ವಾಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಪಥ ಸಂಚಲನ


Team Udayavani, Oct 5, 2018, 10:47 AM IST

gul-2.jpg

ವಾಡಿ: 55 ಜನರಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಕಮಾಂಡೋಗಳು ಹಾಗೂ 30ಕ್ಕೂ ಹೆಚ್ಚು ಸ್ಥಳೀಯ
ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಪಥ ಸಂಚಲನ ನಡೆಸಿದರು.

ಹೈದ್ರಾಬಾದದಿಂದ ಪಟ್ಟಣಕ್ಕೆ ಬಂದಿದ್ದ ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ (ಆರ್‌ ಎಎಫ್‌) ಬಸವೇಶ್ವರ ವೃತ್ತ, ರೈಲು ನಿಲ್ದಾಣ, ಅಂಬೇಡ್ಕರ್‌ ವೃತ್ತ, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಚೌಕ್‌, ಕಾಕಾ ಚೌಕ್‌, ಶಿವಾಜಿ ಚೌಕ್‌, ನೇತಾಜಿ ನಗರ ಮಾರ್ಗವಾಗಿ ಶ್ರೀನಿವಾಸ ಗುಡಿ ವೃತ್ತದವರೆಗೆ ಸಂಚರಿಸಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ, ಉಗ್ರವಾದಿಗಳ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಈ ಪಥ ಸಂಚಲನ ನಡೆಸಿಲ್ಲ. ಬದಲಿಗೆ ಪ್ರತಿವರ್ಷ ಗುರುತಿಸಲಾದ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಆರ್‌ ಎಎಫ್‌ ಕಮಾಂಡೋಗಳ ಪಥ ಸಂಚಲನ ನಡೆಸಲಾಗುತ್ತಿದೆ. ಜನಸ್ನೇಹಿ ಪೊಲೀಸ್‌ ನಿಯಮಗಳು ಜಾರಿಗೆ ಬಂದ ಮೇಲೆ ಅಪರಾಧ ಪ್ರಕರಣಗಳು ಸಾಕಷ್ಟು ನಿಯಂತ್ರಣಕ್ಕೆ ಬಂದಿವೆ. ಹಿಂದೆ ಘಟಿಸುತ್ತಿದ್ದಷ್ಟು ಕೋಮು ಗಲಭೆಗಳು ಈಗ ಸಂಭವಿಸುತ್ತಿಲ್ಲ ಎಂದರು.

ಜನರು ಮತ್ತು ಪೊಲೀಸರ ನಡುವೆ ಉಂಟಾಗಿರುವ ಆತ್ಮವಿಶ್ವಾಸ ಸಮಾಜಘಾತುಕ ಮನಸ್ಸುಗಳ ಪರಿವರ್ತನೆ
ಮಾಡುವಲ್ಲಿ ಯಶಸ್ವಿಯಾಗಿದೆ. ಪೊಲೀಸ್‌ ಇಲಾಖೆ ಸದಾಕಾಲ ಜನರ ಜತೆಗಿದೆ ಎಂಬುದನ್ನು ಖಾತ್ರಿಪಡಿಸಲು
ಭದ್ರತಾ ಪಡೆಗಳಿಂದ ಪಥ ಸಂಚಲನ ನಡೆಸಲಾಗುತ್ತಿದೆ ಎಂದರು. 

ಪಟ್ಟಣದ ಪೊಲೀಸ್‌ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ, ಆರ್‌ಎಎಫ್‌ ಸಹಾಯಕ ಕಮಾಂಡೋ ರೂಪೇಶ ಆರ್‌.ಎಸ್‌., ಜೀತೇಂದ್ರ ಕುಮಾರ, ಅಭಿಷೇಕ ಸಹಾಯ್‌, ವಿ. ನಾರಾಯಣನ್‌ ಪಥ ಸಂಚಲನದ ನೇತೃತ್ವ ವಹಿಸಿದ್ದರು.

18 ವರ್ಷಗಳ ಹಿಂದೆ ಚರ್ಚ್‌ನಲ್ಲಿ ಸ್ಫೋಟ ಕಳೆದ 18 ವರ್ಷಗಳ ಹಿಂದೆ ವಾಡಿ ಪಟ್ಟಣದ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿದ ಕಮಾಂಡೋ ಮುಖ್ಯಸ್ಥರು ಮಾಹಿತಿ ಕಲೆ ಹಾಕಿದರು. 2000ನೇ ಇಸ್ವಿಯ ಜೂನ್‌ 8 ರಂದು ಬೆಳಗ್ಗೆ 6:10ಕ್ಕೆ ಚರ್ಚ್‌ನ ಪ್ರಾರ್ಥನಾ ಸ್ಥಳದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ನಂತರ ಮೂರು ತಾಸಿನ ಬಳಿಕ 9:10ಕ್ಕೆ ಚರ್ಚ್‌ ಅಂಗಳದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಾವು ನೋವುಗಳು ಸಂಭವಿಸಿರಲಿಲ್ಲ. ಆದರೆ ಚರ್ಚ್‌ನ ಕಿಟಕಿ ಗಾಜುಗಳು ಪುಡಿಪುಡಿಯಾಗಿ ಸ್ಥಳದಲ್ಲಿದ್ದ ನಾಮದೇವ ಹಾಗೂ ಎಸ್‌.ಪೀಟರ್‌ ಎನ್ನುವರಿಗೆ ಗಾಯಗಳಾಗಿದ್ದವು. 

ಯೋಧರು-ಪೋಲಿಸರಿಂದ ಪಥ ಸಂಚಲನ
ಶಹಾಬಾದ: ನಗರದಲ್ಲಿ ಗುರುವಾರ ಡಿವೈಎಸ್‌ಪಿ ನೇತೃತ್ವದಲ್ಲಿ ತೆಲಂಗಾಣದ ತುರ್ತು ಕಾರ್ಯಾಚರಣೆ ಸೇನಾ ಪಡೆಯ ಸುಮಾರು 50ಕ್ಕೂ ಹೆಚ್ಚು ಯೋಧರು ಮತ್ತು ಪೊಲೀಸ್‌ ಅಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ನಗರ ಪೊಲೀಸ್‌ ಠಾಣೆಯಿಂದ ಪ್ರಾರಂಭವಾದ ಪಥ ಸಂಚಲನ ಮಜ್ಜಿದ್‌ ವೃತ್ತ, ಬೆಂಡಿ ಬಜಾರ್‌, ಸುಭಾಷ ವೃತ್ತ, ವಿಪಿ ಚೌಕ್‌, ಭಾರತ್‌ ಚೌಕ್‌, ರೈಲ್ವೆ ನಿಲ್ದಾಣ, ನೆಹರು ವೃತ್ತ, ತ್ರಿಶೂಲ್‌ ಚೌಕ್‌ ನಂತರ ಮಜ್ಜಿದ್‌ ಚೌಕ್‌ ಮುಖಾಂತರ ಪೊಲೀಸ್‌ ಠಾಣೆಗೆ ಆಗಮಿಸಿತು.
 
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್‌ಪಿ ಕೆ. ಬಸವರಾಜ ನಗರಕ್ಕೆ ತುರ್ತು ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಬಂದಿದ್ದು, ಇವರ ಪಥಸಂಚಲನದಿಂದ ಸಾರ್ವಜನಿಕರಲ್ಲಿ ಆಸ್ತಿ -ಪಾಸ್ತಿ ಹಾಗೂ ಜೀವ ರಕ್ಷಣೆಯ ಆತ್ಮ ವಿಶ್ವಾಸ ಮೂಡುತ್ತದೆ ಎಂದರು.

ನಗರದಲ್ಲಿರುವ ಕಾರ್ಖಾನೆಗಳು, ಸೂಕ್ಷ್ಮ ಪ್ರದೇಶಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ವ್ಯಾಪ್ತಿಯಲ್ಲಿರುವ ಪೊಲೀಸ್‌ ಠಾಣೆಗಳ ವಿವರಗಳನ್ನು ಪಡೆದು ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ಮಾಡಲು ಪಥಸಂಚಲನದಿಂದ ಸಹಾಯಕವಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡಿದಾಗ ಸೇನಾ ಪಡೆ ನಮಗೆ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಪಿಐ ಕಪಿಲದೇವ, ಕಾರ್ಯಾಚರಣೆ ಸೇನಾ ಪಡೆ ಮುಖ್ಯಸ್ಥ ರೂಪೇಶ ಆರ್‌.ಎಸ್‌., ಆರಕ್ಷಕ ಡಿಎನ್‌ಆರ್‌ ಬಲರಾಜಸಿಂಗ್‌, ಆರಕ್ಷಕ ಡಿ.ಅನಾ, ಜಿತೇಂದ್ರಕುಮಾರ,ಅಭಿಷೇಕ ಸಾಹೇಬ, ವಿ.ನಾರಾಯಣ ಇದ್ದರು. 

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.