- Saturday 14 Dec 2019
ಮೀಸಲಾತಿಗೆ ಬದ್ಧವಾದ ಪಕ್ಷ ಬೆಂಬಲಿಸಿ
Team Udayavani, Sep 1, 2017, 10:08 AM IST
ಕಲಬುರಗಿ: ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾವ ಪಕ್ಷ ಜನಸಂಖ್ಯಾ ಆಧಾರಿತರವಾದ ಮೀಸಲಾತಿ
ನೀಡುತ್ತದೋ, ಅಂಬೇಡ್ಕರ್ ಅವರ ಸಂವಿಧಾನ ಗೌರವಿಸಿ ನಡೆಯುತ್ತದೋ ಅಂತಹ ಪಕ್ಷಕ್ಕೆ
ವಾಲ್ಮೀಕಿ ನಾಯಕ ಸಮಾಜ ಬೆಂಬಲ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.
ಉಗ್ರಪ್ಪ ಹೇಳಿದರು.
ಕನ್ನಡ ಭವನದಲ್ಲಿ ಗುರುವಾರ ಹೈದ್ರಾಬಾದ ಕರ್ನಾಟಕ ವಾಲ್ಮೀಕಿ ನಾಯಕ ಯುವ ಘಟಕ
ಸಂಘಟನೆಗೆ ಚಾಲನೆ ಮತ್ತು ವಾಲ್ಮೀಕಿ ಸಮಾಜದ ವಿಚಾರ ಸಂಕಿರಣ ಉದ್ಘಾಟಿಸಿ ಅವರು
ಮಾತನಾಡಿದರು.
ವಾಲ್ಮೀಕಿ ನಾಯಕರು ಒಗಟ್ಟಾಗಿ ಪ್ರತಿಯೊಂದು ವಿಷಯದಲ್ಲಿ ಪೂಜ್ಯ ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ, ಪ್ರತಿಯೊಂದು ರಾಜಕೀಯ ಪಕ್ಷಗಳು ನಾಯಕರ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ ಎಂದರು.
ಅತಿಥಿಯಾಗಿದ್ದ ಬೆಳಗಾವಿ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ
ಪ್ರಾಧ್ಯಾಪಕ ಅಮರೇಶ ನಾಯಕ ಯತಗಲ್ ಮಾತನಾಡಿ, ಸಮಾಜದ ಇತಿಹಾಸವನ್ನು
ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ವಾಲ್ಮೀಕಿ ಮಹರ್ಷಿ ಮೂಲತ ಬೇಡ ಸಮಾಜದವರೇ
ಆಗಿದ್ದಾರೆ ಎನ್ನುವುದನ್ನು ಅನೇಕರು ತಿರುಚುವ ಕೆಲಸ ಮಾಡಿದ್ದಾರೆ. ಅಲ್ಲದೆ, ನಮ್ಮ ಸಮಾಜದ
ಐತಿಹಾಸಿಕ ಪುರುಷರನ್ನು ಹೈಜಾಕ್ ಮಾಡಿದ್ದಾರೆ. ವಾಲ್ಮೀಕಿಯನ್ನು ಹೈಜಾಕ್ ಮಾಡಿದ್ದಾರೆ.
ಇದೆಲ್ಲವನ್ನು ನಾವು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ಯುವಕರು ಮುನ್ನಡೆಯಬೇಕು.
ಅದಕ್ಕಾಗಿ ಸಂಘಟನೆ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ
ಸ್ವಾಮಿಜಿ ಹಾಗೂ ಸಮಾಜದ ಮುಖಂಡ ರಾಮು ನಾಯಕ ಸುರಪುರ ಮಾತನಾಡಿದರು.
ಹೈದ್ರಾಬಾದ ಕರ್ನಾಟಕ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ವಿಶ್ವನಾಥ ಜಮಾದಾರ
ವಹಿಸಿಕೊಂಡಿದ್ದರು.
ಬೆಂಗಳೂರಿನ ಮಾಧ್ಯಮ ಅಕಾಡೆಮಿ ಸದಸ್ಯ ಮುತ್ತು.ನಾಯ್ಕರ್ ಮತ್ತು ಸಮಾಜದ ಮುಖಂಡರಾದ ದೇವರಾಜ.ಕೆ, ನಂದಕುಮಾರ ಮಾಲಿಪಾಟೀಲ, ಅಯ್ಯಪ್ಪ.ವಾಲ್ಮೀಕಿ, ಶಿವರಾಜ.ನಾಯಕ, ಚನ್ನಪ್ಪ.ಸುರಪುರಕರ್, ರಾಜು ಸಿ.ಮಾವನೂರು, ಲಕ್ಷ್ಮೀಕಾಂತ ಬಿ.ದೊರೆ, ವಿಶ್ವನಾಥ ಕೆ.ಸುಬೇದಾರ, ರಮೇಶ ಉಡಮನಹಳ್ಳಿಕರ್, ನಾಗರಾಜ್ ಜಿನ್ಕೇರಾ, ವಿಶ್ವರಾಧ್ಯ.ಸುಭೇದಾರ, ನರಸಿಂಹ ಜಮಾದಾರ, ಅಶೋಕ ಶರಣಸಿರಸಗಿ, ಶ್ರವಣಕುಮಾರ ಡಿ.ನಾಯಕ, ಅಯ್ಯಣ್ಣ.ನಾಯಕ
ಪಾಮನಕಲ್ಲೂರು, ಶರಣು ಸುರಪೂರ್ಕರ್ ಹಾಗೂ ಮತ್ತಿತರರು ಇದ್ದರು.
ಈ ವಿಭಾಗದಿಂದ ಇನ್ನಷ್ಟು
-
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನೆಲ-ಜಲ ಉಳಿಸಿ; ಆದಾಯ ಹೆಚ್ಚಿಸಿ ಘೋಷವಾಕ್ಯದಡಿ ಡಿ.14ರಿಂದ ಮೂರು ದಿನ ಕೃಷಿ ಮೇಳ ಜರುಗಲಿದ್ದು, ಈ ನಿಟ್ಟಿನಲ್ಲಿ...
-
ಅಫಜಲಪುರ: ತಾಲೂಕಿನ ಹಾವನೂರ ಗ್ರಾಮದ ಶ್ವೇತಾ ನಿಂಗಪ್ಪ ಪೂಜಾರಿ ಎನ್ನುವ ಬಾಲಕಿ ಕಳೆದ ಡಿ. 5ರಂದು ನಾಪತ್ತೆಯಾಗಿದ್ದಳು. ನಾಪತ್ತೆಯಾಗಿರುವ ಕುರಿತು ದೇವಲ ಗಾಣಗಾಪುರ...
-
ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.14ರಿಂದ 16ರವರೆಗೆ ನೆಲ-ಜಲ ಉಳಿಸಿ ಆದಾಯ ಹೆಚ್ಚಿಸಿ ಎಂಬ ಶೀರ್ಷಿಕೆಯಡಿ ಕೃಷಿಮೇಳ-2019 ಆಯೋಜಿಸಲಾಗಿದೆ...
-
ಶಶಿಕಾಂತ ಬಂಬುಳಗೆ ಬೀದರ: ಸಭೆ-ಸಮಾರಂಭಗಳಲ್ಲಿ ಯಥೇತ್ಛವಾಗಿ ವ್ಯರ್ಥವಾಗುವ ಆಹಾರ ಪದಾರ್ಥಕ್ಕೆ ಪಾತ್ರೆ ಒಡ್ಡುವ ಬೀದರನ "ರೀಶೈನ್' ಸಂಸ್ಥೆ ಅನಾಥ ಮತ್ತು ಅಲೆಮಾರಿ...
-
ಕಲಬುರಗಿ: ಬರುವ ಫೆಬ್ರವರಿ 5ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 85ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗಿದೆ. ಉಪಮುಖ್ಯಮಂತ್ರಿ ಹಾಗೂ...
ಹೊಸ ಸೇರ್ಪಡೆ
-
ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ...
-
ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳ ಕಾಲ ಮುಂದುವರಿಸುವುದಾಗಿ ಸಬ್ ಜೈಲು ಅಧಿಕಾರಿಗಳು...
-
ತರೀಕೆರೆ: ಜನವರಿ 14 ಮತ್ತು 15 ರಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ 847ನೇ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವವನ್ನು...
-
ಹೊಸದಿಲ್ಲಿ: ಈರುಳ್ಳಿ ಬೆಲೆ ತಹಬಂದಿಗೆ ತರಲು ಇನ್ನಿಲ್ಲದ ಯತ್ನ ಮಾಡುತ್ತಿರುವ ಕೇಂದ್ರ ಸರಕಾರ ಈಗ ಅಫ್ಘಾನಿಸ್ಥಾನದಿಂದಲೂ ಆಮದು ಮಾಡುತ್ತಿದೆ. ಪಾಕಿಸ್ಥಾನದ...
-
ಮಣಿಪಾಲ: ಐಪಿಎಲ್ ಹರಾಜಿನಲ್ಲಿ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವ ಆಟಗಾರರನ್ನು ಖರೀದಿಸಿದರೆ ಯಶಸ್ಸು ಗಳಿಸಬಹುದು ಎಂಬ ಪ್ರಶ್ನೆಯನ್ನು...