ಎಸ್ಐಟಿಗೆ ದಾಖಲೆ ಸಲ್ಲಿಸುವೆ: ಜನಾರ್ದನ ರೆಡ್ಡಿ
Team Udayavani, Jun 12, 2017, 2:51 PM IST
ಕಲಬುರಗಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ 150 ಕೋಟಿ ರೂ. ಕಪ್ಪ ಕಾಣಿಕೆ ಪಡೆದಿರುವ ಸೀಡಿ ಪ್ರಕರಣ ಕುರಿತಾಗಿ ಎಸ್ಐಟಿ ಮುಂದೆ ಜೂನ್ 13ರಂದು ಹಾಜರಾಗಿ ದಾಖಲೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ
ರೆಡ್ಡಿ ತಿಳಿಸಿದರು.
ಚಿಂಚೋಳಿಯಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ 150 ಕೋಟಿ ರೂ. ಕಪ್ಪ ಪಡೆದಿರುವುದು ಸತ್ಯ. ಈಗ ಜೂ. 13ರಂದು
ಹಾಜರಾಗಲು ಎಸ್ಐಟಿ ನೋಟಿಸ್ ಜಾರಿ ಮಾಡಿದೆ. ಅಂದು ತಾವು ಎಸ್ಐಟಿ ಮುಂದೆ ಹಾಜರಾಗಿ, ಸೀಡಿ ಸೇರಿ ಎಲ್ಲ ಸಾಕ್ಷé ನೀಡುವುದಾಗಿ ಸ್ಪಷ್ಟಪಡಿಸಿದರು. ನನಗೆ ನ್ಯಾಯದ ಮೇಲೆ ನಂಬಿಕೆ ಇದೆ. ಜಯ ಸಿಕ್ಕೇ ಸಿಗುತ್ತದೆ. ಈ ಪ್ರಕರಣ
ಬಹಿರಂಗ ಮಾಡಿದ್ದರಿಂದ ತಮ್ಮನ್ನು ಅನಗತ್ಯವಾಗಿ ಕೆಲವು ಪ್ರಕರಣದಲ್ಲಿ ಸಿಲುಕಿಸಿ ಕಿರುಕುಳ ನೀಡಲಾಯಿತು. ಕಡೆಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ.ಈ ಪ್ರಕರಣದಲ್ಲೂ ಜಯ ಸಿಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.