ಉನ್ನತ ವ್ಯಾಸಂಗದ ಲಾಭ ಪಡೆಯಿರಿ
Team Udayavani, Mar 31, 2018, 11:55 AM IST
ಕಲಬುರಗಿ: ಗುರುಪಾದೇಶ್ವರ ಪದವಿ ಪೂರ್ವ ಕಾಲೇಜು ನೀಡುತ್ತಿರುವ ಸಿಇಟಿ ಮತ್ತು ನೀಟ್ ತರಬೇತಿ ಹಾಗೂ ಮಾರ್ಗದರ್ಶನದಿಂದ ಹೆಚ್ಚು ಅಂಕ ಪಡೆದು ಉಚಿತ ಸೀಟು ಪಡೆಯುವಂತೆ 2016ರಲ್ಲಿ ನೀಟ್ ಪರೀಕ್ಷೆಯಲ್ಲಿ ಅಂಗವಿಕಲ ಕೋಟಾದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಶಿವಾನಂದ ಸೊನಾವನೆ ಸಲಹೆ ನೀಡಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷಾರ್ಥಿಗಳನ್ನು ಕುರಿತು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಸತತವಾಗಿ ಓದಿದರೆ ಮಾತ್ರ ಮೆಡಿಕಲ್ ಸೀಟು ಪಡೆಯಲು ಸಾಧ್ಯ. ನನಗೆ ಮಾರ್ಗದರ್ಶನ ಮಾಡುತ್ತಿರುವ ಕಾಲೇಜಿನ ಸಂಸ್ಥಾಪಕ ಅಂಬಲಗಿ ಅವರ ಮಾರ್ಗದರ್ಶನ ಪಡೆದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು, ವಿಶೇಷವಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೆರಳಬೇಕೆಂದು ಹೇಳಿದರು.
ಉದ್ಯಮಿ ಸುರೇಶ ಮಹಾಗಾಂವಕರ ಭಗವಾನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಸಂಸ್ಥೆ ವರದಾನವಾಗಿದೆ ಎಂದರು. ಉಪನ್ಯಾಸಕ ಶಿವಕುಮಾರ ಗೋಣಗಿಕರ ಮಹಾವೀರನ ಕುರಿತು ಉಪನ್ಯಾಸ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಎಂ.ಬಿ.ಅಂಬಲಗಿ ಮಾತನಾಡಿ, ಸಿಇಟಿ, ನೀಟ್ ತರಬೇತಿ ಪಡೆಯುತ್ತಿರುವವರಿಗೆ ಸಹಕರಿಸುವ ಭರವಸೆ ನೀಡಿದರು. ಸಂಸ್ಥೆಯಿಂದ ಶಿವಾನಂದ ಸೊನಾವನೆ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪವಿತ್ರರೆಡ್ಡಿ, ಉಪನ್ಯಾಸಕರಾದ ಶೃತಿ ಮಹಾಜನ, ರೂಪಾ ಸಣ್ಣಮನಿ, ಜಗದೇವಿ ಹಿರೇಮಠ, ಪಲ್ಲವಿ ಮಠ, ರಾಚಪ್ಪ ರೊಳೆ, ಕೈಲಾಸ ಹಳ್ಳಿಕರ, ಶಾಂತಯ್ಯ ಹಿರೇಮಠ ಹಾಗೂ ಇತರರಿದ್ದರು. ಭಾಗ್ಯಶ್ರೀ ನಿರೂಪಿಸಿ, ಸ್ವಾಗತಿಸಿದರು, ಶಾಂತಯ್ಯ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್