ನಿರಂಕಾರಿ ಸೇವಕರಿಂದ ಶುಚಿಯಾಯ್ತು ಆಸ್ಪತ್ರೆ
ರೋಗಿಗಳ ಕೋಣೆ-ಶೌಚಗೃಹ ಆದವು ಸ್ವಚ್ಛ ಶುಚಿಯಾಯ್ತು ಸೇವಾಲಾಲ ಭವನ
Team Udayavani, Feb 24, 2020, 10:52 AM IST
ವಾಡಿ: ನಿರ್ವಹಣೆ ಕೊರತೆಯಿಂದ ಕಸದ ತೊಟ್ಟಿಯಂತಾಗಿದ್ದ ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಮೂಲಕ ಸಂತ ನಿರಂಕಾರಿ ಬಾಬಾ ಸೇವಕರು ಆದರ್ಶ ಮೆರೆದಿದ್ದಾರೆ.
ಎಲ್ಲೆಂದರಲ್ಲಿ ಹರಡಿಕೊಂಡಿದ್ದ ಔಷಧ-ಮಾತ್ರೆಗಳ ಪೊಟ್ಟಣ, ಇಂಜೆಕ್ಷನ್, ಸಿರಿಂಜ್, ಕಸ, ಧೂಳು ತೆರವು ಮಾಡಿದ ಸೇವಕರು, ನೀರಿಲ್ಲದೆ ಮಲಮೂತ್ರಗಳಿಂದ ಗಬ್ಬು ನಾರುತ್ತಿದ್ದ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸೇವಾ ಮನೋಭಾವ ಪ್ರದರ್ಶಿಸಿದರು.
ಸಂತ ನಿರಂಕಾರಿ ಬಾಬಾ ಹರದೇವಸಿಂಗ್ ಅವರ 66ನೇ ಜನ್ಮದಿನದ ಅಂಗವಾಗಿ ರವಿವಾರ ಬೆಳಗ್ಗೆ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ 52 ಜನರಿರುವ ನಿರಂಕಾರಿ ಬಾಬಾ ಸೇವಕರ ತಂಡ ಶುಚಿತ್ವ ಕಾರ್ಯಕ್ಕೆ ಮುಂದಾಯಿತು. ಆಸ್ಪತ್ರೆಯ ಭವ್ಯ ಕಟ್ಟಡದ ಒಳಾಂಗಣ, ಹೊರಾಂಗಣವನ್ನು ತೊಳೆದು ಥಳಥಳ ಹೊಳೆಯುವಂತೆ ಮಾಡಿದರು. ಕಟ್ಟಡದ ಸುತ್ತಲೂ ಬೆಳೆದು ನಿಂತಿದ್ದ ಮುಳ್ಳುಕಂಟಿ ಗಿಡಗಳನ್ನು ಕತ್ತರಿಸಿದರು. ಶವ ಸಂಸ್ಕಾರದ ಸುತ್ತಲೂ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿದರು. ನೀರಿನ ಸೌಕರ್ಯವಿಲ್ಲದೇ ಹದಗೆಟ್ಟಿದ್ದ ಒಳ ಮತ್ತು ಹೊರ ರೋಗಿಗಳ ಶೌಚಾಲಯಗಳ ದುಸ್ಥಿತಿಗೆ ಮರುಗಿದ ಸೇವಕರು, ಕಿಂಚಿತ್ತೂ ಹೇಸಿಕೊಳ್ಳದೆ ಆಸ್ಪತ್ರೆಯ ಸಿಬ್ಬಂದಿಗಳನ್ನು ದೂರದೇ ಪಿನಾಯಿಲ್ ಹಾಕಿ ಶುಚಿಗೊಳಿಸಿದರು.
ಹೆರಿಗೆ ಕೋಣೆಯೊಳಗಿನ ನೆಲ ಹಾಸಿಗೆಯನ್ನು ರಾಸಾಯನಿಕ ತೈಲ ಸಿಂಪರಣೆಯಿಂದ ಸ್ವಚ್ಛಗೊಳಿದರು. ಹೀಗೆ ಸುಮಾರು ಎರಡು ತಾಸು ಸಮಯದಲ್ಲಿ ಇಡೀ ಆಸ್ಪತ್ರೆ ಹೊಳೆಯುವಂತೆ ಮಾಡುವ ಮೂಲಕ ವೈದ್ಯಾಧಿ ಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ನಿರಂಕಾರಿ ಸೇವಕರ ನಿಸ್ವಾರ್ಥ ಸೇವೆಗೆ ಆಸ್ಪತ್ರೆಯ ಡಾ| ಜುನೈದ್ ಖಾನ್ ಶ್ಲಾಘನೆ ವ್ಯಕ್ತಪಡಿಸಿದರು.
ಸಂತ ನಿರಂಕಾರಿ ಸೇವಾ ಕೇಂದ್ರದ ಸಂಯೋಜಕ ಶಿವರಾಮ ಪವಾರ, ನಗರ ಸಂಚಾಲಕ ಪ್ರಕಾಶ ಪವಾರ, ಚಿತ್ತಾಪುರ ಸಂಚಾಲಕ ವೇಣುಗೋಪಾಲ ಜಾಧವ, ರೂಪಸಿಂಗ್ ರಾಠೊಡ, ತುಳಸಿರಾಮ ರಾಠೊಡ, ಗೋವಿಂದ ಚವ್ಹಾಣ ಹಾಗೂ ಯುವಕರು, ಯುವತಿಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸೇವಾಲಾಲ ನಗರದ ಸೇವಾಲಾಲ ಭವನ ಆವರಣ ಶುಚಿಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು