ಇಂದಿರಾ ಕ್ಯಾಂಟಿನ್ಗೆ ಯುವಕರ ಲಗ್ಗೆ
Team Udayavani, Feb 12, 2018, 10:20 AM IST
ಕಲಬುರಗಿ: ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ಆರಂಭವಾಗಿರುವ ಇಂದಿರಾ ಕ್ಯಾಂಟಿನ್ಗೆ ಎರಡನೇ ದಿನವಾದ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಗಮಿಸಿರುವುದು ಕಂಡು ಬಂತು. ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಿಂದ ಶನಿವಾರ ಉದ್ಘಾಟಿಸಲ್ಪಟ್ಟ ಇಂದಿರಾ ಕ್ಯಾಂಟಿನ್ ರವಿವಾರ ಮಧ್ಯಾಹ್ನ 12:30ಕ್ಕೆ ಪ್ರಾರಂಭವಾಯಿತು.
ಮಧ್ಯಾಹ್ನ 12:00ಕ್ಕೆ ಅನೇಕ ಯುವಕರು ಇಂದಿರಾ ಕ್ಯಾಂಟಿನ್ ಮುಂದೆ ಉಪಹಾರಕ್ಕಾಗಿ ಕಾಯ್ದು ನಿಂತರು. ಕ್ಯಾಂಟಿನ್ ಹೊರಗಡೆ ಗೇಟ್ ಮುಚ್ಚಿದ್ದರಿಂದ ಪಾದಾಚಾರಿ ರಸ್ತೆ ಮೇಲೆ ಕ್ಯಾಂಟಿನ್ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಾ ಕುಳಿತ್ತಿದ್ದರು.
ಸರಿಯಾಗಿ ಮಧ್ಯಾಹ್ನ 12:30ಕ್ಕೆ ದ್ವಾರ ತೆಗೆದಿದ್ದರಿಂದ ಯುವಕರ ಪಡೆಯು ಕ್ಯಾಂಟಿನ್ ಮುಂದೆ ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಉಪಾಹಾರ ಸೇವಿಸಿದರು. ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಆಟೋ ಚಾಲಕರಾಗಲಿ, ಕೃಷಿ, ಕೂಲಿ ಕಾರ್ಮಿಕರಾಗಲಿ ಆರಂಭದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬರಲಿಲ್ಲ. ರವಿವಾರ ರಾತ್ರಿ ಊಟಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ವಿಷಯ ಸಿಬ್ಬಂದಿಗಳಿಂದ ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ