ಕಾಲ-ವ್ಯಾಪ್ತಿ ಮೀರಿದ್ದೇ ಹಿಂದೂ ಧರ್ಮ: ನಿರ್ಭಯಾನಂದ ಶ್ರೀ


Team Udayavani, Jun 3, 2018, 10:59 AM IST

gul-1.jpg

ವಿಜಯಪುರ: ಹಿಂದೂ ಧರ್ಮದ ಮೂಲ ಕಾಲಗಣನೆಯ ವ್ಯಾಪ್ತತೆ ಮೀರಿದ್ದಾಗಿದೆ. ಹಿಂದೂ ಧರ್ಮದ ಪ್ರಾರಂಭಿಕ ತತ್ವಗಳಲ್ಲೇ ಅದೊಂದು ಪ್ರಬುದ್ಧ, ಪರಿಪೂರ್ಣ ಹಾಗೂ ಆಧುನಿಕ ವಿಜ್ಞಾನದ ಪ್ರತಿ ಧ್ವನಿಯಂತೆ ಕಂಡು ಬಂದಿದೆ.
ಇದೇ ಕಾರಣಕ್ಕೆ ವಿಶ್ವದ ಚಿಂತನ ಚೌಕಟ್ಟಿನಲ್ಲಿ ಪರಮ ಅದ್ಭುತವಾಗಿ ಕಂಗೊಳಿಸುತ್ತಿದೆ ಎಂದು ಗದಗ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀಜಿ ಬಣ್ಣಿಸಿದರು.

ಅವರು ರೋಮ್‌ ದೇಶದ ವ್ಯಾಟಿಕನ್‌ ನಗರದಲ್ಲಿ ವ್ಯಾಟಿಕನ್‌ ಚರ್ಚ್‌ನ ಕಾಂಡಿಫೀಕಲ್‌ ಕೌನ್ಸಿಲ್‌ ಫಾರ್‌ ಇಂಟರ್‌ ರಿಲಿಜಿಯಸ್‌ ಡಯಲಾಗ್‌ ಎಂಬ ಅಂಗ ಸಂಸ್ಥೆಯಿಂದ ಆಯೋಜಿಸಿದ್ದ ಅಂತರ್ಧರ್ಮೀಯ ಸಂವಾದ ಮತ್ತು ಚರ್ಚೆಯಲ್ಲಿ ಹಿಂದೂ ಧರ್ಮದ ಬಗ್ಗೆ ಶ್ರೀಗಳು ಮಾತನಾಡಿದರು.

“ಶೃತಿ ಮತ್ತು ಸ್ಮೃತಿಗಳು ಸನಾತನ ಹಾಗೂ ಯುಗ ಧರ್ಮಗಳೆಂದು ಪರಿಗಣಿತವಾಗಿವೆ. ವೇದಗಳ ಕರ್ಮಕಾಂಡದ ತಾರ್ಕಿಕ ಪರಿಪೂರ್ಣತೆಯೇ ಜ್ಞಾನಕಾಂಡ. ಪ್ರಸ್ಥಾನತ್ರಯಗಳಾದ ವೇದೋಪನಿಷತ್‌, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಹಿಂದೂ ಧರ್ಮದ ಆಧಾರಸ್ತಂಭಗಳಾದರೆ ನಾಲ್ಕು
ಯೋಗಗಳೇ ಅದರ ಸಾರ ಎಂದು ವಿವರಿಸಿದರು. 

ಏಕಂ ಸತ್‌ ವಿಪ್ರಾಃ ಬಹುಧಾ ವದಂತಿ ಎನ್ನುವುದು ಜಗತ್ತಿನ ಮಹಾನಿಯಮ. ಅಂದರೆ ಒಂದೇ ಸತ್ಯವನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಆದರೆ ಸರ್ವ ಖಲ್ವಿದಂ ಬ್ರಹ್ಮ ಅಂದರೆ ಎಲ್ಲವೂ ಬ್ರಹ್ಮವೇ ಆಗಿದೆ ಎನ್ನುವುದು ಅದರ ತಾರ್ಕಿಕ ಮುಂದುವರಿಕೆಯಾಗಿದೆ. ಇದೇ ಆಧುನಿಕ ವಿಜ್ಞಾನದ ಹಲವು ನಿಯಮಗಳಿಗೆ ಆಧಾರವಾಗಿದೆ ಎಂದು ವಿಶ್ಲೇಷಿಸಿದರು. ಮೃತ್ಯುವಿನ ವಿಶ್ಲೇಷಣೆಯಲ್ಲಿ ತೊಡಗಿದ ಭಾರತೀಯರಿಗೆ ದಕ್ಕಿದ ಮಹಾನ್‌ ಸಂಶೋಧನೆಯೇ ಮಾನವ ಒಂದು ಸಂಕೀರ್ಣ ವ್ಯವಸ್ಥೆ ಎಂಬುದು.

ದಿವ್ಯತೆ ಅದರ ಸಾರ. ಆ ನೆಲೆಯಲ್ಲಿ ಮನುಷ್ಯ ಅನಂತ. ಆದ್ದರಿಂದ ತನ್ನ ನಿಜದ ನೆಲೆಯಲ್ಲಿ ಅವನು ಏಕ. ಅನೇಕ ಎಂಬುದು ಕೇವಲ ಬಾಹ್ಯ ಆವಿರ್ಭಾವ. ಅದೊಂದು ವ್ಯಾವಹಾರಿಕ ಅವಶ್ಯಕತೆ. ವ್ಯವಹಾರದ ಗುರಿಯೇ ಏಕತ್ವವನ್ನು ಅರಿಯುವುದು. ಒಂದು ಸಂಕೀರ್ಣವಾಗಿ ಮನುಷ್ಯನಲ್ಲಿ ವ್ಯತ್ಯಾಸಗಳಿರುವುದು ಅವನ ಸಂಸ್ಕಾರಗಳ ವ್ಯತ್ಯಾಸದಿಂದ. ಆದ್ದರಿಂದ ಅವನ ದೇವರ ಕಲ್ಪನೆಯಲ್ಲೂ ವ್ಯತ್ಯಾಸವಿದೆ. 

ವ್ಯತ್ಯಾಸಗಳಿರುವುದು ವ್ಯಕ್ತತೆಯಲ್ಲೇ ಹೊರತು ವಸ್ತುವಿನಲ್ಲಲ್ಲ ಎಂದರು. ಆದ್ದರಿಂದಲೇ ಹಿಂದುವಿಗೆ ದೇವರಲ್ಲಿ, ಧಮ-ಮತಗಳಲ್ಲಿ ಬರುವ ಭಿನ್ನತೆ ಆದರಣೀಯ, ಘರ್ಷಣೆಯಲ್ಲ. ಏಕತ್ವದ ಕಡೆಗೆ ಸಾಗಿದಂತೆ ಅವನ ದೃಷ್ಟಿ ವಿಶಾಲವಾಗುತ್ತಾ ಅದೇ ನೈತಿಕತೆ, ನಿಸ್ವಾರ್ಥತೆ, ಸೇವಾಭಾವಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದಲೇ ಹಿಂದೂ ದೇಶದಲ್ಲಿ ಮತೀಯ ಘರ್ಷಣೆ, ಜನಾಂಗೀಯ ಘರ್ಷಣೆ ನಡೆದೇ ಇಲ್ಲೆ ಎಂದು ವಿಶ್ಲೇಷಿಸಿದರು. 

ಸಮ್ಮೇಳನದಲ್ಲಿ ಬೌದ್ಧ ಧರ್ಮದ ಮೇರಿಯಾ ಏಂಜಲಾ ಫಾಳಾ, ಕ್ರಿಶ್ಚಿಯನ್‌ ಧರ್ಮದ ಮೇರಿಯಾ ಡೆ ಜಿಯೋರ್ಗಿ, ಜೈನ ಧರ್ಮದ ಲಂಡನ್ನಿನ ಯಶವಂತಿ ಶಾ ಮತ್ತು ಶೃತಿ ಜೈನ್‌ ಅವರು ತಮ್ಮ ತಮ್ಮ ಧರ್ಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀಜಿ, ಸ್ವಾಮಿ ಪರಮಾನಂದಜೀ, ಮ್ಯಾರಿಸ್‌ನ ಡಾ| ಸ್ಟಿಫಾನೋ ದಿಯಾನೋ, ಇಟಲಿಯ ಸ್ವಾಮಿಯೋಗಾನಂದಗಿರಿ ಶ್ರೀಗಳು ಸೇರಿದಂತೆ ಇತರರು ಇದ್ದರು. ವ್ಯಾಟಿಕನ್‌ ಚರ್ಚ್‌ನ ನಿಯೋಜಿತ ಪ್ರತಿನಿಧಿ ರೆವರೆಂಡ್‌ ಬ್ರ್ಯಾನ್‌ ಲೋಬೊ ನಿರೂಪಿಸಿದರು. 

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.