ನಿರಂತರ ವಿದ್ಯುತ್ ನೀಡಲು ಮನವಿ
Team Udayavani, Oct 25, 2021, 11:05 AM IST
ಯಡ್ರಾಮಿ: ತಾಲೂಕಿನ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಬಿಸಿಲ ನಾಡಿನ ಹಸಿರು ಸೇನೆ ಹಾಗೂ ತಾಲೂಕು ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲೂಕು ಜೆಸ್ಕಾಂ ಉಪ ವಿಭಾಗದ ಎಇಇಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಮರನಾಥ ಸಾಹು ಕುಳಗೇರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜಿನ ಕೊರತೆ ಉಂಟಾಗಿದೆ. ಕ್ರಮಬದ್ಧವಾಗಿ ವಿದ್ಯುತ್ ನೀಡಬೇಕು, ವಿದ್ಯುತ್ ನೀಡುವ ಸಮಯದ ಬಗ್ಗೆ ಆ ಭಾಗದ ರೈತರ ಗಮನಕ್ಕೆ ತರಬೇಕು. ಪಂಪಸೆಟ್ಗಳು ನಿರಂತರವಾಗಿ ನಡೆಯುವಂತಾಗಲು ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಹರಿಸುವಂತೆ ತಾಲೂಕಿನ ರೈತರ ಪರವಾಗಿ ವಿನಂತಿಸುತ್ತೇನೆ ಎಂದರು.
ಮನವಿ ಸ್ವೀಕರಿಸಿದ ಜೆಸ್ಕಾಂ ಎಇಇ ಮಾತನಾಡಿ, ರೈತರ ಸಮಸ್ಯೆ ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಮರನಾಥ ಸಾಹು ಕುಳಗೇರಿ, ಶಫಿವುಲ್ಲಾ ದಖನಿ, ಉಸ್ಮಾನ್ ಬಾಗವಾನ, ಖಾಜಾಪಾಷಾ, ಬಾಬು ಚೌಸಮಗಿ, ಉಸೇನಭಾಷಾ ಚಿಂಚೋಳಿ, ರಾಜಕುಮಾರ, ಅಬ್ದುಲ್ ಚೌದ್ರಿ, ಅವಿನಾಶ, ಸಾಹೇಬಖಾನ್ ಚೌದ್ರಿ, ಶಿವರಾಜ ಚೀಲಾ, ಶಿವರಾಜ ಹೂಗಾರ, ಲಾಳೇಸಾಬ ಕಕ್ಕಳಮೇಲಿ, ಮುತ್ತು ಮುಳ್ಳೊಳ್ಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ