ಮೊದಲ ದಿನವೇ ವ್ಯಾಪಾರ-ವಹಿವಾಟು ಜೋರು
Team Udayavani, Jun 2, 2020, 12:35 PM IST
ಕಲಬುರಗಿ: ಕೋವಿಡ್ ಸೋಂಕಿನಿಂದಾಗಿ ಲಾಕ್ ಡೌನ್ ಜಾರಿದ ಬರೋಬ್ಬರಿ 80 ದಿನಗಳ ನಂತರ ನಗರದಲ್ಲಿ ಸೋಮವಾರ ವ್ಯಾಪಾರ-ವಹಿವಾಟು ಜೋರಾಗಿ ನಡೆಯಿತು.
ಲಾಕ್ಡೌನ್ ಸಡಿಲಿಕೆ ಮಾಡಿ ಅನುಮತಿ ನೀಡಿದ ಮೊದಲ ದಿನವೇ ಅಂಗಡಿಗಳ ಮುಂದೆ ಜನ ಗುಂಪು-ಗುಂಪಾಗಿ ಮುಗಿಬಿದ್ದರು. ಮಹಾಮಾರಿ ಕೋವಿಡ್ ಆತಂಕದ ನಡುವೆಯೂ ಜನತೆ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದರು. ಸೂಪರ್ ಮಾರ್ಕೆಟ್ ತುಂಬಾ ಜನವೋ ಜನ ಸೇರಿದ್ದರು. ಸೂಪರ್ ಮಾರ್ಕೆಟ್ ಮಾತ್ರವಲ್ಲ ಸೇಷನ್ ಬಜಾರ್, ಕೇಂದ್ರ ಬಸ್ ನಿಲ್ದಾಣದ ರಸ್ತೆ, ಹಳೆ ಜೇವರ್ಗಿ ರಸ್ತೆ, ರಾಮಮಂದಿರ ವೃತ್ತದಲ್ಲೂ ಜನಸಂದಣಿ ಇತ್ತು. ಗ್ರಾಮೀಣ ಪ್ರದೇಶದಿಂದಲೂ ಜನರು ನಗರದತ್ತ ಧಾವಿಸಿ ಬಂದರು.
ತರಕಾರಿ ಮಾರುಕಟ್ಟೆ, ಬಟ್ಟೆ ಅಂಗಡಿಗಳು, ಎಲೆಕ್ಟ್ರಾನಿಕ್ ವಸ್ತುಗಳ ಶಾಪ್ಗ್ಳು, ಮೊಬೈಲ್ ಶಾಪ್ಗ್ಳು, ಗೃಹ ಬಳಕೆ ವಸ್ತುಗಳು, ಪುಸ್ತಕ ಮಳಿಗೆಗಳು, ಹಾರ್ಡ್ವೇರ್ ಶಾಪ್ಗ್ಳು, ಆಫ್ ಸೆಟ್ ಅಂಗಡಿಗಳು, ಪೇಂಟಿಂಗ್, ಆಟೊಮೊಬೈಲ್ ಸೇರಿದಂತೆ ಹಲವು ಅಂಗಡಿಗಳ ಮುಂದೆ ಜನರು ಕಂಡುಬಂದರು. ಸೂಪರ್ ಮಾರ್ಕೆಟ್ ಹಾಗೂ ಶಹಾಬಜಾರ್ನಲ್ಲಿ ರೈತರ ಸಂಖ್ಯೆ ಸಹ ಹೆಚ್ಚಾಗಿತ್ತು. ಕೃಷಿ ಉಪಕರಣ, ಹಗ್ಗ, ಬಾರಕೋಲು ಮುಂತಾದವುಗಳ ಖರೀದಿಯಲ್ಲಿ ಅಪಾರ ರೈತರು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್