ಕುಸ್ತಿ ಪಂದ್ಯ ಗೆದ್ದ ಸೊಲ್ಲಾಪುರ ಪೈಲ್ವಾನ್
Team Udayavani, Sep 16, 2017, 9:35 AM IST
ಸುರಪುರ: ವೇಣುಗೋಪಾಲ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯ ಶುಕ್ರವಾರ ದೇಗುಲ ಆವರಣದಲ್ಲಿ ಅಪಾರ ಜನಸ್ತೋಮದ ಮಧ್ಯೆ ನಡೆಯಿತು.
ವಿಜಯಪುರ, ಬೆಳಗಾವಿ, ಚಡಚಣ, ಜಳಕಿ ಜತ್ತ, ಇಂಡಿ, ಸೊಲ್ಲಾಪುರ, ಹುಲಿಜಂತಿ, ಚಾಂದಕವಟೆ, ಕೊಲ್ಲಾಪುರ, ತಾಳಿಕೋಟೆ, ಇಳಕಲ್, ಜೇವರ್ಗಿ, ಬೆಳಗಾವಿ, ಶಹಾಪುರ, ಯಾದಗಿರಿ ಹಾಗೂ ಇನ್ನಿತರ ಜಿಲ್ಲೆಗಳ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದರು.
500 ರಿಂದ 5 ಸಾವಿರ ರೂ. ವರೆಗಿನ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಕೊಲ್ಲಾಪುರದ ಪೈಲವಾನ್ ಹಾಗೂ ಜೇವರ್ಗಿ ಪೈಲವಾನ್ ನಡುವೆ ನಡೆದ ಕುಸ್ತಿ ಪೋಟಿ ನೋಡುಗರ ಗಮನ ಸೆಳೆಯಿತು.
ಸೊಲ್ಲಾಪುರದ ಪೈಲವಾನ್ ಸೂರ್ಯ ಹಾಗೂ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಪೈಲವಾನ್ ಹಣಮಂತರಾಯ ನಡುವೆ ನಡೆದ ಕಡಗದ ಕುಸ್ತಿ ತುರುಸಿನಿಂದ ಕೂಡಿತ್ತು. ಇಬ್ಬರು ಸಮಬಲದ ಹೋರಾಟಗಾರರಾಗಿದ್ದರು.
ಸೊಲ್ಲಾಪುರದ ಪೈಲವಾನ್ ತನ್ನ ಬಿಗಿ ವರಸೆಗಳಿಂದ ಗೋಗಿ ಪೈಲವಾನ್ನನ್ನು ಸೋಲಿಸಿ ಐದು ತೊಲಿ ಬೆಳ್ಳಿ ಕಡಗವನ್ನು ತನ್ನದಾಗಿಸಿಕೊಂಡ. ಬೆಳ್ಳಿ ಕಡಗ ಗೆದ್ದ ಪೈಲವಾನ್ನನ್ನು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರತರಲಾಯಿತು.
ರಾಜಾ ಕೃಷ್ಣಪ್ಪ ನಾಯಕ ಪ್ರಶಸ್ತಿ ಪತ್ರ, ಕಪ್ ನೀಡಿ ಸನ್ಮಾನಿಸಿದರು. ರಾಜಾ ಲಕ್ಷ್ಮೀನಾರಾಯಣ ನಾಯಕ, ರಾಜಾ ಪಿಡ್ಡ ನಾಯಕ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಕೃಷ್ಣ ದೇವರಾಯ ನಾಯಕ, ನಾಗಪ್ಪ ಡೊಣ್ಣಿಗೇರಿ, ಮರೆಪ್ಪ ಡೊಣ್ಣಿಗೇರಿ, ಗೋಪಾಲ ಡೊಣ್ಣಿಗೇರಿ, ಮೂಖಪ್ಪ ಡೊಣ್ಣಿಗೇರಿ, ಶರಣು ಕಲಬುರ್ಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ