ಸಮೃದ್ಧ ಮೆಣಸಿನಕಾಯಿ ಬೆಳೆದ ರೈತ
Team Udayavani, Feb 18, 2019, 7:00 AM IST
ಯಡ್ರಾಮಿ: ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದ ಆಂಧ್ರ ಮೂಲದ ರೈತನೊಬ್ಬ ಉತ್ತಮ ಬೆಳೆ ಬೆಳೆದು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾನೆ. ಕೆ. ವೀರಯ್ಯ ಎನ್ನುವರೆ ಪಟ್ಟಣದಿಂದ 3ಕಿ.ಮೀ ದೂರದಲ್ಲಿರುವ 20 ಎಕರೆ ಜಮೀನನ್ನು ಗುತ್ತಿಗೆ ಕರಾರಿನ ಮೇಲೆ ಪಡೆದ
ರೈತ. ಈ ರೈತ ಮೂರು ವರ್ಷ ಕಾಲ ಗುತ್ತಿಗೆ ಕರಾರಿನ ಮೇಲೆ ಭೂಮಿ ಪಡೆದಿದ್ದು, ಪ್ರತಿ ವರ್ಷ 3ಲಕ್ಷ ರೂ. ಮುಂಗಡ ನೀಡಿ 16 ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆ ತೆಗೆದಿದ್ದಾನೆ. ವರ್ಷಪೂರ್ತಿ ಸಮಯಕ್ಕೆ ಸರಿಯಾಗಿ ಔಷಧೋಪಚಾರ ಮಾಡಿ, ಸರಿ ಪ್ರಮಾಣದ ಗೊಬ್ಬರ ಉಣಿಸಿ ಸಮೃದ್ಧ ಬೆಳೆ ಬೆಳೆದು ಮಾದರಿಯಾಗಿದ್ದಾನೆ ಈ ರೈತ. ಅಲ್ಲದೇ ಹಸಿ ಮೆಣಸಿನಕಾಯಿ ಮಾರಾಟದಿಂದ ತಾನು ನೀಡಿದ ಕರಾರಿನ ಹಣವನ್ನು ಮರಳಿ ಪಡೆದಿದ್ದಾನೆ. ಮುಂದೆ ಬರುವ ಕೆಂಪು ಮೆಣಸಿನಕಾಯಿ ಪೂರ್ಣ ಲಾಭ ತಂದು ಕೊಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಾನೆ.
ಹೊಲದೊಳಗೆ ಜೋಪಡಿ ಹಾಕಿಕೊಂಡು ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸುತ್ತೇವೆ. ಭೂಮಿಗೆ ತಕ್ಕಂತೆ ಗೊಬ್ಬರ ಹಾಕುತ್ತೇವೆ. ಔಷಧ ಮತ್ತು ನೀರು ಬಿಡುವ ಕೆಲಸವನ್ನು ನಾನೇ ಮಾಡ್ತಿನಿ. ಇಲ್ಲಿನ ರೈತರು ಭೂಮಿಗೆ ಖರ್ಚು ಮಾಡಲು ಹಿಂಜರಿಯುತ್ತಾರೆ. ಹಸಿ ಮೆಣಸಿನಕಾಯಿ ಮಾರಿ ಎರಡೂಮೂರು ಲಕ್ಷ ರೂ. ಬಂದಿವೆ. ಕೆಂಪುಕಾಯಿಗೆ ಸದ್ಯದ ಬೆಲೆ ಸಿಕ್ಕರೆ 25 ಲಕ್ಷ ರೂ. ವರೆಗೂ ಲಾಭ ಆಗುತ್ತದೆ.
ಕೆ. ವೀರಯ್ಯ, ಆಂಧ್ರ ಮೂಲದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ