ಜಿಲ್ಲೆಯಲ್ಲಿ ಇನ್ನೂ ಚೇತರಿಕೆ ಕಾಣದ ಬಟ್ಟೆ ವ್ಯಾಪಾರ


Team Udayavani, Jun 29, 2020, 8:47 AM IST

ಜಿಲ್ಲೆಯಲ್ಲಿ ಇನ್ನೂ ಚೇತರಿಕೆ ಕಾಣದ ಬಟ್ಟೆ ವ್ಯಾಪಾರ

ಸಾಂದರ್ಭಿಕ ಚಿತ್ರ

ಕಲಬುರಗಿ: ಲಾಕ್‌ಡೌನ್‌ ಸಡಿಲಿಕೆಗೊಂಡಿದ್ದರೂ ಬಟ್ಟೆ ವ್ಯಾಪಾರ ಚೇತರಿಸಿಕೊಂಡಿಲ್ಲ. ಜನತೆ ತಮ್ಮ ನಿತ್ಯದ ಕಾರ್ಯ, ವ್ಯಾಪಾರ-ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಬಟ್ಟೆ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

ಮೇ-ಜೂನ್‌ ತಿಂಗಳು ಮದುವೆ ಸೀಜನ್‌ ಮತ್ತು ರಂಜಾನ್‌ ಹಬ್ಬಕ್ಕೆಂದು ದೊಡ್ಡ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಸಾಕಷ್ಟು ಪ್ರಮಾಣದ ಬಟ್ಟೆ ಸಂಗ್ರಹಿಸಿದ್ದರು. ಆದರೆ, ಸೀಜನ್‌ ಆರಂಭವಾಗುವ ವೇಳೆಗೆ ಲಾಕ್‌ಡೌನ್‌ ಜಾರಿ ಘೋಷಣೆಯಾಗಿ ಅಂಡಿಗಗಳು ಮುಚ್ಚುವಂತೆ ಆಗಿತ್ತು. ಈಗ ಲಾಕ್‌ಡೌನ್‌ ಸಡಿಲಿಕೆ ಮಾಡಿ ಒಂದು ತಿಂಗಳು ಕಳೆಯುತ್ತಿದ್ದರೂ ಬಟ್ಟೆ ವ್ಯಾಪಾರವಾಗುತ್ತಿಲ್ಲ. ಮೂರು ತಿಂಗಳು ಲಾಕ್‌ ಡೌನ್‌ದಿಂದಾಗಿ ಜನರ ಬಳಿ ಹಣವಿಲ್ಲದ ಕಾರಣ ಅಂಗಡಿಗಳತ್ತ ಸುಳಿಯುತ್ತಿಲ್ಲ. ಕಲಬುರಗಿ ಮಹಾನಗರದಲ್ಲೇ ಸಣ್ಣ ಪುಟ್ಟ ಮತ್ತು ದೊಡ್ಡ ಅಂಗಡಿಗಳು ಸೇರಿ ಅಂದಾಜು ನಾಲ್ಕು ಬಟ್ಟೆ ಅಂಗಡಿಗಳಿವೆ. ಸಣ್ಣ ಅಂಗಡಿಗಳಿಗೆ ಜನರು ಹೋಗುತ್ತಿದ್ದರೂ, ಅದು ಅಷ್ಟಕ್ಕಷ್ಟೆ. ದೊಡ್ಡ-ದೊಡ್ಡ ಅಂಗಡಿಗಳಿಗೆ ಬರುವವರ ಸಂಖ್ಯೆ ತೀರ ವಿರಾಳವಾಗಿದೆ.

ಕೆಲ ಕಡೆಗಳಲ್ಲಿ ಮದುವೆಗಳು ನಡೆಯುತ್ತಿದ್ದರೂ, ಸಮಾರಂಭದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ ಇರುವುದರಿಂದ ಬಟ್ಟೆ ಖರೀದಿಸುವ ಗೋಜಿಗೆ ಯಾರೂ ಗೊತ್ತಿಲ್ಲ. ಶಾಲಾ-ಕಾಲೇಜುಗಳ ಆರಂಭ ಇನ್ನೂ ನಿರ್ಧಾರವಾಗದೇ ಇರುವುದರಿಂದ ಮಕ್ಕಳ ಸಮವಸ್ತ್ರಗಳನ್ನು ಕೇಳುವರಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಕಳೆದ ಬಾರಿ ಮಳೆ ಚೆನ್ನಾಗಿ ಫಸಲು ಬಂದು ರೈತರು, ಜನರ ಕೈಯಲ್ಲಿ ಹಣವಿತ್ತು. ಮಧ್ಯಮ ವರ್ಗ, ಮೇಲ್ವರ್ಗದವರೂ ನೋಟ್‌ಬ್ಯಾನ್‌ ನಂತರದ ಮೂರು ವರ್ಷಗಳ ಬಳಿಕ ಸುಧಾರಣೆ ಹಂತಕ್ಕೆ ಬಂದಿದ್ದರು. ಹಲವರ ಕೈಯಲ್ಲಿ ಹಣವು ಹರಿದಾಡುತ್ತಿತ್ತು. ಹೀಗಾಗಿ ಈ ವರ್ಷ ಉತ್ತಮ ವ್ಯಾಪಾರವಾಗಲಿದೆ ಎಂಬ ಆಶಾಭಾವ ಜಾಸ್ತಿ ಇತ್ತು. ಮದುವೆ ಹಾಗೂ ರಂಜಾನ್‌ ಸೀಜನ್‌ಗೆಂದು ಮೊದಲೇ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಅಷ್ಟರಲ್ಲೇ ಲಾಕ್‌ ಡೌನ್‌ ಘೋಷಣೆಯಾಗಿತ್ತು. ಇದರಿಂದ ಸಾಕಷ್ಟು ಬಟ್ಟೆಗಳ ಸಂಗ್ರಹ ಉಳಿದಿದೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿ ಬಟ್ಟೆ ತರಿಸಲಾಗಿದೆ. ಲಾಕ್‌ಡೌನ್‌ ಸಡಿಲಿಕೆಗೊಂಡ ಬಳಿಕವೂ ವ್ಯಾಪಾರ ನಿಂತು ಹೋಗಿದೆ ಎಂದು ವ್ಯಾಪಾರಿಗಳು ಪೇಚಾಡುತ್ತಿದ್ದಾರೆ.

ಪ್ರತಿಷ್ಠಿತ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಆರು ತಿಂಗಳ ಮೊದಲೇ ಅರ್ಡರ್‌ ಕೊಟ್ಟು ತರಿಸಿಕೊಳ್ಳಬೇಕು. ಲಾಕ್‌ ಡೌನ್‌ಗಿಂತ ಮುಂಚೆ ಆರ್ಡರ್‌ ನೀಡಿದ ವಸ್ತಗಳು ಈಗ ಬರಲು ಶುರು ಆಗಿವೆ. ಆದರೆ, ಈ ಹಿಂದೆ ತರಿಸಿಕೊಂಡ ಬಟ್ಟೆಗಳು ಮಾರಾಟವಾಗದೆ ಉಳಿದುಕೊಂಡಿವೆ. ನಷ್ಟದಲ್ಲೇ ಕೆಲಸಗಾರರ ಸಂಬಳ ನೀಡುತ್ತಿದ್ದೇವೆ. ಅಲ್ಲದೇ ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದೇವೆ.ರಾಮಕೃಷ್ಣ ಸುತ್ರಾವೆ, ಮಾಲೀಕರು, ಬಟ್ಟೆ ಅಂಗಡಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.