ಬಂಜಾರಾ ಬದುಕಿಗೆ ಸೇವಾಲಾಲ ಬೆಳಕು
ಬಾಬಾಸಾಹೇಬರಿಂದ ಮೀಸಲಾತಿ ಸೌಕರ್ಯ ತಾಂಡಾಗಳಲ್ಲಿ ಹಬ್ಬದ ವಾತಾವರಣ
Team Udayavani, Feb 10, 2020, 10:55 AM IST
ವಾಡಿ: ಅಡವಿಯಲ್ಲಿ ತಿರುಗುತ್ತ ಅನ್ನಕ್ಕಾಗಿ ಅಲೆಯುತ್ತಿದ್ದ ಅಲೆಮಾರಿ ಬಂಜಾರಾ ಜನಾಂಗದ ಬದುಕು ಅರಳಲು ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಮತ್ತು ಸಂತ ಶ್ರೀ ಸೇವಾಲಾಲ ಮಹಾರಾಜರ ಹೋರಾಟ ಕಾರಣವಾಗಿದೆ ಎಂದು ಮಾಜಿ ಶಾಸಕ, ಬಂಜಾರಾ ಸಮಾಜದ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು.
ಬಂಜಾರಾ ಸಮುದಾಯದ ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ 281ನೇ ಜಯಂತಿ ನಿಮಿತ್ತ ರವಿವಾರ ಪಟ್ಟಣದ ಸೇವಾಲಾಲ ನಗರದ ಸೇವಾಲಾಲ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಲಂಬಾಣಿ ಯುವತಿಯರ ಮದುವೆ ಎಂದರೆ ವರನಿಗೆ ಮಗಳನ್ನು ಮಾರಿಕೊಂಡಂತೆ. ಅಲೆಮಾರಿ ಜೀವನದ ಬೆನ್ನಟ್ಟಿ ಭೂಮಿ ಸುತ್ತುವ ಈ ಜನಾಂಗದ ಬಂಧುಗಳು ಕಣ್ಣಿಗೆ ಬೀಳುವುದು ಅದ್ಯಾವೂದೋ ಊರಿನ ಸಂತೆ ಅಥವಾ ಜಾತ್ರೆಗಳಲ್ಲಿ ಮಾತ್ರ. ಪರಸ್ಪರ ಭೇಟಿಯಾದಾಗ ಎದೆಗಪ್ಪಿಸಿಕೊಂಡು ಗೊಳ್ಳೋ ಎಂದು ಅಳುತ್ತಿದ್ದರು. ಇಂತಹ ಹೀನಾಯ ಬದುಕಿನ ಹಿನ್ನೆಲೆ ಹೊಂದಿರುವ ಬಂಜಾರಾ ಸಮುದಾಯಕ್ಕೆ ಬಾಬಾಸಾಹೇಬರು ಮೀಸಲಾತಿ ಒದಗಿಸಿ ಬೆಳಕು ನೀಡಿದ್ದಾರೆ. ಸಂತ ಸೇವಾಲಾಲ ಮಹಾರಾಜರು ಮಾರ್ಗದರ್ಶನ ನೀಡಿ ಕಷ್ಟಗಳನ್ನು ದೂರ ಮಾಡಿದ್ದಾರೆ. ಅಂತಹ ಮಹಾನ್ ಸಂತನ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ ಮಾತನಾಡಿ, ಪ್ರತಿ ವರ್ಷದ ಫೆಬ್ರವರಿ ತಿಂಗಳ 14 ಮತ್ತು 15ರಂದು ದೇಶದ ಎಲ್ಲೆಡೆ ಏಕಕಾಲಕ್ಕೆ ಸೇವಾಲಾಲ ಮಹಾರಾಜರ ಜಯಂತಿ ನಡೆಯುತ್ತದೆ. ಈ ದಿನಗಳಲ್ಲಿ ಲಂಬಾಣಿಗರ ತಾಂಡಾಗಳಲ್ಲಿ ಹಬ್ಬದ ವಾತಾವರಣ ಇರುತ್ತದೆ ಎಂದರು.
ಫೆ.15ರಂದು ನಗರದಲ್ಲಿ ಮುಗುಳನಾಗಾಂವ ಶ್ರೀಯಲ್ಲಾಲಿಂಗ ಪುಣ್ಯಾಶ್ರಮದ ಪೂಜ್ಯ ಜೇಮಸಿಂಗ್ ಮಹಾರಾಜ, ಗೊಬ್ಬೂರ ಮಠದ ಶ್ರೀ ಬಳಿರಾಮ ಮಹಾರಾಜರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ, ಬೃಹತ್ ಬಹಿರಂಗ ಸಭೆ, ಉಚಿತ ಸಾಮೂಹಿಕ ವಿವಾಹ, ಪ್ರತಿಭಾವಂತ ಬಂಜಾರಾ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಸಮಾಜದ ಹಿರಿಯ ಮುಖಂಡರಾದ ರಮೇಶ ಕಾರಬಾರಿ, ದೇವಜಿ ನಾಯಕ, ಮೋತಿರಾಮ ರಾಠೊಡ, ರಾಮಚಂದ್ರ ರಾಠೊಡ, ಸೋಮಸಿಂಗ್ ರಾಠೊಡ, ಗಣೇಶ ಚವ್ಹಾಣ, ತುಕಾರಾಮ ರಾಠೊಡ, ರಾಮು ರಾಠೊಡ, ರಾಜು ಪವಾರ, ಈಶ್ವರ ರಾಠೊಡ, ಕಿಶನ್ ಜಾಧವ, ನಾಮದೇವ ಚವ್ಹಾಣ, ಅಂಬಾದಾಸ ಜಾಧವ, ಬೋರು ರಾಠೊಡ ಯಾಗಾಪುರ, ದಿನೇಶ ಗೋಪಾಲ ರಾಠೊಡ, ಧರಮ ಪವಾರ, ಪಾಂಡು ರಾಠೊಡ, ದೇವು ಜಾಧವ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ