ಶೀಘ್ರ 500 ಜನರ ವಿರುದ್ಧ ರೌಡಿಶೀಟ್‌

ಹಾಲಿ ರೌಡಿ ಶೀಟರ್‌ ಪಟ್ಟಿ ಪರಿಷ್ಕರಣೆ,ರೌಡಿಸಂ-ದರೋಡೆ ನಿಗ್ರಹಕ್ಕೆ ಕಠಿಣ ಕ್ರಮ

Team Udayavani, Oct 30, 2020, 6:47 PM IST

gb-tdy-1

ಕಲಬುರಗಿ: ನಗರ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಶೀಘ್ರವೇ 500 ಜನ ಪುಡಿ ರೌಡಿಗಳು ಮತ್ತು ದುಷ್ಕರ್ಮಿಗಳು ರೌಡಿ ಶೀಟ್‌ ಗೆ ಸೇರಲಿದ್ದಾರೆ.

ಈಗಾಗಲೇ 1,429 ಮಂದಿ ಮೇಲೆ ರೌಡಿ ಶೀಟ್‌ ಇದ್ದು, ಅವರಲ್ಲಿ ಕೆಲ ರೌಡಿಗಳು ಅನಾರೋಗ್ಯದಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದಾರೆ. ಕೆಲವರು 60 ವರ್ಷಕ್ಕೂ ಮೇಲ್ಪಟ್ಟವರೂ ಇದ್ದಾರೆ. ಮತ್ತೆ ಕೆಲವರು ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಹೀಗಾಗಿ ಹಾಲಿ ರೌಡಿ ಶೀಟರ್‌ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹಿರಿಯ ಪೊಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ.

ರೌಡಿ ಶೀಟರ್‌ಗೆ ಸೇರ್ಪಡೆಯಿಂದ ಯಾವುದೇ ಕೃತ್ಯಗಳು ನಡೆದಾಗ ರೌಡಿಗಳ ಮೇಲೆ ನೇರ ನಿಗಾ ವಹಿಸಲು ಸಹಕಾರಿಯಾಗಲಿದೆ. ಆದ್ದರಿಂದ ಸದ್ಯ ಕುಕೃತ್ಯಗಳಿಂದ ದೂರು ಇರುವ ರೌಡಿ ಶೀಟರ್‌ ಗಳನ್ನು ಪಟ್ಟಿಯಿಂದ ಕೈಬಿಟ್ಟು, ನಿರಂತರವಾಗಿ ಅಪರಾಧ ಕೃತ್ಯದಲ್ಲಿ ತೊಡಗಿರುವ ಮತ್ತು ಆಗಾಗ್ಗೆ ಬಾಲ ಬಿಚ್ಚಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿರುವ ಪುಡಿ ರೌಡಿಗಳನ್ನು ಹೊಸ ಪಟ್ಟಿಗೆ ಸೇರಲಾಗುತ್ತದೆ. ಈಗಾಗಲೇ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಿಂದ 500 ಮಂದಿಯನ್ನು ಗುರುತಿಸಲಾಗಿದೆ. ಅವರೆನ್ನಲ್ಲ ಹೊಸ ರೌಡಿ ಶೀಟರ್‌ ಪಟ್ಟಿಗೆ ಸೇರಿಸಲು ತಯಾರಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ಖಚಿತ ಪಡಿಸಿವೆ.

ಹೊಸದಾಗಿ ರೌಡಿ ಶೀಟ್‌ಗೆ ಗುರುತಿಸಲಾದ 500 ಮಂದಿ ಗಲ್ಲಿಗಳಲ್ಲಿನ ಪುಂಡ ಪೋಕರಿಗಳು, ರಸ್ತೆ ಬದಿ ನಿಂತು ಹೆದರಿಸಿ, ಬೆದರಿಸಿ ದುಷ್ಕೃತ್ಯಗಳನ್ನು ನಡೆಸುವವರು ಸೇರಿದ್ದಾರೆ. ಇವರನ್ನು ರೌಡಿ ಶೀಟರ್‌ಗೆ ಸೇರಿಸುವುದರಿಂದ ರೌಡಿಗಳನ್ನು ನಿಗ್ರಹಿಸಲು ಅನುಕೂಲವಾಗಲಿದೆ. ಸಮಾಘಾತುಕ ಕೃತ್ಯ ಮತ್ತು ಅನಗತ್ಯ ಉಪಟಳಕ್ಕೆ ತಡೆಯಲು ಸಾಧ್ಯವಾಗಲಿದೆ.

ಮೂರು ಹಂತದ ರೌಡಿಸಂ: ಕೊಲೆ ಯತ್ನ, ದರೋಡೆ ಯತ್ನ ಸೇರಿ ಹಲವು ರೀತಿಯ ಅಪರಾಧಗಳಲ್ಲಿ  ತೊಡಗಿಕೊಂಡಿರುವ ಆರೋಪಿಗಳು ಹೆಚ್ಚಾಗಿದ್ದು, ಕಾನೂನು-ಸುವ್ಯವಸ್ಥೆ ಬಿಗಿಗೊಳಿಸಲು ಒತ್ತು ನೀಡಲಿದೆ. ಸಕ್ರಿಯ ಪುಢಾರಿಗಳು ರೌಡಿ ಶೀಟರ್‌ ಪಟ್ಟಿಗೆ ಸೇರಿಸಲಾಗುವುದು. ಮೂರು ಹಂತದಲ್ಲಿ ರೌಡಿಗಳ ಲಿಂಕ್‌ ಇದ್ದು, ಅಪರಾಧಗಳನ್ನು ಮಟ್ಟ ಹಾಕಲು ರೌಡಿಗಳ ಲಿಂಕ್‌ಗೆ ಕತ್ತರಿ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು.

ಕಲಬುರಗಿ ನಗರದಲ್ಲಿ ನೇರವಾಗಿ ಫೀಲ್ಡ್‌ಗೆ ಇಳಿಯುವ ನಿಜವಾದ ರೌಡಿಗಳುಇದ್ದಾರೆ. ಕೆಲವರು ತಾವು ತೆರೆ-ಮೆರೆಯಲ್ಲೇ ಕುಳಿತು ರೌಡಿಗಳನ್ನು ಬೆಳೆಸುವವರು ಹಾಗೂ ಅಪರಾಧಗಳಿಗೆ ಪ್ರಚೋದನೆ ನೀಡುವವರು. ಮತ್ತೂಂದಿಷ್ಟು ಬೆಳೆಯುವ ಹಂತದ ರೌಡಿಗಳು… ಹೀಗೆ ಮೂರು ಹಂತದಲ್ಲಿ ರೌಡಿಸಂ ನಡೆಯುತ್ತಿದೆ. ಈ ಮೂರು ಹಂತದ ರೌಡಿಸಂಅನ್ನು ನಿಯಂತ್ರಿಸಲು ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮತ್ತಿಬ್ಬರು ಗಡಿಪಾರು: ಮತ್ತೋರ್ವ ಲಿಸ್ಟ್‌ನಲ್ಲಿ :  ಹದ್ದು ಮೀರಿ ಅಪರಾಧ ಕೃತ್ಯಗಳನ್ನು ತೊಡಗಿರುವ ಮತ್ತಿಬ್ಬರು ರೌಡಿಗಳನ್ನು ಇತ್ತೀಚೆಗೆ ಗಡಿ ಪಾರು ಮಾಡಲಾಗಿದೆ. ಪೊಲೀಸ್‌ ಆಯುಕ್ತ ಎನ್‌.ಸತೀಶ್‌ಕುಮಾರ ಮತ್ತು ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು ಅವರು ಚರ್ಚಿಸಿ, ಶರಣು ಅಲಿಯಾಸ್‌

ಕೆಂಚ ಶಣ್ಯಾ ಮತ್ತು ವಿನೋದ್‌ ಸಿಂಗೆಯನ್ನು ಗಡಿಪಾರು ಆದೇಶ ಮಾಡಿದ್ದಾರೆ. ಕೆಂಚ ಶಣ್ಯಾನ  ವಿರುದ್ಧ ಏಳು ಅಪರಾಧ ಪ್ರಕರಣಗಳು ಮತ್ತು ಮತ್ತೂಂದು ಪ್ರಚೋದನೆ ಪ್ರಕರಣ ಇದ್ದು, ಇವನನ್ನು ಚಾಮರಾಜನಗರಕ್ಕೆ ಗಡಿಪಾರು ಮಾಡಲಾಗಿದೆ. ಅದೇ ರೀತಿ ವಿನೋದ್‌ ಸಿಂಗೆ ವಿರುದ್ಧ ಎಂಟು ಅಪರಾಧ ಪ್ರಕರಣಗಳು ಹಾಗೂ ನಾಲ್ಕು ಪ್ರತಿಬಂಧಕ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. ಇವನನ್ನು ಉಡುಪಿ ಜಿಲ್ಲೆಗೆ ಗಡಿ ಪಾರುಗೊಳಿಸಲಾಗಿದೆ. ಅಲ್ಲದೇ, ಮತ್ತೋರ್ವನನ್ನೂ ಗಡಿಪಾರು ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಅವನನ್ನು ಗಡಿ ಪಾರು ಮಾಡಲಾಗುವುದು ಎಂದು ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು ತಿಳಿಸಿದ್ದಾರೆ.

 

ರಂಗಪ್ಪ ಗಧಾರ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.