ಹೈದ್ರಾಬಾದ ಕರ್ನಾಟಕಕ್ಕೆ ಹೆಗಡೆ ಕೊಡುಗೆ ಏನು
Team Udayavani, Jan 19, 2018, 10:38 AM IST
ಕಲಬುರಗಿ: ಶಿಸ್ತಿನ ಪಕ್ಷ ಎಂದು ಬಡಾಯಿಕೊಚ್ಚಿಕೊಳ್ಳುವ ಬಿಜೆಪಿಯ ಕೇಂದ್ರ ಸಚಿವರಿಗೆ ಹೇಗೆ ಮಾತನಾಡಬೇಕು
ಎನ್ನುವ ಸಂಸ್ಕೃತಿಯೇಗೊತ್ತಿಲ್ಲ. ಹೈದ್ರಾಬಾದ ಕರ್ನಾಟಕಕ್ಕೆ ನಾವು ಏನು ಮಾಡಿದ್ದೇವೆ ಎನ್ನುವುದಕ್ಕಿಂತ ಅನಂತಕುಮಾರ ಹೆಗಡೆ ಅವರ ಕೊಡುಗೆ ಏನು ಎನ್ನುವುದನ್ನು ಮೊದಲು ಹೇಳಲಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಗಡೆಗೆ ಕನಿಷ್ಠ ಸಂಸ್ಕೃತಿಯೂ ಇಲ್ಲ. ಅಂತಹವರಿಂದ ದೇಶದ ಜನರು ಕಲಿಯಬೇಕಾದದ್ದು ಏನೂ ಇಲ್ಲ. ಅಶಿಸ್ತಿನಿಂದ ವರ್ತಿಸುವ ಹೆಗಡೆ ಅವರಿಗೆ ಕೇಂದ್ರ ಸಚಿವರಾಗಿರಲು ನೈತಿಕತೆಯೂ ಇಲ್ಲ. ಹೆಗಡೆ ಹೈಕಕ್ಕೆ ಏನು ಕೊಡುಗೆ ನೀಡಿದ್ದಾರೆ.
ಸ್ಕಿಲ್ ಡೆವಲಪ್ಮೆಂಟ್ ಸಚಿವರಾಗಿ ಎಷ್ಟು ಕಂಪನಿಗಳನ್ನು ಈ ಭಾಗಕ್ಕೆ ಅಥವಾ ರಾಜ್ಯಕ್ಕೆ ತಂದಿದ್ದಾರೆ ಎನ್ನುವುದನ್ನು
ರಾಜ್ಯದ ಜನತೆ ತಿಳಿಸಿ, ನಂತರ ವೀರಾವೇಶದಿಂದ ಮಾತನಾಡಿ ಎಂದರು. ನಾನು ಅಧಿಕಾರದಲ್ಲಿದ್ದಾಗ ಹೈಕ ಭಾಗಕ್ಕೆ ಮತ್ತು ರಾಜ್ಯಕ್ಕೆ ಒಟ್ಟು ನಾಲ್ಕು ಕಂಪನಿಗಳನ್ನು ತಂದಿದ್ದೇನೆ. ಇದು ನನ್ನ ಕೊಡುಗೆ. ಆದರೆ, ಇವರೇನು ಮಾಡಿದ್ದಾರೆ.
ಮನುವಾದದ ಮೂಲಕ ಸಮಾಜ ಒಡೆಯುವ ಇವರಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಇವರೆಲ್ಲ ಸಂವಿಧಾನ ಬದಲಾವಣೆಗೆ ಮಾಡೋದಕ್ಕೆ ಅಧಿಕಾರಕ್ಕೆ ಬಂದವರು. ಇವರಿಂದ ಪ್ರಜಾಪ್ರಭುತ್ವ, ಸಮಾನತೆ ಮತ್ತು
ಸಮಾಜದ ಸೌಖ್ಯ ಕಾಪಾಡಲು ಸಾಧ್ಯವಿಲ್ಲ ಎಂದರು.
ಸಿಎಂ ಆಗೋ ಕನಸು ಬಿದ್ದೇ ಇಲ್ಲ ಕರ್ನಾಟಕ ರಾಜ್ಯದಕ್ಕೆ ದಲಿತ ಮುಖ್ಯಮಂತ್ರಿ ಬೇಕು ಅಥವಾ ಆಗಲಿ ಎಂದು ನಾನು ಹೇಳಿಲ್ಲ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಚುನಾವಣೆಯನ್ನು ನಮ್ಮ ಕ್ಯಾಪ್ಟನ್ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಸಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಅನುಸರಿಸಲಿದ್ದಾರೆ. ಯಾವತ್ತೂ ನನಗೆ ಮುಖ್ಯಮಂತ್ರಿ ಆಗುವ ಕನಸು ಬಿದ್ದೇ ಇಲ್ಲ ಎಂದು ಖೊಳ್ಳನೆ ನಕ್ಕರು.
ರಾಜ್ಯಕ್ಕೆ ರಾಹುಲ್ಗಾಂಧಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಫೆಬ್ರುವರಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಫೆ. 12, 13 ಮತ್ತು 14ನೇ ತಾರೀಖೀನಂದು ಬರುವ ಅವರು, ಕಲಬುರಗಿ ಜಿಲ್ಲೆಗೂ ಭೇಟಿ ನೀಡಲಿದ್ದಾರೆ. ಅಂದು ಬಹಿರಂಗ ಸಭೆ, ರೋಡ್ ಶೋ ನಡೆಯಲಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕಾಶಿನಾಥ ನಿಧನಕ್ಕೆ ಸಂತಾಪ ಕನ್ನಡ ಚಿತ್ರೋದ್ಯಮ ಕಂಡ ಯಶಸ್ವಿ ನಾಯಕ ಹಾಗೂ ನಿರ್ದೇಶಕ ತಮ್ಮದೇ ಮ್ಯಾನರಿಸಂನಿಂದ ಖ್ಯಾತಿಗಳಿಸಿದ್ದ ಕಾಶಿನಾಥ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂಸದ
ಡಾ| ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು