ವಾಡಿ: ಮುಳುಗಿದ ಹೆಣ ಹುಡುಕುವಾಗ ಸಿಕ್ಕಿತು ತೇಲಿ ಬಂದ ಹೆಣ!
Team Udayavani, Aug 10, 2022, 6:29 PM IST
ವಾಡಿ: ನದಿಯಲ್ಲಿ ಮುಳುಗಿದ ಮೀನುಗಾರನ ಹೆಣ ಹುಡುಕುತ್ತಿದ್ದಾಗ ಎಲ್ಲಿಂದಲೋ ತೇಲಿ ಬರುತ್ತಿದ್ದ ಅಪರಿಚಿತ ಪುರುಷನ ಹೆಣವೊಂದು ಪತ್ತೆಯಾದ ಪ್ರಸಂಗ ಚಿತ್ತಾಪುರ ತಾಲೂಕಿನ ಮೂಡಬೂಳ ಗ್ರಾಮ ಸಮೀಪದ ಕಾಗಿಣಾ ನದಿಯಲ್ಲಿ ನಡೆದಿದೆ.
ಮೂಡಬೂಳ ಗ್ರಾಮದ ಹತ್ತಿರದ ಕಾಗಿಣ ನದಿ ದಂಡೆಯಲ್ಲಿ ಮಂಗಳವಾರ ಮಿನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಶೇಖ್ ಅಹ್ಮದ್ ಎಂಬ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹುಡುಕುತ್ತಿರುವಾಗ ಮುಳುಗಿದ ವ್ಯಕ್ತಿಯ ಬದಲು ನೀರ ಅಲೆಗಳ ಮೇಲೆ ತೇಲಿ ಬರುತ್ತಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ದಂಡೋತಿ ಗ್ರಾಮ ಕಡೆಯಿಂದ ನದಿಯಲ್ಲಿ ಹರಿದು ಬರುತ್ತಿರುವ ಶವವನ್ನು ಸ್ಥಳೀಯರು ಗಮನಿಸಿದ್ದರು. ಆ ಶವವನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಮುಳುಗಿದ ಮೀನುಗಾರನನ್ನು ಹುಡುಕಲು ಬೋಟ್ ಮೂಲಕ ಭಾಗೋಡಿ ಗ್ರಾಮದ ವರೆಗೆ ಹೋಗಿ ಬಂದರೂ ಅಗ್ನಿಶಾಮಕ ದಳದ ಸಿಬಂದಿಗೆ ಕಾಣೆಯಾದ ಶವ ಪತ್ತೆಯಾಗಲಿಲ್ಲ. ಆದರೂ ಶವ ಪತ್ತೆಗೆ ಶೋಧ ಮುಂದುವರೆದಿದೆ.
ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು