ಆಸ್ಸಾಂನ ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಖಂಡ
Team Udayavani, Aug 9, 2018, 10:50 AM IST
ಕಲಬುರಗಿ: ಆಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯಡಿ 40 ಲಕ್ಷ ಜನರ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಎಸ್ಯುಸಿಐ ಕಾರ್ಯಕರ್ತರು ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ ಯುಸಿಐ ನಗರ ಕಾರ್ಯದರ್ಶಿ ವಿ.ಜಿ.ದೇಸಾಯಿ ಮಾತನಾಡಿ, ಆಸ್ಸಾಂನಲ್ಲಿ ಮೂರು ದಶಕಗಳಿಂದ ನಡೆಯುತ್ತಿರುವ ಅಕ್ರಮ ವಲಸಿಗರ ಕುರಿತ ವಿವಾದದ ಮುಂದುವರಿಕೆಯಾಗಿ ಕಳೆ ಐದು
ವರ್ಷದಿಂದ 1200 ಕೋಟಿ ರೂ.ವೆಚ್ಚದಲ್ಲಿ ಪೌರತ್ವ ನೋಂದಣಿ ಕಾಯ್ದೆಯಡಿ ಸಮೀಕ್ಷೆ ನಡೆಸಿ ಈಗ ಅಂತಿಮ ಕರಡು ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ 40 ಲಕ್ಷಜನರ ಹೆಸರು ಕೈಬಿಟ್ಟಿರುವುದು ಖಂಡನೀಯ ಎಂದರು.
ಮಾಜಿ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅವರ ವಂಶಸ್ಥರು, 1857 ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿ ಅಂಡಮಾನ ನಿಕೋಬಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಹಾದ್ದೂರ ಗಾಂವಬುರಾ ವಂಶಸ್ಥರಲ್ಲದೇ ಅನೇಕ ಸರ್ಕಾರಿ ನೌಕರರು,
ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಮಾಜಿ ಶಾಸಕರು ಸೇರಿದಂತೆ ಹಲವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು. ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ವಿರುದ್ಧ ಇಂತಹ ಫ್ಯಾಸೀಸ್ಂ ದಾಳಿ ಜನತಂತ್ರ ವಿರೋಧಿ ಕ್ರಮವಾಗಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಗಣಪತರಾವ ಕೆ. ಮಾನೆ ಮಾತನಾಡಿ, 1985ರ ಸುಮಾರಿಗೆ ಆಸ್ಸಾಂ ಗಣಪರಿಷತ್ ನೇತೃತ್ವದ ಸರ್ಕಾರ ತೀವ್ರ ಪ್ರಾದೇಶಿಕತಾವಾದಿ ಧೋರಣೆಯಿಂದ ಅಸ್ಸಾಮೇತರ ಜನರ ವಿರುದ್ಧ ಚಳವಳಿ ನಡೆಸಿತ್ತು. ಆಸ್ಸಾಂನಲ್ಲಿ ಲಕ್ಷಾಂತರ ಜನ ವಲಸಿಗರಿದ್ದಾರೆ ಎಂದು ವಾದಿಸಿತ್ತು. ಆದರೂ ದಾಖಲೆಗಳ ಮೂಲಕ ಅದನ್ನು ಸಾಬೀತುಪಡಿಸಲು ಆಗಿರಲಿಲ್ಲ. ಕೇವಲ 3.7 ಲಕ್ಷ ಜನರು ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿತ್ತು ಎಂದು ವಿವರಿಸಿದರು.
ಇದರಲ್ಲಿ ನ್ಯಾಯಾಲಯಕ್ಕೆ ಮೊರೆ ಹೋದ 95ರಷ್ಟು ಜನರು ಭಾರತೀಯ ಪ್ರಜೆಗಳೆಂದು ಸಾಬೀತಾಗಿತ್ತು. ಪಾಕಿಸ್ತಾನ,
ಬಾಂಗ್ಲಾ ವಿಭಜನೆಗೊಂಡ ಬಳಿಕ 1971ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಪಕ್ಷಗಳ ನಿಲುವಾಗಿತ್ತು ಎಂದರು.
ಭಾರತೀಯ ಪೌರತ್ವ ಪಡೆಯಲು 1971 ಕ್ಕೂ ಹಿಂದಿನ ಮತದಾರರ ಪಟ್ಟಿಯಲ್ಲಿ ಅಥವಾ 1951 ರ ಎನ್ಆರ್ಸಿಯಲ್ಲಿ ತಮ್ಮ ಅಥವಾ ವಂಶಸ್ಥರ ಹೆಸರನ್ನು ದಾಖಲೆಗಳ ಸಮೇತ ಸಲ್ಲಿಸಬೇಕಿದೆ. ಈ ದಾಖಲೆಗಳು ಸರಿಯಾಗಿ ಲಭ್ಯವಿಲ್ಲ.
ಮತದಾರ ಪಟ್ಟಿಯೂ ದೋಷಪೂರಿತವಾಗಿದೆ. ಇದರಿಂದ ಭೂ ದಾಖಲೆಗಳಿಲ್ಲದ ಕೂಲಿಕಾರರು ಪೌರತ್ವವನ್ನು ಶ್ರೀಲಂಕಾದ ತಮಿಳರಂತೆ ನಿರಾಶ್ರಿತರಾಗಲಿದ್ದಾರೆ. ಮಾನವ ದುರಂತ ತಪ್ಪಿಸಲು ಎಲ್ಲಾ ನೈಜ ಭಾರತೀಯ ಪ್ರಜೆಗಳ
ಪೌರತ್ವ ನೋಂದಣಿ ಮಾಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯ ಮಹೇಶ ನಾಡಗೌಡ, ನಿಂಗಣ್ಣ ಜಂಬಗಿ, ಜಗನ್ನಾಥ, ಮಹೇಶ, ಗೌರಮ್ಮ, ಅಭಯಾ ದಿವಾಕರ, ಶರಣು ಹೇರೂರ, ಅಜಯ ಜಾಧವ, ಈರಣ್ಣಾ ಇಸಬಾ, ಶಿಲ್ಪಾ ಬಿ.ಕೆ., ಸ್ನೇಹಾ ಕಟ್ಟಿಮನಿ ಹಾಗೂ ಇತರರು
ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್