ದುಷ್ಟ ಗುಣ ದೂರ ಮಾಡಿ ಸದ್ಗುಣ ಹೊಂದಿ: ಸ್ವಾಮೀಜಿ
Team Udayavani, Oct 16, 2021, 9:32 AM IST
ಮಾದನಹಿಪ್ಪರಗಿ: ದುಷ್ಟಗುಣ ದೂರ ಮಾಡಿ ಸದ್ಗುಣ ಹೊಂದಿ, ತನ್ನನ್ನು ತಾನು ಜಯಿಸುವ ಸಂಕೇತವೇ ವಿಜಯದಶಮಿ ಎಂದು ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಹೇಳಿದರು.
ಉಪಗ್ರಾಮವಾದ ವಾಡಿಯ ಕಾಳಿಕಾ ದೇವಿ ಮಠದಲ್ಲಿ ಮುಂಜಾನೆ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನಸ್ಸಿನಲ್ಲಿರುವ ರಾಕ್ಷಸಿ ಗುಣಗಳನ್ನು ಹೊಡೆದೋಡಿಸಿ. ದ್ವೇಷ ಅಸೂಯೆ ಗುಣಗಳನ್ನು ಅದುಮಿಟ್ಟು ಕ್ಷಮಾಗುಣ ಅಳವಡಿಸಿಕೊಂಡು ಎಲ್ಲರೂ ಒಂದಾಗಿ ಬಾಳುವುದು ಮಹಾನವಮಿ ಹಬ್ಬ ಎಂದರು.
ಒಬ್ಬರಿಗೊಬ್ಬರು ಬನ್ನಿ ಕೊಡುವ ಸಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ. ನಾವೆಲ್ಲರೂ ಒಂದು ಎಲ್ಲರನ್ನು ಪ್ರೀತಿಸೋಣ ಬೆಳೆಯೋಣ ಎಂಬ ಧ್ಯೇಯ ನಮ್ಮದಾಗಬೇಕು ಎಂದರು.
ಮೈಂದರಗಿಯ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಹಿಂದಿನ ಮತ್ಸರ ಮರೆತು ಒಬ್ಬರೊಗೊಬ್ಬರು ಬಂಗಾರ ಕೊಟ್ಟು ಅಪ್ಪಿಕೊಳ್ಳುವುದೇ ದಸರಾ ಹಬ್ಬದ ವಿಶೇಷ ಎಂದರು.
ಕಾಳಿಕಾ ದೇವಿ ಮಠ ಹಾಗೂ ಇಬ್ರಾಹಿಂಪುರ ಮಠದ ಮಹಾಂತ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸಲಿಂಗಯ್ನಾ ಸ್ವಾಮಿ, ಶಿವಾನಂದ ಪಾಟೀಲ, ಸಿದ್ಧರಾಮ ಅರಳಿಮರ, ಬಸವರಾಜ ಓನಮಶೆಟ್ಟಿ, ಶಾಂತಮಲ್ಲಪ್ಪ ಕಬಾಡಗಿ, ಗಣೇಶ ಓನಮಶೆಟ್ಟಿ, ಶರಣಬಸಪದಪ್ಪ ಜಿಡ್ಡಿಮನಿ, ಶಾಂತಮಲ್ಲ ಸಂಬಾಳೆ, ಕಲ್ಲಪ್ಪ ಸಿಂಗಸೆಟ್ಟಿ, ಶಿವಲಿಂಗಪ್ಪ ಮೈಂದರಗಿ, ಮಲ್ಲಿನಾಥ ಮೈಂದರಗಿ, ವಿಶ್ವನಾಥ ಪರೇಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!