ಕಸ ಕೊಟ್ಟು ಓಣಿ ಹಸನಿಟ್ಟ ವಾಡಿ ಜನತೆ

ಮನೆಯ ಕಸವನ್ನು ಡಬ್ಬಿಯಲ್ಲಿ ತುಂಬಿಟ್ಟು ಬೆಳಗ್ಗೆ ವಾಹನಕ್ಕೆ ಸುರಿಯುತ್ತಾರೆ.

Team Udayavani, Aug 10, 2021, 5:59 PM IST

ಕಸ ಕೊಟ್ಟು ಓಣಿ ಹಸನಿಟ್ಟ ವಾಡಿ ಜನತೆ

ವಾಡಿ: ಮನೆಯ ಕಸವನ್ನು ಅಂಗಳಕ್ಕೆ ಹರಡಿ ಅಂಗಳದ ಕಸವನ್ನು ಬೀದಿಗೆ ಬೀಸಾಡುತ್ತಿದ್ದ ಬಡಾವಣೆಯ ಜನರಲ್ಲಿ ಇದ್ದಕಿದ್ದಂತೆ ಬದಲಾವಣೆ ಬಂದಿದೆ! ಐದಾರು ದಿನಕ್ಕೊಮ್ಮೆ ಬೀದಿ ಕಸ ವಿಲೇವಾರಿ ಮಾಡುತ್ತಿದ್ದ ಪೌರಕಾರ್ಮಿಕರು, ಪ್ರತಿದಿನ ಜನರ ಮನೆಬಾಗಿಲಿಗೆ ಬಂದು ನಿಲ್ಲುತ್ತಿದ್ದಾರೆ!! ರೋಗರುಜಿನುಗಳ ತಾಣವಾಗಿರುತ್ತಿದ್ದ ಬೀದಿಗಳಲ್ಲಿ ಈಗ ಕಸ ಕಣ್ಮರೆಯಾಗಿದ್ದು, ಓಣಿಯ ಜನರೇ ಅಲ್ಲಿ ರಂಗೋಲಿ ಬಿಡಿಸಿ ಬಡಾವಣೆಗಳ ರಂಗು ಬದಲಿಸಿದ್ದಾರೆ!!!

ಹೌದು. ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ಚಿತ್ತಾಪುರ ತಾಲೂಕಿನ ಸಿಮೆಂಟ್‌ ನಗರಿ ವಾಡಿ ಪಟ್ಟಣದ ಪುರಸಭೆ ಆಡಳಿತ ಸ್ವಚ್ಛತಾ ಅಭಿಯಾನದ ತನ್ನ ನಿರೀಕ್ಷಿತ ಗುರಿ ಮುಟ್ಟಲು ದೃಢ ಹೆಜ್ಜೆಯಿಟ್ಟಿದೆ. ಘನತ್ಯಾಜ್ಯ ವಿಲೇವಾರಿಗೆ ವಿಶೇಷ ಆದ್ಯತೆ ನೀಡಿದೆ. ಪ್ರತಿದಿನ ಬೆಳಗ್ಗೆ ಬಡಾವಣೆಗೆ ಬರುವ ಪುರಸಭೆ ಕಸ ವಿಲೇವಾರಿ ವಾಹನಗಳು ಹತ್ತಾರು ಟನ್‌ ಕಸವನ್ನು ನಗರದ ಹೊರ ವಲಯದ ಕಸ ಸಂಸ್ಕರಣ ಘಟಕಕ್ಕೆ ಸಾಗಿಸುತ್ತಿವೆ. ಪೌರಕಾರ್ಮಿಕರು
ಜನರಿಂದ ನೇರವಾಗಿ ಹಸಿ ಕಸ-ಒಣ ಕಸವನ್ನು ಪ್ರತ್ಯೇಕವಾಗಿ ಸ್ವೀಕರಿಸಿ ಗೊಬ್ಬರ ತಯಾರಿಕೆ ಯಂತ್ರಕ್ಕೆ ಕೊಡುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳಿಗೆ ಸಿಸಿ ರಸ್ತೆಗಳ ಭಾಗ್ಯ ದೊರೆತಿದೆ. ಸಿಸಿ ಚರಂಡಿಗಳು ನಿರ್ಮಾಣಗೊಂಡಿವೆ.

ಬದಲಾವಣೆಯತ್ತ ಮುಖ ಮಾಡಿರುವ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಅಂಬೇಡ್ಕರ್‌ ಕಾಲೋನಿ, ಜಾಂಬವೀರ ಕಾಲೋನಿ, ಪಿಲಕಮ್ಮಾದೇವಿ ಬಡಾವಣೆ. ಕಲಕಂ ಏರಿಯಾ, ಚೌಡೇಶ್ವರ ಕಾಲೋನಿ, ಸಿದ್ಧಾರ್ಥ ನಗರ, ಸೇವಾಲಾಲ ನಗರ, ರೆಸ್ಟ್‌ಕ್ಯಾಂಪ್‌ ತಾಂಡಾ, ಮರಾಠಾ ಗಲ್ಲಿ, ಶಿವರಾಯ ಚೌಕಿ, ಭೀಮನಗರ ಓಣಿಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ.

“ವಾಡಿಯಲ್ಲ ಅದು ರಾಡಿ’ ಎಂದು ಹೊರಗಿನ ಜನರು ಅವಮಾನಕರ ಮಾತುಗಳಿಂದ ಟೀಕಿಸುವ ಕಾಲವೊಂದಿತ್ತು. ಅದೀಗ ನಿಧಾನವಾಗಿ ಬದಲಾಗುತ್ತಿದೆ. ಪ್ರತಿಯೊಂದು ಬಡಾವಣೆಗೆ ಸಿಸಿ ರಸ್ತೆಗಳು ಬಂದಿವೆ. ಬಹುತೇಕ ಕಡೆಗಳಲ್ಲಿ ಚರಂಡಿಗಳು ನಿರ್ಮಾಣವಾಗಿವೆ. ಜನರಲ್ಲಿ ಜಾಗೃತಿ ಮೂಡಿದೆ. ಕಸವನ್ನು ರಸ್ತೆಗೆ ಚೆಲ್ಲುವ ಪದ್ಧತಿ ಕೊನೆಗೊಂಡಿದೆ. ಮನೆಯ ಕಸವನ್ನು ಡಬ್ಬಿಯಲ್ಲಿ ತುಂಬಿಟ್ಟು ಬೆಳಗ್ಗೆ ವಾಹನಕ್ಕೆ ಸುರಿಯುತ್ತಾರೆ. ಪುರಸಭೆ ವಾಹನಗಳು ಬಡಾವಣೆಗೆ
ಬರುತ್ತಿವೆ. ಪೌರಕಾರ್ಮಿಕರು ಮನೆಬಾಗಿಲಿಗೆ ಬಂದು ಕಸ ಸ್ವೀಕರಿಸುತ್ತಾರೆ. ಇದೊಂದು ಉತ್ತಮ ಪರಿವರ್ತನೆ ಎನ್ನುತ್ತಾರೆ ಮಲ್ಲಿಕಾರ್ಜುನ ಗುಡಿ ಬಡಾವಣೆ ನಿವಾಸಿ ಜುಗಲ್‌ಕಿಶೋರ ವರ್ಮಾ.

ಕಸದ ಬುಟ್ಟಿಗಳಲ್ಲಿ ಕಸ ತುಂಬಿಕೊಂಡ ಜನರು ಪುರಸಭೆ ವಾಹನ ಬರುವಿಕೆಗಾಗಿ ಕಾಯ್ದು ನಿಂತಿರುತ್ತಾರೆ. ಬಿಯ್ನಾಬಾನಿ ಬಡಾವಣೆ, ಹನುಮಾನ ನಗರ, ವಿಜಯನಗರ, ಇಂದ್ರಾ ನಗರದಂತಹ ಸ್ಲಂ ಬಡಾವಣೆಗಳು ಮೂಲಸೌಕರ್ಯಗಳಿಂದ ವಂಚಿತಗೊಂಡಿವೆ. ಈ ಬಡಾವಣೆಯ ಜನರು ನಗರದಲ್ಲಿದ್ದರೂ ಸಮಸ್ಯೆಗಳ ಮಧ್ಯೆ ಬದುಕು ಸಾಗಿಸುತ್ತಿದ್ದಾರೆ. ಸಮಸ್ಯೆಗಳನ್ನು ಜೀವಂತವಾಗಿಟ್ಟುಕೊಂಡೇ ಪುರಸಭೆ ಆಡಳಿತ ಅಸ್ವಚ್ಛತೆಯ ವಿರುದ್ಧ ಹೋರಾಡುತ್ತಿದೆ. ಏಳು ಬೀಳಿನ ಸಂಕಟದಲ್ಲೂ ವಾಡಿ ನಗರ ಶೇ.90ರಷ್ಟು ಸ್ವತ್ಛತೆಯಿಂದ ಕೂಡಿದೆ.

ಕುಡಿಯಲು ಶುದ್ಧ ನೀರು ಪೂರೈಸುವ ಜತೆಗೆ ನಗರದ ಅಂದ ಹದಗೆಡಿಸುತ್ತಿರುವ ಹಂದಿ ಮತ್ತು ಬೀದಿ ನಾಯಿಗಳನ್ನು ನಿಯಂತ್ರಿಸಿ ಸೊಳ್ಳೆ ಕಾಟದಿಂದ ಜನರನ್ನು ರಕ್ಷಿಸಿದರೆ ಪುರಸಭೆ ಆಡಳಿತ ತನ್ನ ಹಣೆಗೆ ಇನ್ನಷ್ಟು ಪ್ರಗತಿ ಗರಿ ಮುಡಿದುಕೊಳ್ಳಲಿದೆ ಎನ್ನುತ್ತಾರೆ ಪ್ರಜ್ಞಾವಂತರು.

ಕೇವಲ ನಲವತ್ತು ಜನ ಪೌರಕಾರ್ಮಿಕರಿಂದ 23 ವಾರ್ಡ್‌ಗಳ ಸ್ವಚ್ಛತೆ ಮಾಡಿಸಲಾಗುತ್ತಿದೆ. ಹೀಗಾಗಿ ಕೆಲವೇ ಜನ ಪೌರಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೇರಲಾಗುತ್ತಿದೆ. ಇನ್ನಷ್ಟು ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಚರಂಡಿಗಳ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ವಾರಕ್ಕೊಮ್ಮೆಯಾದರೂ ಮುಖ್ಯಾಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿದರೆ, ಪೋಲಾಗುವ ಕುಡಿಯುವ ನೀರು, ಬೀದಿ ದೀಪಗಳ ಸಮಸ್ಯೆ, ಶುಚಿತ್ವದ ದರ್ಶನವಾಗುತ್ತದೆ.
*ಜುಗಲ್‌ಕಿಶೋರ ವರ್ಮಾ. ನಿವೃತ್ತ ಎಸಿಸಿ ಕಾರ್ಮಿಕ, ಮಲ್ಲಿಕಾರ್ಜುನ ಗುಡಿ ಬಡಾವಣೆ ನಿವಾಸಿ.

*ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.