ಆಹಾರ-ನೀರು ಅರಸಿ ಗುಳೆ ಬಂದ್ವು ಜಾನುವಾರುಗಳು

ಖಾಲಿ ಜಮೀನುಗಳಲ್ಲಿ ಟಿಕಾಣಿ

Team Udayavani, Jun 9, 2019, 11:09 AM IST

09-June-11

ಕಂಪ್ಲಿ: ದೇವಸಮುದ್ರ ಗ್ರಾಮ ಹತ್ತಿರದ ನೀರಿಲ್ಲದ ಕಾಲುವೆಯಲ್ಲಿ ಕಂಡು ಬಂದ ಜಾನುವಾರಗಳ ಹಿಂಡು.

ಜಿ.ಚಂದ್ರಶೇಖರಗೌಡ
ಕಂಪ್ಲಿ:
ಈ ಬಾರಿಯ ಭೀಕರ ಬರಗಾಲ ತಾಲೂಕಿಗೆ ತಟ್ಟಿದೆ. ಆದರೂ ನೀರಾವರಿ ಪ್ರದೇಶವೆಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಆಹಾರ, ನೀರು ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ.

ಬರಕ್ಕೆ ಮತ್ತೂಂದು ಹೆಸರಾದ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮಗಳ ಸಾವಿರಾರು ಜಾನುವಾರುಗಳು ಕಂಪ್ಲಿ ಭಾಗದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಕೆರೆಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಕಂಪ್ಲಿ ಭಾಗದಲ್ಲಿ ಈಗಾಗಲೇ ಹಿಂಗಾರು ಹಂಗಾಮಿನ ಭತ್ತದ ಕಟಾವು ಬಹುತೇಕ ಮುಕ್ತಾಯಗೊಂಡಿದ್ದು, ಈ ಭತ್ತದ ಗದ್ದೆಯಲ್ಲಿ ಕಟಾವಿನ ನಂತರ ಉಳಿದ ಭತ್ತದ ಹುಲ್ಲು ಹಾಗೂ ಅಲ್ಲಲ್ಲಿ ಕಂಡು ಬರುವ ಹಸಿರು ಹುಲ್ಲನ್ನು ಮೇಯಲು ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ಜಾನುವಾರುಗಳು ಮಾಲೀಕರೊಂದಿಗೆ ಈ ಭಾಗಕ್ಕೆ ಬಂದಿವೆ.

ಸುಮಾರು 2ರಿಂದ 3 ತಿಂಗಳು ಕಂಪ್ಲಿ ಭಾಗದಲ್ಲಿಯೇ ಜಾನುವಾರುಗಳನ್ನು ಬೀಡು ಬಿಡುವ ಮಾಲೀಕರು ಹಗಲೆಲ್ಲಾ ಇಲ್ಲಿನ ವಿವಿಧ ಜಮೀನುಗಳಲ್ಲಿ ಜಾನುವಾರುಗಳನ್ನು ಮೇಯಿಸುವ ಅವರು ರಾತ್ರಿಯಾಗುತ್ತಲೇ ಗ್ರಾಮದ ಸಮೀಪದಲ್ಲಿಯೇ ಬೀಡು ಬಿಟ್ಟು ಹಸುಗಳ ಹಾಲನ್ನು ಕರೆದು ಸಮೀಪದಲ್ಲಿರುವ ಗ್ರಾಮದಲ್ಲಿ ಅವಶ್ಯವಿರುವವರಿಗೆ ಮಾರಿ ಅದರಿಂದ ಬರುವ ಹಣದಲ್ಲಿಯೇ ತಮ್ಮ ದೈನಂದಿನ ಜೀವನ ಸಾಗಿಸುತ್ತಾ ಕಾಲ ಕಳೆಯುತ್ತಾರೆ.

ಕೊಪ್ಪಳದಲ್ಲಿ ಮಳೆಗಾಲದಲ್ಲಿ ಮಾತ್ರ ಉತ್ತಮ ಮಳೆಯಾದರೆ ಜಾನುವಾರುಗಳಿಗೆ ಹುಲ್ಲು ಹಾಗೂ ನೀರು ಸಿಗಲಿದ್ದು, ಬೇಸಿಗೆ ಕಾಲದಲ್ಲಿ ಮೇವಿನ ಜತೆಗೆ ನೀರಿನ ಅಭಾವವು ಕಾಡಲಿದ್ದು, ಕಂಪ್ಲಿ ಭಾಗದಲ್ಲಿ ಹಸಿರು ಹುಲ್ಲು ಹಾಗೂ ನೀರು ಸಮೃದ್ಧವಾಗಿರುವುದರಿಂದ ಬೇಸಿಗೆ ಕಾಲದ ಸುಮಾರು ಮೂರು ತಿಂಗಳು ಕಾಲ ಈ ಭಾಗಕ್ಕೆ ಬರುತ್ತೇವೆ. ಮಳೆಗಾಲ ಶುರುವಾದರೆ ಪುನಃ ಗ್ರಾಮಗಳಿಗೆ ಹಿಂತಿರುಗುತ್ತೇವೆ ಎನ್ನುವ ಕೊಪ್ಪಳ ಜಿಲ್ಲೆ ಬೂದಗುಂಪ ಭಾಗದ ಅನೇಕ ಹಳ್ಳಿಗಳಿಂದ ಬಂದಿರುವ ಯಮನಪ್ಪ, ಯಂಕಪ್ಪ ಹಾಗೂ ಪಂಪಣ್ಣ ಹಾಗೂ ಇತರರು ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಈ ಭಾಗಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತೇವೆ.

ಈ ಭಾಗದ ರೈತರು ನಿಜಕ್ಕೂ ಯಾವುದೇ ತೊಂದರೆ ನೀಡುತ್ತಿಲ್ಲ. ಉತ್ತಮ ಸಹಕಾರ ನೀಡುತ್ತಿದ್ದಾರೆ. ಯಾಕೆಂದರೆ ಈ ಭಾಗದ ರೈತರ ಜಮೀನುಗಳಲ್ಲಿ ಬೀಡು ಬಿಡುವ ಜಾನುವಾರುಗಳಿಂದ ಸಗಣಿ, ಗಂಜಲ ಬೀಳುವುದರಿಂದ ಜಮೀನುಗಳಿಗೂ ಗೊಬ್ಬರ ಸಿಗುತ್ತದೆಯಾದ್ದರಿಂದ ಇಲ್ಲಿ ನಮಗೆ ಯಾವ ತೊಂದರೆಯೂ ಇಲ್ಲ ಜತೆಗೆ ಜಾನುವಾರುಗಳನ್ನು ಜಮೀನುಗಳಲ್ಲಿ ಬೀಡು ಬಿಡುವುದರಿಂದ ಜಮೀನಿನ ಮಾಲೀಕರು ಅಲ್ಪ ಸ್ವಲ್ಪ ಹಣ ನೀಡುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವರ್ಷ ಕಂಪ್ಲಿ ಭಾಗದಲ್ಲಿಯೂ ಸಹಿತ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಈ ಭಾಗದಲ್ಲಿ ಇದೀಗ ನೀರು ಮತ್ತು ಮೇವಿನ ಕೊರತೆಯಾಗಿರುವುದರಿಂದ ನಾವು ಯಾವ ಕಡೆ ಹೋಗಬೇಕೆನ್ನುವುದು ತಿಳಿಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜಾನುವಾರುಗಳು ಆಹಾರ ಹಾಗೂ ನೀರನ್ನು ಅರಸಿ ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ. ದುರಾದೃಷ್ಟವಶಾತ್‌ ಈ ವರ್ಷ ಕಂಪ್ಲಿ ಭಾಗದಲ್ಲಿ ಇದುವರೆಗೂ ಒಂದು ಮಳೆಯೂ ಆಗಲ್ಲ. ಮಳೆ ಆರಂಭವಾಗುತ್ತಿದ್ದಂತೆಯೇ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಕೂಲಿ ಕೆಲಸವಿಲ್ಲವೆಂದು ವಿವಿಧ ಗ್ರಾಮಗಳ ಜನತೆ ಬೇರೆ ಊರುಗಳಿಗೆ ಕೂಲಿ ಕೆಲಸಕ್ಕಾಗಿ ಗುಳೆ ಹೋಗುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಈ ಭಾಗಕ್ಕೆ ಗುಳೆ ಬಂದಿದೆ.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.