ಶುದ್ಧೀಕರಣ ಘಟಕವಿದ್ದರೂ ಶುದ್ಧ ನೀರಿಲ್ಲ!
•ವಾಡಿ ಜನತೆಗೆ ರಾಡಿ ನೀರೇ ಗತಿ•ಅನಾರೋಗ್ಯದ ಬಳುವಳಿ•ಅಧಿಕಾರಿಗಳ ನಿರ್ಲಕ್ಷ್ಯ
Team Udayavani, May 21, 2019, 1:11 PM IST
ವಾಡಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನವೂ ಪಾವತಿಸಲಾಗುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬ್ಲೀಚಿಂಗ್ ಫೌಡರ್ ಸೇರಿದಂತೆ ಇತರ ಬಳಕೆ ವಸ್ತುಗಳ ಖರೀದಿ ಲೆಕ್ಕಪತ್ರ ಇದೆ. ಇನ್ನು ಪೈಪ್ ದುರಸ್ತಿ, ಯಂತ್ರಗಳ ರಿಪೇರಿ ಹೆಸರಿನಲ್ಲಿ ಬರೆದಿಡಲಾದ ಬಿಲ್ಗಳ ಕಡತ ಕಚೇರಿಯಲ್ಲಿಡಲು ಜಾಗವಿಲ್ಲದಷ್ಟಿವೆ. ಇಷ್ಟಾಗಿಯೂ ಜನರಿಗೆ ಹನಿ ಶುದ್ಧ ನೀರು ಸಿಗುವುದಿಲ್ಲ. ವಾಡಿ ಜನರ ಪಾಲಿಗೆ ರಾಡಿ ನೀರೇ ಗತಿ ಎಂಬಂತಾಗಿದೆ!
ಹೌದು, ಮಿನಿ ಮುಂಬೈ ಎಂದು ಕರೆಯಿಸಿಕೊಳ್ಳುವ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಜನರಿಗೆ ಶುದ್ಧೀಕರಿಸದ ಕಲುಷಿತ ನೀರನ್ನೇ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಜನರ ಆರೋಗ್ಯದ ಮೂಲವೇ ಕುಡಿಯುವ ನೀರು ಮತ್ತು ತಿನ್ನುವ ಆಹಾರ. ಕುಡಿಯಲು ಶುದ್ಧ ನೀರು ಕೇಳುವುದು ಜನರ ಮೂಲಭೂತ ಹಕ್ಕು. ಪ್ರತಿ ಬಡಾವಣೆಗೂ ನೀರು ಸರಬರಾಜು ಮಾಡುತ್ತಿರುವ ಸ್ಥಳೀಯ ಪುರಸಭೆ ಆಡಳಿತ, ಅಶುದ್ಧ ನೀರನ್ನೇ ಶುದ್ಧ ನೀರೆಂದು ನಂಬಿಸಿ ವಂಚಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಈ ಮೊದಲು ಮಳೆಯಿಂದ ಹರಿದು ಬಂದ ನದಿ ನೀರನ್ನೇ ನೇರವಾಗಿ ಜನರಿಗೆ ತಲುಪಿಸಲಾಗುತ್ತಿತ್ತು. ಈಗ ಬೆಣ್ಣೆತೋರಾ ಜಲಾಶಯದಲ್ಲಿ ವರ್ಷಾನುಗಟ್ಟಲೆ ನಿಂತು ಹಸಿರು ಪಾಚಿಗಟ್ಟಿದ ಕಲುಷಿತ ನೀರನ್ನೇ ಜನರಿಗೆ ಪೂರೈಸಲಾಗುತ್ತಿದೆ. ನಳಗಳಿಂದ ಬರುವ ನೀರು ವಾಸನೆ ಬರುತ್ತಿದೆ. ನೀರಿನ ಬಣ್ಣ ಬದಲಾಗಿದೆ. ಕೊಳಕು ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ನೀರು ಯೋಗ್ಯವಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಕಲುಷಿತ ರಾಡಿ ನೀರು ಸೇವಿಸಿ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ವಾರ್ಡ್ 23ರ ಇಂದ್ರಾ ನಗರದ ಸಿಂಡಿಕೇಟ್ ನಿವಾಸಿಗಳು ಕಲ್ಲು ಗಣಿಯಲ್ಲಿ ನಿಂತ ನೀರು ಹೊತ್ತು ತರುತ್ತಿದ್ದಾರೆ. ಸೂಕ್ಷ್ತ್ರ ಜೀವಿಗಳು ನೀರಿನ ಮೂಲಕ ದೇಹ ಸೇರಿಕೊಂಡು ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ. ಪುರಸಭೆ ಪೂರೈಸುವ ನಳಗಳ ನೀರನ್ನು ಬಳಕೆಗೆ ಮತ್ತು ಖಾಸಗಿ ನೀರು ಶುದ್ಧೀಕರಣ ಘಟಕಗಳಿಂದ ಕುಡಿಯಲು ನೀರು ಖರೀದಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಪುರಸಭೆಯ ನೀರು ಶುದ್ಧೀಕರಣ ಘಟಕ ಕೇವಲ ನಾಮಕೇವಾಸ್ತೆ ಎಂಬಂತಿದೆ. ಅದು ಕೇಲವ ಖರ್ಚು ಲೆಕ್ಕ ಬರೆಯಲು ಮಾತ್ರ ಚಾಲನೆಯಲ್ಲಿದೆ ಎಂದು ನಿವಾಸಿಗಳು ಶಾಪ ಹಾಕುತ್ತಿದ್ದಾರೆ.
•ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?