿಂದ ಜಿಲ್ಲೆಯಿಡಿ ಬರಗಾಲಕ್ಕೆ ತುತ್ತಾಗಿ ಜನತೆ ನಲುಗುವಂತೆ ಆಗಿತ್ತು. ಪ್ರಸಕ್ತ ಮುಂಗಾರು ಆರಂಭವಾಗಿ ಎರಡು ತಿಂಗಳಾಗಿದ್ದರೂ ಮಳೆಯಾಗದೆ ನಾಗರಿಕರಲ್ಲಿ ಮತ್ತೆ ಬರಗಾಲದ ಭೀತಿ ಹುಟ್ಟಿಸಿತ್ತು. ಆಗಾಗ್ಗೆ ಬಿದ್ದ ಅಲ್ಪ-ಸಲ್ವ ಮಳೆ ಆಶ್ರಯದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
ಶುಭ ಶ್ರಾವಣ: ಆಷಾಢ ಕಳೆದು ಶ್ರಾವಣ ಮಾಸ ಆರಂಭ ವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಳೆ ಕೃಪೆ ತೋರಿದ್ದಾನೆ. ಕಳೆದ ಮಂಗಳವಾರ, ಬುಧವಾರ ಜಿಟಿಜಿಟಿ ಮಳೆಯಾಗಿತ್ತು. ಶ್ರಾವಣ ಅಮವಾಸ್ಯೆ ದಿನದಂದು ಗುರುವಾರದಿಂದ ತೀವ್ರಗೊಂಡಿರುವ ವರುಣ ಜಿಲ್ಲಾದ್ಯಂತ ಉತ್ತಮವಾಗಿ ಸುರಿಯಲು ಆರಂಭಿಸಿದೆ.
ಗುರುವಾರ 19 ಮಿಲಿ ಮೀಟರ್ ಮಳೆಯಾಗಿದ್ದರೆ, ಶುಕ್ರವಾರ 17 ಎಂಎಂ ಮಳೆ ಸುರಿದಿದೆ. ಶನಿವಾರ ದಿನವಿಡೀ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಮೂರು ದಿನಗಳಲ್ಲಿ 33 ಎಂಎಂ ಮಳೆಯಾಗಿದೆ. ಇದರಿಂದ ತೊಗರಿ, ಹೆಸರು, ಸೂರ್ಯಕಾಂತಿ, ಹತ್ತಿ, ಅಲಸಂದಿ ಬೆಳೆ ನಳನಳಿಸುವಂತೆ ಆಗಿದೆ. ಜತೆಗೆ ಚಳಿಯೂ ಹೆಚ್ಚಿದೆ. ಜನತೆ ಸ್ವೆಟರ್, ಜರ್ಕಿನ್ ಖರೀದಿಯಲ್ಲಿ ತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ