ವೀರ ಮಹಾಂತ ಶಿವಾಚಾರ್ಯರ ಪಟ್ಟಾಧಿಕಾರ
Team Udayavani, Feb 8, 2018, 10:04 AM IST
ಅಫಜಲಪುರ: ತಾಲೂಕಿನ ಚಿನ್ಮಯಗಿರಿಯಲ್ಲಿ ಮೂರು ದಿನಗಳಿಂದ ಭಕ್ತರ ಸಂಭ್ರಮವೋ ಸಂಭ್ರಮ. ನೂತನ ಶ್ರೀ ವೀರ ಮಹಾಂತ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮಗಳನ್ನು ಕಣ್ತುಂಬ ಕಂಡು ಭಕ್ತರು ಪುನೀತರಾದರು.
50 ವರ್ಷಗಳ ಹಿಂದೆ ಸಿದ್ದರಾಮ ಶಿವಾಚಾರ್ಯರ ಪಟ್ಟಾಧಿಕಾರ ಕಾರ್ಯಕ್ರಮ ನಡೆದಿತ್ತು. ಆದರೆ ಅದನ್ನು ಕಂಡವರು ಕಡಿಮೆ ಜನ. ಇಂದಿನ ಈ ಭಕ್ತ ಸಮೂಹ ಅದ್ಬುತವಾಗಿ ನಡೆದ ಪಟ್ಟಾ ಧಿಕಾರ ಮಹೋತ್ಸವವನ್ನು ಕಂಡು ಪುಳಕಿತರಾದರು. ನೂತನ ಶ್ರೀಗಳ ಆನೆ ಮೇಲಿನ ಮೆರವಣಿಗೆ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ನೂತನವಾಗಿ ನಿರ್ಮಿಸಲಾದ ದೇವಸ್ಥಾನದ ಕಟ್ಟಡ ಹಾಗೂ ಬೆಳ್ಳಿ ಮೂರ್ತಿ ಸ್ಥಾಪನೆ, ಲಿಂಗ ಸ್ಥಾಪನೆ, ಹಿರಿಯ ಶ್ರೀಗಳ ಸಂಕಲ್ಪದಂತೆ ಭಕ್ತರ ಸಹಾಯದೊಂದಿಗೆ ಅದ್ಬುತವಾಗಿ ನಿರ್ಮಾಣವಾಗಿರುವುದನ್ನು ಕಂಡು ಭಕ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಶ್ರೀ ಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾವಿ ಹಾಗೂ ಬಸವರಾಜ ಸುಂಟನೂರ ಅವರು ಪ್ರಸಾದ ಸೇವೆ ಸಲ್ಲಿಸಿದರು. ಚವಡಾಪುರ ಗ್ರಾಪಂ ಅಧ್ಯಕ್ಷೆ ಮಾದೇವಿ ಸಾಯಬಣ್ಣ ಜಮಾದಾರ ಹಾಗೂ ಸಹೋದರರು ನೂತನ ಗೋಪುರ ಕಳಸ ದಾನವಾಗಿ ನೀಡಿದ್ದಾರೆ ಹಾಗೂ ಶರಣಯ್ಯ ಸ್ವಾಮಿ ಲಿಂಗ ನೀಡಿದ್ದಾರೆ. ಜೇವರ್ಗಿ ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಹಣಮಂತಗೋಳ ಮೂರ್ತಿ ದಾನ ಮಾಡಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ