ಭಕ್ತಿಯಿದ್ದಡೆ ಭಗವಂತ: ಕಾಶಿ ಜಗದ್ಗುರು


Team Udayavani, Mar 20, 2018, 11:02 AM IST

gul-1.jpg

ವಾಡಿ: ಶ್ರದ್ಧಾ ಭಕ್ತಿಯಿಂದ ಪೂಜಿಸುವ ಸ್ಥಳದಲ್ಲಿ ದೇವರಿದ್ದಾನೆ. ಪಾಪ ಕರ್ಮಗಳ ಪ್ರಾಯಾಶ್ಚಿತಕ್ಕೆ ಗುರುಕೃಪೆಯೇ ಮದ್ದು ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಕೊಲ್ಲೂರ ಗ್ರಾಮದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 12 ಜ್ಯೋತೀರ್ಲಿಂಗಗಳ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬೆಳಗಿನ ಪೂಜೆ ಶಿವನ ಸಾನ್ನಿಧ್ಯಕ್ಕೆ ಅರ್ಪಿಸುವುದು ನಿತ್ಯದ ಕಾಯಕವಾಗಬೇಕು. ಶಿವಲಿಂಗದ ದರ್ಶನ ಶಿವನ ಒಲಿಕೆಗೆ ಮಾರ್ಗವಾಗಿದೆ. ನಿಶ್ಚಲವಾದ ಪಾವಿತ್ರ್ಯದ ಮನಸ್ಸು ಶಿವನಿಗೆ ನೈವೇದ್ಯ. ಧರ್ಮ ಸಂಸ್ಕಾರ ಜಾಗೃತಿಯಿಂದ ಸಮಾಜದ ಪ್ರಗತಿ ಸಾಧ್ಯವಿದೆ. ಬದುಕಿನಲ್ಲಿ ಆಧ್ಯಾತ್ಮದ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮನಸ್ಸುವ ಕಟ್ಟುವ ಕಾರ್ಯ ಮಾಡಬೇಕಾದವರು ಒಡೆಯಲು ನಿಲ್ಲಬಾರದು. ಧರ್ಮದ ವಿಚಾರಗಳನ್ನು ಎತ್ತಿ ಹಿಡಿದು ಮನುಷ್ಯ ಪ್ರೀತಿಗೆ ಪಾತ್ರರಾಗಬೇಕು. ದೇವಾಲಯಗಳು ಭಕ್ತಿಯ ಪ್ರತೀಕ. ದೇವರ ಮಹಾಶಕ್ತಿಯನ್ನೇ ನಂಬಿ ಬದುಕುವ ಕಟ್ಟುತ್ತಿರುವ ಕೋಟ್ಯಂತರ ಜನಕ್ಕೆ ಜೀವಪರ ಸಂಸ್ಕಾರ ನೀಡುವುದು ಧರ್ಮ ಸಿದ್ಧಾಂತವಾಗಿದೆ. 

ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಮಾನವ ಧರ್ಮವಾಗಿದೆ. ಚಿಂತನೆಗಳ ಹೆಸರಿನಲ್ಲಿ ಧರ್ಮ ಒಡೆಯುವ ಹುನ್ನಾರ ನಡೆದಿದ್ದು, ಎಚ್ಚರವಾಗಿರಬೇಕು ಎಂದು ನುಡಿದರು. ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. 

ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಐದು ದಿನಗಳಿಂದ ಕಾಶಿ ಸ್ವಾಮೀಜಿಗಳ ತಂಡದಿಂದ ಹೋಮ, ಹವನ, ಯಾಗಗಳು ನಡೆಸಿ 12 ಜ್ಯೋತೀರ್ಲಿಂಗ ಹಾಗೂ ನವಗೃಹಗಳ ಪ್ರತಿಷ್ಠಾಪನೆ ನಡೆಯಿತು. ಮುಸ್ಲಿಂ ಸಮುದಾಯಕ್ಕೆ ಸೇರಿದ ಕೊಲ್ಲೂರ ಗ್ರಾಮದ ಭಾಷುಮಿಯ್ನಾ ದಿಡ್ಡಿಮನಿ ಎಂಬ ಭಕ್ತ ಕಾಶಿಯಿಂದ ಶಿವಲಿಂಗ ಹೊತ್ತು ತಂದು ಭಕ್ತಿ ಮೆರೆದರು. ಕಾಶಿ ಜಗದ್ಗುರುಗಳ ಪಾದ ಪೂಜೆ ಮಾಡಿ ಗಮನ ಸೆಳೆದರು. 

ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶರಣಗೌಡ ಹಿರೆಡ್ಡಿ, ಶರಣು ಸಾಹುಕಾರ ಬಿರಾಳ, ಸಂಗಾರೆಡ್ಡಿ ಹೋತಪೇಟೆ, ಲಿಂಗಾರೆಡ್ಡಿಗೌಡ ಪೊಲೀಸ್‌ಪಾಟೀಲ, ಸಾಹೇಬಗೌಡ ಪೊಲೀಸ್‌ ಪಾಟೀಲ, ಶಿವುಕುಮಾರ ಪೂಜಾರಿ, ಶಾಂತಿನಾಥ ಹಿರೇಗೌಡ, ರಾಚಯ್ಯಸ್ವಾಮಿ ನಪುರಿ, ಕುಬೇಂದ್ರರೆಡ್ಡಿ ಕರೆಡ್ಡಿ, ಸಿದ್ದಣ್ಣ ಕುಲಕುಂದಿ, ಶರಣಗೌಡ ಕರೆಡ್ಡಿ, ಮಲ್ಲಿನಾಥ ಪೂಜಾರಿ, ಪ್ರವೀಣರೆಡ್ಡಿ ತಿಪ್ಪರೆಡ್ಡಿ, ಕೃಷ್ಣಾರೆಡ್ಡಿ ಈರೆಡ್ಡಿ, ಭಾಷುಮಿಯ್ನಾ ದಿಡ್ಡಿಮನಿ, ರುದ್ರುಗೌಡ ಯಾಳಗಿ, ಅರುಣಕುಮಾರ ಕುಡುಗುಂಟಿ, ಪ್ರವೀಣಕುಮಾರ
ಜೀರ್‌, ಶಂಕ್ರು ದೇಸಾಯಿ ಸೇರಿದಂತೆ ಸಾವಿರಾರು ಜನ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.