ಶತಮಾನಗಳ ಕಥೆ ಹೇಳುವ ಬಾವಿಗಳು ಕಲುಷಿತ


Team Udayavani, Oct 6, 2018, 11:05 AM IST

gul-5.jpg

ವಾಡಿ: ಶತಮಾನಗಳಿಂದ ಈ ಗ್ರಾಮದ ಜನರಿಗೆ ಕುಡಿಯಲು ಸಿಹಿ ನೀರು ಹಂಚುತ್ತಿದ್ದ ಬಾವಿಗಳೀಗ ಏಕಾಏಕಿ ಕಲುಷಿತಗೊಂಡಿದ್ದು, ನೀರಿನಲ್ಲಿ ರಾಸಾಯನಿಕ ಮಿಶ್ರಣದ ವಾಸನೆ ಬರುತ್ತಿದೆ. ತಿಳಿ ನೀರಿನಲ್ಲಿ ಹಸಿರು ಪಾಚಿ ಕಾಣಿಸಿಕೊಂಡಿದೆ. ನಿತ್ಯ ಕುಡಿಯಲು ನೀರು ಪಡೆಯುತ್ತಿದ್ದ ಗ್ರಾಮಸ್ಥರು ಈಗ ಬಾವಿ ಹತ್ತಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಜಿಪಂ ಕೇಂದ್ರ ಸ್ಥಾನವಾಗಿರುವ ರಾವೂರ ಗ್ರಾಮದಲ್ಲಿ ಶತಮಾನಗಳ ಕಥೆ ಹೇಳುವ ನೂರಾರು ಬಾವಿಗಳಿದ್ದು, ನಿರ್ವಹಣೆ ಕೊರತೆಯಿಂದ ಹಲವು ಬಾವಿಗಳು ಬಳಕೆಯಾಗದೆ ಕಸಕಡ್ಡಿಯಿಂದ ಭರ್ತಿಯಾಗಿ ಪಾಳು ಬಿದ್ದಿದ್ದು, ಇನ್ನು ಕೆಲವು ಬಾವಿಗಳು ಮಾತ್ರ ಇಂದಿಗೂ ನೀರು ಪೂರೈಸುವ ಮೂಲಕ ಗ್ರಾಮಸ್ಥರ ಒಡಲ ದಾಹ ತಣಿಸುತ್ತಿವೆ. ಸದಾ ಶುದ್ಧ ಹಾಗೂ ಸಿಹಿ ನೀರಿನಿಂದ ತುಂಬಿರುತ್ತಿದ್ದ ಕೆಲ ಬಾವಿಗಳಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಊರಿನ ಜನರಲ್ಲಿ ಆತಂಕ ಎದುರಾಗಿದೆ.

ಗ್ರಾಮದ ವಾರ್ಡ್‌ 1ರಲ್ಲಿ ಇರುವ ತೇಲಿ ಬಾವಿಯ ನೀರಿನಿಂದ ರಾಸಾಯನಿಕ ತೈಲದ ವಾಸನೆ ಹರಡುತ್ತಿದೆ. ಕೃಷಿ ಚಟುವಟಿಕೆಗೆ ಬಳಸಲಾಗುವ ರಾಸಾಯನಿಕ ತೈಲದ ಬ್ಯಾರಲ್‌ಗ‌ಳನ್ನು ಯಾರೋ ಬಾವಿ ನೀರಿನಲ್ಲಿ ತೊಳೆದಿರಬೇಕು ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದ್ದು, ಅಂತರ್ಜಲದ ಸೆಲೆಯ ಮೂಲಕ ಗ್ರಾಮದ ಹಲವು ಬಾವಿಗಳಿಗೆ ರಾಸಾಯನಿಕ ತೈಲ ತೇಲಿ ಹೋಗಿದೆ ಎಂಬುದೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಐತಿಹಾಸಿಕ ಬಾವಿಗೂ ಈ ರಾಸಾಯನಿಕ ತೈಲ ಹರಿದು ಬಂದಿದೆ ಎನ್ನಲಾಗಿದ್ದು, ಮಠದ ಆಧೀನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳ ಅಕ್ಷರದಾಸೋಹ ಹಾಗೂ ಶ್ರೀ ಮಠದಿಂದ ನಿತ್ಯ
ನಡೆಯುವ ಅನ್ನದಾಸೋಹಕ್ಕೆ ಇದೇ ಬಾವಿ ನೀರು ಬಳಕೆಯಾಗುತ್ತಿದೆ. ವಸತಿನಿಲಯದ ಸಾವಿರಾರು ಮಕ್ಕಳು ಇದೇ ನೀರನ್ನು ಕುಡಿಯುತ್ತಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾವೂರಿನ ಬಾವಿಗಳ ನೀರಿನ ಸೆಲೆಗಳಲ್ಲಿ ಪೆಟ್ರೋಲ್‌ ಸರಬರಾಜಾಗಿ ಕುಡಿಯುವ ನೀರು ವಾಸನೆ ಹರಡಿತ್ತು. ಈಗ ಇದೇ ಬಾವಿಗಳ ಸೆಲೆಗಳಲ್ಲಿ ಕೃಷಿಗೆ ಬಳಕೆ ಮಾಡುವ ರಸಾಯನಿಕ ತೈಲ ಮಿಶ್ರಣವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಗ್ರಾಪಂ ಅಧಿಕಾರಿಗಳು ಬಾವಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಬಾವಿಗಳ ಸ್ವಚ್ಚತೆಗೆ ಕ್ರಮಕೈಗೊಂಡಿಲ್ಲ. ತಕ್ಷಣ ಗ್ರಾಮದ ಎಲ್ಲ ಬಾವಿಗಳ ನೀರು ಪರೀಕ್ಷೆಗೊಳಪಡಿಸಬೇಕು ಮತ್ತು ಸ್ವತ್ಛತೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.