ಅಕ್ರಮ ಮನೆ-ನಿವೇಶನ ಕಬ್ಜೆ ತೆರವಿಗೆ ಆಗ್ರಹ
Team Udayavani, Jun 1, 2022, 12:47 PM IST
ಕಲಬುರಗಿ: ನಗರದಲ್ಲಿ ಕೆಲವು ಜನ, ಸಂಘ, ಸಂಸ್ಥೆಗಳು ಮುಂಗೈ ಜೋರಿನಿಂದ ಖಾಲಿ ನಿವೇಶನ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಸರಕಾರಿ ಜಾಗೆ ಕಬ್ಜೆ ಮಾಡಿಕೊಂಡು ದೊಡ್ಡ ಕಟ್ಟಡ, ಮಾಲ್ಗಳನ್ನು ಮಾಡಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ಭಾರತೀಯ ಯುವ ಸೈನ್ಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈಗಾಗಲೇ ಈ ಕುರಿತು ಪಾಲಿಕೆ ಕಮಿಷನರ್ಗೆ ಮನವಿ ಸಲ್ಲಿಸಲಾಗಿದೆ. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರಿ ಆಸ್ತಿ, ನಿವೇಶನ ಒತ್ತುವರಿ ಮಾಡಿಕೊಂಡು ಮನೆ, ಅಂಗಡಿ, ಮಾಲ್ಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದರಿಂದ ಸರಕಾರಕ್ಕೂ ನಷ್ಟ, ಬರಬೇಕಾಗಿ ರುವ ತೆರಿಗೆ ಮತ್ತು ಇತರೆ ಆದಾಯವೂ ನಷ್ಟವಾಗಿದೆ. ಸ್ವಾಮಿ ವಿವೇಕಾನಂದ ನಗರ, ಸಂತೋಷ ಕಾಲೋನಿ ಸೇರಿದಂತೆ ಹಲವೆಡೆಗಳಲ್ಲಿ ಖುದ್ದು ಅಧಿಕಾರಿಗಳೇ ಭೂಮಿ ಲೂಟಿ ಮಾಡುವ ಜನರಿಗೆ ನಕಲಿ ದಾಖಲೆಗಳನ್ನು ಅಸಲಿ ಎನ್ನುವಂತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಹಲವಾರು ಕಡೆಗಳಲ್ಲಿ ನಿವೇಶನ, ಜಮೀನು ಪರಭಾರೆಯಾಗಿವೆ ಎಂದು ದೂರಿದರು.
ಸೈನ್ಯದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಡೊಣ್ಣಿಗೇರಿ, ಅಧ್ಯಕ್ಷ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರು, ರವಿ ದೇಗಾಂವ್ ಹಾಗೂ ಮಹಿಳೆಯರು, ಅನ್ಯಾಯಕ್ಕೊಳಗಾಗಿರುವ ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್