48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತ
Team Udayavani, Mar 7, 2019, 1:00 AM IST
ಮಂಜೇಶ್ವರ: ಪಾವೂರು ಕೊಪ್ಪಳದ ಶಿವಪುರ ಶ್ರೀ ಮಹಾ ಮೃತ್ಯುಂ ಜಯೇಶ್ವರ ದೇವಸ್ಥಾನದಲ್ಲಿ ಮಾ. 4 ಸೊಮವಾರದಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ 48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ವ್ರತಾನುಷ್ಠಾನರಾಗಿದ್ದು, ಮಂಗಳವಾರ ಬೆಳಗ್ಗೆ ಗಣಪತಿ ಹವನ ಅನಂತರ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ ಮುಂದುವರಿಯಿತು.
ಈ ಸಂದರ್ಭದಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತರು ನಾಮ ಜಪ ಮಾಡಿದರು. ಸಂಜೆ ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನ ಮಂಡಳಿಯವರು ಭಜನ ಸಂಕೀರ್ತನೆ ನಡೆಸಿದರು. ಸಂಜೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅಥಿತಿಯಾಗಿ ವರ್ಕಾಡಿ ಕಾವೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ರೈ ವರ್ಕಾಡಿ ಮಾತನಾಡಿದರು. ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಸಂಜೀವ ಶೆಟ್ಟಿ ಮಾಡ, ಶ್ರೀಧರ ಶೆಟ್ಟಿ ಪಾವೂರು ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ ಗಣಪತಿ ಹವನ, ಪುಂಡರೀಕಾಕ್ಷ ಅವರಿಂದ ಮೌನವ್ರತ, ಭಕ್ತರಿಂದ 2 ಲಕ್ಷ ನಾಮಜಪ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಸುಂಕದಕಟ್ಟೆ ವರ್ಕಾಡಿ ತಂಡ ದಿಂದ ಭಜನಾ ಸಂಕೀರ್ತನೆ, ಸತ್ಸಂಗ ನೆರವೇರಿತು. ಈ ಸಂದರ್ಭ ಡಾ| ಕೆ.ಎಸ್.ಶಂಕರ ಹೊಳ್ಳ ಕೋಡಿ ವರ್ಕಾಡಿ, ಸುಬ್ಬ ಗುರುಸ್ವಾಮಿ, ಗೋಪಾಲ ಶೆಟ್ಟಿ ಅರಿಬೈಲು, ಲಕ್ಷ್ಮೀನಾರಾಯಣ ಭಟ್ ಕೋಳ್ಯೂರು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ