ಬಿತ್ತನೆ ಬೀಜ-ರಸಗೊಬ್ಬರಕ್ಕೆ ತಪ್ಪುತ್ತಿಲ್ಲ ರೈತರ ಪರದಾಟ
Team Udayavani, Jun 4, 2022, 11:15 AM IST
ಆಳಂದ: ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಐದು ಹೋಬಳಿ ಸೇರಿ ಒಟ್ಟು 128454 ಹೆಕ್ಟೇರ್ ಪ್ರದೇಶ ಬಿತ್ತನೆಯಲ್ಲಿ 555521ಟನ್ ಆಹಾರಧಾನ್ಯ ಉತ್ಪಾದನೆಗೆ ಕೃಷಿ ಇಲಾಖೆ ಅಂದಾಜು ಗುರಿ ನಿಗದಿಪಡಿಸಿದೆ.
ಸದ್ಯ ಮಳೆ ಸುರಿದರೆ ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತ ಸಮುದಾಯಕ್ಕೆ ಬಿತ್ತನೆ ಚಿಂತೆಯಾಗಿ ಎಲ್ಲಿ ನೋಡಿದರಲ್ಲಿ ಬೀಜ, ಗೊಬ್ಬರ ಖರೀದಿಗಾಗಿ ಅಲೆಯತೊಡಗಿದ್ದಾರೆ. ಬೇಡಿಕೆ ಕಂಪನಿಯ ಬೀಜ, ಗೊಬ್ಬರ ಖರೀದಿಗೆ ಆಗ್ರೋ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರಗಳತ್ತ ಮುಖಮಾಡಿದ್ದಾರೆ. ಮುಂಗಾರು ಬಿತ್ತನೆಗೆ ಸಜ್ಜಾಗುವ ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಕೈಗೆಟಕುವ ದರದಲ್ಲಿ ದೊರೆತು ಬಿತ್ತನೆಗೆ ಹದವಾದ ಮಳೆ ಸುರಿದು ಅನುಕೂಲವಾಗಲಿ ಎಂದು ಪ್ರಾರ್ಥಿಸತೊಡಗಿದ್ದಾರೆ.
ಬಿತ್ತನೆ ಕ್ಷೇತ್ರ–ಉತ್ಪಾದನೆ ಗುರಿ
ತಾಲೂಕಿನ ಮಾದನಹಿಪ್ಪರಗಾ, ನಿಂಬರಗಾ, ನರೋಣಾ, ಖಜೂರಿ, ಆಳಂದ ಹೀಗೆ ಐದು ವಲಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಮುಂಗಾರಿಗೆ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ ಹೀಗೆ ಇತರೇ ತೃಣಧಾನ್ಯಗಳ ಬಿತ್ತನೆಗೆ 3399 ಹೆಕ್ಟೇರ್ನಲ್ಲಿ 7646.6 ಟನ್ ಉತ್ಪಾದನೆ ಗುರಿಹೊಂದಿದೆ. ಪ್ರಮುಖವಾಗಿ ಬೇಳೆಕಾಳುಗಳಾದ ತೊಗರಿ, ಹುರಳಿ, ಉದ್ದು, ಹೆಸರು ಅಲಸಂದಿ, ಅವರೆ, ಮಟಕಿ ಧಾನ್ಯಗಳ ಒಟ್ಟು ಬಿತ್ತನೆ ಕ್ಷೇತ್ರ 102557 ಹೆಕ್ಟೇರ್ ನಲ್ಲಿ 113662.6ಟನ್ ಉತ್ಪಾದನೆ ಗುರಿಯಿದೆ. ಜೊತೆಗೆ ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ್, ಗುರೆಳ್ಳು, ಸೋಯಾಬೀನ್ ಧಾನ್ಯಗಳಿಗೆ 13496 ಹೆಕ್ಟೇರ್ನಲ್ಲಿ 207833ಟನ್ ಧಾನ್ಯದ ಉತ್ಪಾದನೆ ಗುರಿ ಹೊಂದಿದ್ದು, ವಾಣಿಜ್ಯ ಬೆಳೆಗಳಾದ ಹೈ ಹತ್ತಿ, ಕಬ್ಬು ಸೇರಿ 5402ಹೆಕ್ಟೇರ್ನಲ್ಲಿ 413478.4ಟನ್ ಉತ್ಪಾದನೆ ಅಂದಾಜು ಗುರಿಯಿದೆ. ಆದರೆ ಈ ಭಾಗದಲ್ಲಿ ಬಿತ್ತನೆಗೆ ಹೆಚ್ಚು ಒಲವು ತೋರಿದ ಸೋಯಾಬಿನ್ ಬೀಜದ ಬೇಡಿಕೆ ಹೆಚ್ಚಿದ್ದು ಇದರ ಸಂಗಹಕ್ಕಾಗಿ ರೈತರು ಮುಂದಾಗಿದ್ದು, ಬೀಜ ಮತ್ತು ರಸಗೊಬ್ಬರ ಬೆಲೆ ದುಪ್ಪಟ್ಟಾಗಿದ್ದರಿಂದ ಖದೀರಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಕೃಷಿ ಇಲಾಖೆ ಮೂಲಕ ದೊರೆಯುವ ರಿಯಾಯ್ತಿ ಬೀಜವು ಎರಡ್ಮೂರು ದಿನಗಳಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ತಿಳಿಸಿದ್ದಾರೆ.
ಬೀಜ ದಾಸ್ತಾನು: ರಿಯಾಯ್ತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲು ಐದು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಕೈಗೊಳ್ಳಲಾಗಿದೆ. ಈ ಪೈಕಿ ಸೋಯಾಬಿನ್ ಬೀಜವು ಜೆಎಸ್-335, ಜೆಎಸ್-336-337, ತೊಗರಿ ಜಿಆರ್ಜಿ 811, ಹೆಸರು ಬಿಜಿಎಸ್-9, ಉದ್ದು ಡಿಬಿಜಿಬಿ-5 ಮತ್ತು ಟಿಎಯು-1 ತೊಗರಿ ಟಿಎಸ್3ಆರ್ ಬೀಜಗಳನ್ನು ದಾಸ್ತಾನು ಕೈಗೊಳ್ಳಲಾಗಿದೆ. ಎರಡ್ಮೂರು ದಿನಗಳಲ್ಲಿ ವಿತರಣೆ ಕೈಗೊಳ್ಳಲಾಗುವುದು ಎಂದು ಶರಣಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು