ರಂಗಭೂಮಿ, ಸಿನಿಮಾ-ಕಿರುತೆರೆ ಸಾಧನೆ ಖುಷಿ ತಂದಿದೆ


Team Udayavani, Dec 11, 2017, 10:35 AM IST

gul-2.jpg

ಕಲಬುರಗಿ: ಮೇರು ನಟ ರಾಜಕುಮಾರ ಮಗನಲ್ಲ, ವಿಷ್ಣುವರ್ಧನ ಅಳಿಯನಲ್ಲ, ರವಿಚಂದ್ರನ್‌ ಸಹೋದರನಲ್ಲ. ಮಧ್ಯಮವರ್ಗದ ಮನೆತನದಿಂದ ಬಂದಿರುವ ನನಗೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರ ಬೆಳೆಸಿದ್ದನ್ನು ಹಾಗೂ ನಡೆದುಬಂದ ದಾರಿ ಅವಲೋಕನ ಮಾಡಿಕೊಂಡರೆ ಖುಷಿಯಾಗುತ್ತದೆ ಎಂದು ನಟ, ರಂಗ ಕಲಾವಿದ ಮಂಡ್ಯ ರಮೇಶ ಮನದಾಳದಿಂದ ನುಡಿದರು.

ಕಲಬುರಗಿ ರಂಗಾಯಣ, ರಂಗಸಂಗಮ ಕಲಾವೇದಿಕೆ ಮತ್ತು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ರಂಗಾಯಣದ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗ-ಸಿನಿಮಾ-ಕಿರುತೆರೆಯಲ್ಲಿ ಮಂಡ್ಯ ರಮೇಶ ಅವರ ಖಾಸ್‌ ಬಾತ್‌ ಕಾರ್ಯಕ್ರಮದಲ್ಲಿ ಮನ ಬಿಚ್ಚಿ ಮಾತನಾಡಿದ ಅವರು, ಆರಂಭದಲ್ಲಿ ಹಿರಿಯರಾದ ಪಂಢರಿಬಾಯಿ, ಕಲ್ಯಾಣಕುಮಾರ,
ಮೈನಾವತಿ ಅವರಂಥ ಹಿರಿಯರ ಜೊತೆ ನಟಿಸುವಾಗ ಆತಂಕ ಎದುರಾಗಿತ್ತು ಎಂದರು.

ನಿರ್ದೇಶಕರ ಆಣತಿಯಂತೆ ಪಾತ್ರ ಮಾಡುವುದನ್ನು ಕಲಿತುಕೊಳ್ಳಬೇಕು. ಇದಕ್ಕೂ ಮುನ್ನ, ಮೊದಲ ಗುರು ಎನಿಸಿಕೊಳ್ಳುವ ಕನ್ನಡಿ ಎದುರು ನಿಂತು ಕಲಿತರೆ ಮಾತ್ರ ನಟನಾಗಬಲ್ಲ ಎಂದು ಸಲಹೆ ನೀಡಿದರು. 

ಹಿರಿಯ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರಂತಹ ಖ್ಯಾತನಾಮರು ಮಾಡುತ್ತಿದ್ದ ಸಿನಿಮಾಗಳ ಲೋಕಕ್ಕೂ ಮತ್ತು ಈಗಿನ ಸಿನಿಮಾ ಲೋಕಕ್ಕೂ ಇರುವ ವ್ಯತ್ಯಾಸ ಬಹಳಷ್ಟಿದೆ. ಆಗಿನ ಬದುಕು ಮೌಲ್ಯಯುತವಾಗಿತ್ತು. ಈಗ ಬದುಕೇ ಕೆಟ್ಟು ನಿಂತಿದೆ. ಆಗಿನ ಪ್ರೇಕ್ಷಕರ ಅಪೇಕ್ಷೆಗೆ ತಕ್ಕಂತೆ ಸಿನಿಮಾಗಳು ಬರುತ್ತಿದ್ದವು. ಈಗಿನ ಅಭಿರುಚಿಗೆ ಅನುಗುಣವಾಗಿ ಸಿನಿಮಾ ಹಾಡುಗಳು ಬರುತ್ತಿವೆ. ಹೀಗಾಗಿ ಮೌಲ್ಯ ಎಂಬುದು ಬದಲಾವಣೆ ಆಗುತ್ತಲೇ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ನಾನು ಎಡವೂ ಅಲ್ಲ, ಬಲವು ಅಲ್ಲ. ಎಡಪಂಥೀಯದಲ್ಲಿ ಗಂಭೀರತೆಯನ್ನು, ಪ್ರಗತಿಯನ್ನು ಹಾಗೂ ಬಲಪಂಥದಲ್ಲಿ ರಾಷ್ಟ್ರೀಯತೆ, ದೇಶ ಕಟ್ಟುವುದನ್ನು ಪ್ರೀತಿಸುವ , ಮನುಷ್ಯ ಮುಖೀಯಾಗಿದ್ದೇನೆ. ರಂಗಮುಖೀಯಾಗಿರುವ ಹಿನ್ನೆಲೆಯಲ್ಲಿ ಜನರ ಪ್ರೀತಿ ನನಗೆ ಯಾವತ್ತೂ ಮೋಸ ಮಾಡಿಲ್ಲ ಎಂದು ಮನದಾಳದಿಂದ ನುಡಿದರು.

ಅಪಮಾನ ಸಿಗದಿದ್ದರೆ ಸನ್ಮಾನ ಆಗೋದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅಪಮಾನ, ಧೂಳು, ಸಂತೆಯಲ್ಲಿಯೇ ಅನುಭವ ಸಿಗಲು ಸಾಧ್ಯ. ಅಳಲಾರದೆ ಇರುವ ಮಹಿಳೆ, ನಾಚಿಕೆಪಟ್ಟುಕೊಳ್ಳದ ಪುರುಷ ಇರಬಾರದು. ಬದುಕು ಕೆಟ್ಟಿರುವುದರಿಂದ ಅದರ ಪ್ರತಿಫಲನವಾದ ಸಿನಿಮಾ, ರಂಗಭೂಮಿಯೂ ಕೆಟ್ಟದಾಗಿ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಪ್ರಜ್ಞೆಯನ್ನಿಟ್ಟುಕೊಂಡು ಐತಿಹಾಸಿಕ, ಪೌರಾಣಿಕ ನಾಟಕ ಮಾಡುವ ಆಸೆ ಇದೆ ಎಂದು ಮನದಾಳವನ್ನು ಹೇಳಿಕೊಂಡ ಅವರು, ಗ್ರಾಮೀಣದಿಂದ ಬಂದು 213 ಸಿನಿಮಾಗಳನ್ನು ನೂರಾರು ನಾಟಕಗಳನ್ನು ಮಾಡಿದ ಹೆಮ್ಮೆ
ನನಗಿದೆ ಎಂದರು.

ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಇಂದಿನ ಆಧುನಿಕ ಪ್ರಜ್ಞೆ ಸೇರಿಸಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದ್ದು, ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮರುಸೃಷ್ಟಿಯಾಗಬೇಕಿದೆ. ಜಗತ್ತನ್ನು ಸುತ್ತುವ ಮತ್ತು ಗ್ರಹಿಸುವ ಸುಖವೇ ದೊಡ್ಡದು ಎಂದು ಹೇಳಿದರು.

ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ರಂಗಸಂಗಮ ಕಲಾ ವೇದಿಕೆಯ ಡಾ| ಸುಜಾತಾ ಜಂಗಮಶೆಟ್ಟಿ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್‌.ನಿರಗುಡಿ ಇದ್ದರು. ಪತ್ರಕರ್ತರೂ ಆಗಿರುವ ರಂಗನಿರ್ದೇಶಕ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರಭಾಕರ ಸಾತಖೇಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ನಾಟಕ ಅಕಾಡೆಮಿ ಸದಸ್ಯ ಸಂದೀಪ, ಮಹಾಂತೇಶ ನವಲಕಲ್‌, ಸುರೇಶ ಬಡಿಗೇರ, ಶಿವರಂಜನ್‌ ಸತ್ಯಂಪೇಟೆ, ಎಚ್‌.ಎಸ್‌.ಬಸವಪ್ರಭು, ಶಿವಕವಿ ಹಿರೇಮಠ ಜೋಗೂರ, ರಾಜಶೇಖರ ಮಾಂಗ್‌, ಭೀಮರಾಯ, ಎನ್‌.ಎಸ್‌.ಹಿರೇಮಠ, ಮಿಲಿಂದ್‌, ಸಿದ್ಧರಾಮ ಪೊಲೀಸ್‌ ಪಾಟೀಲ, ವಿಶ್ವರಾಜ, ಜಗನ್ನಾಥ ತರನಳ್ಳಿ, ರಾಘವೇಂದ್ರ ಹಳಿಪೇಟ, ಮಹೇಶ ಗಂವಾರ, ಎಸ್‌.ಎಸ್‌.ಬೇತಾಳೆ ಸೇರಿದಂತೆ ರಂಗಾಯಣದ ಕಲಾವಿದರು, ಆಸಕ್ತರು ಖಾಸ್‌ಬಾತ್‌ದಲ್ಲಿ ಭಾಗವಹಿಸಿದ್ದರು. 

ಶೀಘ್ರದಲ್ಲಿ ಮಗದೊಮ್ಮೆ ಮಜಾ ಟಾಕೀಜ್‌: ಕಿರುತೆರೆಯಲ್ಲಿ ಮಜಾ ಟಾಕೀಜ್‌ ಆರಂಭ ಮಾಡುವಾಗ ಈ ಪರಿ ದಾಖಲೆ ಮಾಡುತ್ತದೆ ಎಂಬುದಾಗಿ ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. ಆದರೆ, 300 ಎಪಿಸೋಡ್‌ಗಳಿಗಿಂತ ಹೆಚ್ಚು ದಾಟಿಹೋದಾಗ, ಕಿರುತೆರೆಯಲ್ಲಿ ಕಾಮಿಡಿ ಶೋ ಕಾರ್ಯಕ್ರಮವೊಂದು ದಾಖಲೆ ಮಾಡಿದ ಕೀರ್ತಿ ಮಜಾ ಟಾಕೀಸ್‌ಗೆ ಲಭಿಸಿತು. ಇದು ಬಹಳ ಖುಷಿ ತಂದಿದೆ. ಯಾವ ಧರ್ಮವನ್ನು ಟೀಕಿಸಿಲ್ಲ, ಯಾವ ಉಡುಪನ್ನು ಟೀಕಿಸಿಲ್ಲ. ನಮ್ಮನ್ನು ನಾವು ಗೇಲಿ ಮಾಡಿಕೊಂಡೇ ಮಜಾ ಟಾಕೀಸ್‌ ಖ್ಯಾತಿಯಾಯಿತು. ಶೀಘ್ರದಲ್ಲಿಯೇ ಮತ್ತೂಮ್ಮೆ ಮಜಾ ಟಾಕೀಸ್‌ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

crime (2)

Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.